Sunday, April 5, 2009

ವರುಣ್ ಹೇಳಿದ್ದು ಸರಿಯಾಗಿದೆ ಕಾರಣ ಜಾತ್ಯತೀತರು ಅವರನ್ನು ಟೀಕಿಸುತ್ತಿದ್ದಾರೆ!

ರಾಜಕಾರಣ ’ಮೂರನ್ನು’ ಬಿಟ್ಟು ಸಾಕಷ್ಟು ವರ್ಷಗಳೇ ಸಂದಿವೆ. ರಾಜಕೀಯಕ್ಕೂ ಒಳ್ಳೆಯತನಕ್ಕೂ ಹಿಂದಿನಿಂದಲೂ ಎಣ್ನೆ ಸೀಗೆ ಸಂಬಂಧ. ಅದರ ಜನರೂ ಕನಿಷ್ಟ ಅಷ್ಟೋ ಇಷ್ಟೋ ಒಳ್ಳೆಯತನವನ್ನು ರಾಜಕಾರಣಿಗಳಿಂದ ನಿರೀಕ್ಷಿಸುತ್ತಿದ್ದರು. ಆದರೆ ಈಗ ಆ ನಿರೀಕ್ಷೆಯಿಂದಲೂ ದೂರ ಸರಿಯುತ್ತಿದ್ದಾರೆ.
ಹೌದು, ಇದಕ್ಕಿಂತ ಹೊಣೆಗೇಡಿತನ, ಅನೈತಿಕ ಮತ್ತು ಬೇಜವಾಬ್ದಾರಿ ರಾಜಕಾರಣ ಇರಲು ಸಾಧ್ಯಾನಾ? ಕೇಂದ್ರ ಸರ್ಕಾರ ೫೦,೦೦೦ ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ನರೇಂದ್ರ ಮೋದಿಯವರ ಅರೋಪದ ಬಗ್ಗೆ ಯಾರೂ ಉತ್ತರಿಸುತ್ತಿಲ್ಲ, ಅದೂ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವೂ ಅಗಿಲ್ಲ. ಆದರೆ ವರುಣ್ ಗಾಂಧಿ ಹೇಳಿದ ಆ ಒಂದು ಮಾತು...!
ವರುಣ್ ಗಾಂಧಿ ಹೇಳಿದ್ದದರು ಏನು? "ಹಿಂದೂಗಳ ವಿರುದ್ಧ ಎತ್ತುವ ಕೈಯನ್ನು ಕಡಿಯಬೇಕು" ಎಂದು ತಾನೆ? ಅದರಲ್ಲಿ ತಪ್ಪೇನಿದೆ? ಅದು ಮುಸ್ಲಿಮರದ್ದೆ ’ಕೈ’ಯೆಂದು ನಾವು ಹೇಗೆ ನಿರ್ಧಾರಕ್ಕೆ ಬರುವುದು? ಅದು ಮುಸ್ಲಿಮರದ್ದೆ ’ಕೈ’ ಎಂಬ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅವರು ಅಂದರೆ ಮುಸ್ಲಿಮರು ಹಿಂದೆ ಹಿಂದೂಗಳ ವಿರುದ್ಧ ’ಕೈ’ ಮಾಡಿರಬೇಕು ತಾನೆ? ಇದೆಲ್ಲದಕ್ಕಿಂತ ಮುಖ್ಯವಾಗಿ ಮುಸ್ಲಿಮರ ವಿರುದ್ಧವೇ ಈ ಮಾತು ವರುಣ್ ಬಾಯಿಂದ ಬಂದಿದೆ ಎಂದೆನ್ನುವುದಾದರೆ ಅದೂ ಮುಸ್ಲಿಮರು ಹಿಂದೂಗಳ ಮೇಲೆ ’ಕೈ’ಯೆತ್ತಿದ ನಂತರ ಅವರ ’ಕೈ’ ಕಡಿಯಬೇಕು ಎಂದು ಅವರು ಹೇಳಿದ್ದು ತಾನೆ? ಅಂದರೆ ಮುಸ್ಲಿಮರು ಹಿಂದೂಗಳ ವಿರುದ್ದ ’ಕೈ’ಯೆತ್ತದಿದ್ದಾರೆ ಅವರ ’ಕೈ’ ಕಡಿಯುವುದಿಲ್ಲ ಎಂಬುದೂ ಕೂಡ ಅಲ್ಲೇ ಸ್ಪಷ್ಟವಾಗಿದೆ. ಅದ್ದರಿಂದ ಇಲ್ಲಿ ರಾಷ್ಟ್ರದ ಭದ್ರತೆಗೆ ಹಾನಿಯಗುವಂತದ್ದು ಏನಿಲ್ಲ ತಾನೆ? ಆದರೆ ಹಿಂದೂಗಳ ವಿರುದ್ಧ ಮುಸ್ಲಿಮರೂ ’ಕೈ’ಯಿತ್ತಿದ್ದರೂ ಸುಮ್ಮನಿರಬೇಕು ಎಂದು ಬಯಸುವುದು ಯಾವ ಸೀಮೆ ನ್ಯಾಯ?
ವರುಣ್, ಯೂ ಅರ್‍ ರೈಟ್.
ವರುಣ್ ಹೇಳಿದ್ದು ಸರಿಯಾಗಿದೆ ಕಾರಣ ಕಾಂಗ್ರೇಸ್ ಮತ್ತು ಜಾತ್ಯತೀತರು ಅವರನ್ನು ಟೀಕಿಸುತ್ತಿದ್ದಾರೆ!
ವರುಣ್ ರ ಸೋದರಿ ಪ್ರಿಯಾಂಕ ವಾಧ್ರ ಭಗವದ್ಗೀತೆಯನ್ನು ಓದುವಂತೆ ವರುಣ್ ಗೆ ಸಲಹೆ ನೀಡಿದ್ದಾರೆ. ನನ್ನ ಪ್ರಶ್ನೆ, ಶ್ರೀಮತಿ ವಾಧ್ರ ಭಗವದ್ಗೀತೆಯನ್ನು ಓದಿದ್ದಾರಾ? ಓದಿದ್ದರೆ ಅದರಲ್ಲಿನ ಯಾವ ಅಂಶವನ್ನು ಪಾಲಿಸುತ್ತಿದ್ದಾರಂತೆ? ಅದರಲ್ಲಿ ಎಲ್ಲಾದರೂ ಧರ್ಮಕ್ಕೆ ಚ್ಯುತಿಯಾದಗ ಸುಮ್ಮನೇ ನೋಡುತ್ತಿರು ಎಂದಿದೆ ಅಂತೆಯಾ? ಭಗವದ್ಗೀತೆಯಾ ಮೂಲ ಇರುವುದೇ ಧರ್ಮ ಸಂಸ್ಥಾಪನೆಯ ಆಶಯದಲ್ಲಿ. ಅದು ಬಿಜೆಪಿ ಹೇಳುವ ಹಿಂದುತ್ವ ಅಲ್ಲದಿರಬಹುದು ಆದರೆ ಹಿಂದುತ್ವವೇ ಇಲ್ಲದಿದ್ದಾರೆ ಭಗವದ್ಗೀತೆ ಇರುತ್ತಾ? ವರುಣ್ ಗಾಂಧಿ ಉಳಿಸುತ್ತೇನೆ ಎಂದದ್ದು ಈ ಹಿಂದುತ್ವವನ್ನು, ಆ ಮೂಲಕ ಶ್ರೀಮತಿ ವಾಧ್ರ ಹೇಳುತ್ತಿರುವ ಭಗವದ್ಗೀತೆಯನ್ನು ಮತ್ತು ಅದರೊಂದಿಗೆ ಹೊಸೆದು ಕೊಂಡಿರುವ ಜೀವನ ಕ್ರಮವನ್ನು. ಆದರೆ ವಂಶದ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರಿಗೆ ಇದೆಲ್ಲ ಅರ್ಥವಾದರೆ ತಾನೆ?
ಇನ್ನು ಮಹಾಭಾರತದ ಶೈಲಿಯಲ್ಲೇ ಹೇಳಬೇಕಾದರೆ ಕಾಂಗ್ರೆಸ್ ದುಯೋ‌ðಧನನಂತೆ! ಅದು ಕ್ರಷ್ಣ ಮತ್ತು ಆಕ್ಷೋಹಿಣಿ ಸೈನ್ಯದ ಮಧ್ಯ ಆಯ್ಕೆ ಮಾಡುವುದು ಅಕ್ಷೋಹಿಣಿ ಸೈನ್ಯವನ್ನೇ! ಯಾಕೆಂದರೆ ಸಾವಿರಾರು ವೋಟ್ ಗಳಿವೆ ಅಲ್ವಾ?
ಇನ್ನು ವರುಣ್ ವಿರುದ್ಧ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಅಂದರೆ ಕಸಬ್, ರಶೀದ್ ಮಲ್ಬಾರಿ, ಅ‌ಫ್ಜಲ್ ಗುರುವಿಗೂ ವರುಣ್ ಗಾಂಧಿಗೂ ವ್ಯತ್ಯಾಸವೇ ಇಲ್ವಾ?
ಹಿಂದಿನ ಎನ್ ಡಿಎ ಸರ್ಕಾರ ರಚಿಸಿದ್ದ ಪೊಟಾ ಕಾಯ್ದೆ ದುರುಪಯೋಗವಾಗುತ್ತದೆ ಎಂದು ಬೊಬ್ಬಿರಿದವರು ಇಂದು ಎನ್ ಎಸ್ ಎಯನ್ನು ಸದುಪಯೋಗ ಪಡಿಸಿಕೊಳುತ್ತಿದ್ದಾರ? ತಮ್ಮ ದ್ವೇಷದ ರಾಜಕಾರಣಕ್ಕೆ ಅದನ್ನೆ ದಾಳವಾಗಿರಿಸಿಕೊಳುತ್ತಿರುವುದು ವಿಪರ್ಯಾಸವೆ ಸರಿ. ಇತ್ತ ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ ಎನ್ನುವವರು ಯಾವುದೇ ಹುದ್ದೆ ಅಲಂಕರಿಸಲು ಯೋಗ್ಯರಲ್ಲವೆಂದು ವರದಿ ಇದ್ದರೂ ನವೀನ್ ಚಾವ್ಲರನ್ನು ಮುಖ್ಯ ಹುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದು ಸಂವಿಧಾನ, ಪ್ರಜಾಪ್ರಭುತ್ವದ ಘನತೆ ಎತ್ತಿ ಹಿಡಿಯಲಾ? ಸದ್ದಾಂ ಹುಸೇನ್ ನ ಪೋಟೋ ಹಿಡಿದು ವೋಟ್ ಕೇಳುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದದ್ದ?
ಅದರೂ ಈ ಚುನಾವಣಾ ಸಂದರ್ಭದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹಿಂದುತ್ವ ವರುಣ್ ಗಾಂಧಿಯ ಹೇಳಿಕೆಗೆ ಸಿಕ್ಕ ಪ್ರತಿಫಲದಿಂದಾಗಿ ಪುನ: ಭೊರ್ಗರೆಯುವಂತಾಗಿದೆ. ನಾಳೆ ಹಿಂದುತ್ವದ ಬಗ್ಗೆ ಮಾತನಾಡಿದರೆ ನಮಗೂ ಎನ್ ಎಸ್‌ಎಯಡಿ ಶಿಕ್ಷೆ ಗ್ಯಾರಂಟಿ ಎಂಬ ಸ್ಥಿತಿ. ಬಿಜೆಪಿ ಇದನ್ನು ತನ್ನ ಅನುಕೂಲಕ್ಕಾಗಿ ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ತಾನು ಮಾಡಿದ ಖೆಡ್ಡಾಕ್ಕೆ ತಾನೇ ಬೀಳುತ್ತಿದೆಯೇನೋ ಅನಿಸುತ್ತಿದೆ.
ನನ್ನನ್ನು ಕಾಡುತ್ತಿರುವ ಬಹುದೊಡ್ಡ ಸಂಶಯವೆಂದರೆ ಈ ಇಡೀ ಪ್ರಕರಣ ವರುಣ್ ಗಾಂಧಿಯ ವಿರುದ್ಧದ ಸಂಚೋ ಅಥವಾ ಹಿಂದುತ್ವದ ವಿರುದ್ಧದ ಸಂಚೋ? ಕಾಲವೇ ಉತ್ತರಿಸಬೇಕಿದೆ.

1 comment: