Wednesday, April 1, 2009

ಅದೂ ನಮ್ಮ ಮೂಲ ನಂಬಿಕೆಯ ಪ್ರಶ್ನೆ ಬಂದಾಗ?

ಪ್ರಶ್ನೆ ಕಾಡುತ್ತಿದೆ. ಉತ್ತರ ಗೊತ್ತಿದ್ದರೂ ಶಾಲೆಯ ಕೆಂಪು ಕಣ್ಣಿನ ನ ಮೇಷ್ಟರ ಮುಂದೆ ನಿಂತು ತತ್ತರಿಸಿದ್ದ ಅಂದಿನ ವ್ಯೆಯುಕ್ತಿಕ ಭಯವಿಂದು ಒಂದು ಸಮಾಜದ ಭಯವಾಗಿದೆಯಾ? ಎಂದೆನಿಸುತ್ತದೆ. ನಾವ್ಯಕೆ ನಿದ್ದೆ ಮಾಡುತ್ತಿರುವವರ ಹಾಗೆ ನಟಿಸುತ್ತಿದ್ದೇವೆ? ಅದೂ ನಮ್ಮ ಮೂಲ ನಂಬಿಕೆಯ ಪ್ರಶ್ನೆ ಬಂದಾಗ?
ಲೆಕ್ಕಕ್ಕೆ ಸಿಗುವಂತೆ ೩,೦೦೦ ದೇಗುಲಗಳನ್ನು ಹಿಂದುಗಳು ಕಳೆದುಕೊಂಡಿದ್ದಾರೆ. ಒಂದು ಹಿಡಿ ಮಣ್ಣಿಗಾಗಿ ನಾವೇ ಅಣ್ಣ ತಮ್ಮಂದಿರು ಕತ್ತಿ ಹಿಡಿದು ಕಾಳಗ ಮಾಡುತ್ತೇವೆ. ಕೋಟ್
ಜೀವನಪೂರ್ತಿ ಅಲೆಯುತ್ತೇವೆ. ಅತ್ತ ಚೀನಾ ಇಡೀ ಅರುಣಾಚಲ ಪ್ರದೇಶವನ್ನೇ ತನ್ನೋಳಗೆ ನುಂಗಿಕೊಳ್ಳವ ಪ್ರಯತ್ನ ಮಾಡುತ್ತಿದೆ. ತಾಜ್ ಮಹಲ್ ಮೂಲತ; ಶಿವ ದೇವಾಲಯವಾಗಿತ್ತು ಎಂದಾಗ ಯಾವುದೇ ತನಿಖೆ ನಡೆಸದೆ ಆ ಸತ್ಯವನ್ನು ಮರೆಮಾಡಿ ನಮಗೆ ಹೇಳುವ ಬುದ್ದಿಮಾತು ಸಾಮಾಜಿಕ ಸೌಹಾರ್ದತೆ. ಆದರೆ ಎದು ಎಷ್ಟರವರೆಗೆ? ಪ್ರತಿಯೊಂದಕ್ಕೂ
ಕೊನೆಯಿದೆಯಂತೆ! ಆದರೆ ಹಿಂದುಗಳ ನಂಬಿಕೆಯ ಮೇಲಿನ ದಾಳಿಗೆ ಕೊನೆ ಯಾವಾಗ? ಇದು ಕೊನೆಗೊಳ್ಳುವಾಗ ನಮ್ಮ ಸಂಸ್ಕ್ರತಿಯೇ ಕೊನೆಯಾಗಿರಬಹುದಾ? ಯೋಚಿಸಲು ಹೊರಟರೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಏಳತ್ತಲೆ ಇರುತ್ತದೆ.
ಅನೇಕ ಬಾಹ್ಯ ಅಕ್ರಮಣಗಳಿಗೆ ಸಡ್ಡು ಹೊಡೆದು ಉಳಿದ ಸಂಸ್ಕ್ರತಿ ಭಾರತದ್ದು. ಈ ಆಕ್ರಮಣಗಳನ್ನು ನಾವು ಕರಗಿಸಿ ಅರಗಿಸಿಕೊಂಡಿದ್ದೇವೆ. ವಾಸ್ತವವಾಗಿ ಈ ದಾಳಿಗಳು ನಮ್ಮನ್ನು ಅಂತರಿಕವಾಗಿ ಬಲಿಷ್ಠಗೊಳ್ಳಲು ಸಹಾಯ ಮಾಡಿದವು. ನಮ್ಮಲ್ಲೊಂದು ಒಗ್ಗಟ್ಟು, ಹೋರಾಟದ ಕೆಚ್ಚು ಮತ್ತು ಸಮಾನತೆಯ ಅಗತ್ಯತೆಯನ್ನು ತೋರಿಸಿಕೊಟ್ಟಿತು. ಮೂಢನಂಬಿಕೆಗಳಿಂದ ಆಗುವ ಅನಾಹುತಗಳನ್ನು ತೆರೆದಿಟ್ಟಿತು. ತಕ್ಷಣ ಕಾರ್ಯಪ್ರವ್ರತ್ತವಾದ ಸಮಾಜ ಅದಕ್ಕೊಂದು ಮೂಲಿಕೆ ಕಂಡುಹಿಡಿಯಿತು. ಇದು ನಿಧಾನವಾಗಿ ಪರಿಣಾಮ ಬೀರುತ್ತಿರುವಾಗ ಬ್ರಿಟಿಷ್ ಆಕ್ರಮಣವಾಯಿತು. ಅವರು ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡಿದರು. ಪುನ: ಸಮಾಜ ಅಂಧಕಾರದತ್ತ ನಡೆದಾಗ ಹತ್ತಾರು ಧಾರ್ಮಿಕ ಮುಖಂಡರು ಸಮಾಜಕ್ಕೆ ಬೆಳಕು ನೀಡುವ ಪ್ರಯತ್ನ ಮಾಡಿದರು.ಇದರಿಂದ ಹಿಂದೂ ಸಮಾಜ ಪುನಶ್ಚೇತನಗೊಂಡಿತು.
ಕೆಲವು ಧರ್ಮಗಳು ಬದಲಾವಣೆಗೆ ಒಳಗಾಗುವುದೇ ಇಲ್ಲ. ಕೆಲವು ಸಂದರ್ಭಗಳಲ್ಲಿ ಇದು ಸಕಾರಾತ್ಮಕ ಎಂದೆನಿಸಿಕೊಳ್ಳುತ್ತದೆ. ಆದರೆ ಹಿಂದೂ ಸಮಾಜದಲ್ಲಿ ಬದಲಾವಣೆ ಬಹಳ ನಿಧಾನ ಪ್ರಕ್ರಿಯೆ. ಈ ಬದಲಾವಣೆಗಳು ಮುಡಿಯಿಂದ ಅಡಿಗೆ ಬರುವಾಗ ಶತಶತಮಾನಗಳೇ ಉರುಳಿ ಹೋಗಿರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಹಿಂದೂ ಧರ್ಮದ ಮೇಲೆ ಅಂತರಿಕ ಆಕ್ರಮಣ ಅಥವಾ ಮತಾಂತರವಾಗುತ್ತಿದೆ.
ನಮ್ಮ ಸಂಸ್ಕ್ರತಿಯ ಆಶಯಗಳನ್ನು ಉಳಿಸಿಕೊಂಡು ಕಾಲದ ಹರಿವಿನಲ್ಲಿ ಹಿಂದೂ ಧರ್ಮದೊಂದಿಗೆ ಸೇರಿಕೊಂಡ ಕಲ್ಮಶಗಳನ್ನು ಹೊರಗಟ್ಟುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕು. ಆಗ ವ್ಯವಸ್ಥೆಯಲ್ಲಿ ಆತ್ಮವಿಶ್ವಾಸ ಲಾಸ್ಯವಾಡುತ್ತದೆ. ನಿದ್ರೆ ಮಾಡುವವರಂತೆ ನಟಿಸಬೇಕಾದ ಜರೂರತ್ತು ಇರುವುದಿಲ್ಲ, ’ವೋಟ್ ಬ್ಯಾಂಕ್’ ರಾಜಕೀಯ ತನ್ನಿಂದ ತಾನೆ ಕೊನೆಗೊಳ್ಳುತ್ತದೆ. ಹಿಂದೂ
ಸಮಾಜವನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗೂ ಇ(ಬ)ರುವುದಿಲ್ಲ. ಆಗ ನೈಜಾರ್ಥದ ಸಮಾನತೆ ಒಡಮೂಡುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜ್ಯೆನ. ಬೌದ್ಧರು, ಪಾರ್ಸಿ. ಸಿಖ್ಖರು ಸೌಹಾರ್ದತೆಯಿಂದ ಬಾಳುತ್ತಾರೆ. ದೇಶದ ಉಳಿವಿಗಾಗಿ ಹೋರಾಡುತ್ತಾರೆ. ಅದು ’ಸಹಜ’ ಸಾಮರಸ್ಯ. ಮತಬ್ಯಾಂಕ್ ಗಳಾಗಿರುವ ಧರ್ಮಗಳನ್ನು ಓಲೈಕೆ ಮಾಡಿ ತಾವು ದೇಶದ ಜಾತ್ಯತೀತತೆ ಉಳಿಸುತ್ತಿದ್ದೇವೆ ಎನ್ನುವುದು ತೀರಾ ಅಸಹಜ ಮತ್ತು ಬಾಲಿಶ. ಇದು ಒಂದು ಧರ್ಮದ ಜನರಲ್ಲಿ ಭಯ ಮೂಡಿಸುತ್ತದೆ. ಭಯ ಇರುವಲ್ಲಿ ಅಪಾಯ, ದಂಗೆಯೇಳುವಿಕೆ, ಆಕ್ರಮಣಶೀಲತೆ ಮುಂತಾದ ಲಕ್ಷಣಗಳಿರುತ್ತವೆಯೇ ಹೊರತು ನಂಬಿಕೆ, ವಿಶ್ವಾಸ, ಪರಸ್ಪರ ಗೌರವ ಇರಲು ಸಾಧ್ಯನಾ? ಅದರಲ್ಲೂ ಬಹುಸಂಖ್ಯಾತರ ವಿರೋಧ ಕಟ್ಟಿಕೊಳ್ಳುವುದು ಪೆಟ್ರೋಲ್ ಸುರಿದು ಬೆಂಕಿ ಪೊಟ್ಟಣದಿಂದ ಬೆಂಕಿಕಡ್ಡಿ ಗೀಚುವುದು ಸಮ.

No comments: