ಓ, ಆ ಒಂದು ವರ್ಷ ಕಳೆಯಿತೇ?
ನಾನಂದು ಹುಟ್ಟುಹಬ್ಬ ಆಚರಿಸಿದ್ದೆನೇ?
ನೆನಪಾಗುತ್ತಿಲ್ಲ, ಏಕೆಂದರೆ
ನಾ ಅದನ್ನು ಮರೆತೇ ಇಲ್ಲ
ಮರೆತರೆ ತಾನೇ ನೆನಪಾಗುವುದು!
ನಾ ಸಾವಿಗೆ ೩೬೫ ದಿನಗಳಷ್ಟು ಹತ್ತಿರವಾದೆನೇ?
ದೇವರೇ ಎಂತಹ ವೇದನೆ?
ನಾ ಮಾಡಿದ್ದು ಬರಿ ಶೂನ್ಯ ಸಾಧನೆ
ಇನ್ನು ಮಾಡಬೇಕಿದೆ
ಮಹಾ ಸಾಧನೆ, ಜಗಮಾನ್ಯ ಸಾಧನೆ
ಅದಕ್ಕಾಗಿ ಈ ದಿನವೇ, ಈ ಕ್ಷಣವೇ
ನನ್ನ ಈ ಪ್ರತಿಜ್ಞೆ ಮುಂದಿನ ಯುಗ ನಂದೆನೇ!
ಯುಗದೊಳ್ ಜಗ ಅರಳಿತೇ?
ಜಗದೊಳ್ ಯುಗ ಅರಳಿತೇ?
ನನಗದು ಬೇಕಾಗಿಲ್ಲ
ಮೊಗದಲ್ಲಿ ನಗೆ ಅರಳಿ
ನಗೆಯೇ ಮೊಗವಾಗಲು
ಬೇರೊಂದು ಸುಖ ಬೇಕಾಗಿಲ್ಲ.
ರಾಷ್ಟ್ರದ ತೇರೆಳೆಯಲು
ಉಸಿರ ನಾದಸುಧೆ ಹರಿಯಬಿಡಲೇ?
ತಾಯೇ ಭಾರತಿ ನಿನ್ ಹೆಸರ
ದಿಕ್ಪಟಗಳಲ್ಲಿ ಅನುರಣಿಸಲೇ?
ನಿನ್ನೊಂದು ಕರೆಗೆ ಕ್ಷಣಾರ್ಧದೊಳು
ಓ ಗೊಡುವೆ, ಶತ್ರುಗಳ ರುಂಡ ಚೆಂಡಾಡಲು
ಧುಮ್ಮಿಕ್ಕುತ್ತ ಓಡುವೇ...
ದೀಪ ಆರಿಸಲೇ? ಇಲ್ಲ, ಉರಿಸಲೇ?
ಉರಿಸೇ ಉರಿಸುವೆ ನಾ ದೀಪ
ಸುಟ್ಟುಹೋಗಬೇಕು ಅರೆಬೆಂದ
ತಿಂಡಿತೀರ್ಥ, ಕರಗಬೇಕು
ಒಳ್ಳೆಯದಕ್ಕಿರುವ ಕೆಟ್ಟದರ ಲೇಪ.
ಜ್ಞಾನದೀಪ, ಅರಿವದೀಪ,
ಪ್ರಾಯದೀಪ, ಪ್ರೇಮದೀಪ
ಉರಿಯುತ್ತಲೇ ಇರಬೇಕು
ಬೆಳಕ ಸೂಸುತ್ತಲೇ ಬಾಳಬೇಕು
ತಾ ಉರಿದು ನೊಂದರು ಜಗಕ್ಕೆ
ಜ್ಯೋತಿಯಾಗಬೇಕು.
ಗರಿಕೆ ಹುಲ್ಲ ಮೇಲಿನ ಇಬ್ಬನಿ
ಆ ನೇಸರನ ತಾಪದೊಳು ಮರಣಿ
ಹಾಗಾಗಬಾರದು ನನ್ನಯ ಬದುಕು
ಕೇಳು ನನ್ನಯ ರಾಣಿ,
ಆಗಬೇಕು ಅದು ಸಾವಿರ ವರುಷವಾದರೂ
ಜನಮಾನಸದಿ ರಿಂಗಣಿಸೊ
ಬಾಳ ಸರಣಿ
ಆ ನೀಳಬಾನದೊಳ್
ಸ್ವಚ್ಛಂದವಾಗಿ ಹಾರೋ ಅರಗಿಣಿ.
ಅನನ್ಯ ಪ್ರೀತಿಗಾಗಿ ಅದಮ್ಯ ಒಳತುಡಿತ
ಬಾಳ ಪರಿಶುಭ್ರತೆಗಾಗಿ ಪ್ರಬುದ್ಧ ನಡೆತ
ಆ ಕಾವ್ಯಕನ್ನಿಕೆಯ ಕೈಯೊಳ್ ಹಿಡಿದು
ಎದೆಯ ರಂಗಸ್ಥಳದಿ ನಡೆಸುವೇ ಕುಣಿತ
ಬದಲಾಯಿಸುವೇ ನಾ ಜಗದ
ವ್ಯವಹಾರ ಗಣಿತ!
Saturday, April 23, 2011
Saturday, April 2, 2011
ಯಡಿಯೂರಪ್ಪ ಆಟಕ್ಕೆ ಅಂಕೆಯಿಲ್ಲ, ಭಿನ್ನಮತೀಯ ಚಟುವಟಿಕೆಗೆ ಕೊನೆಯೂ ಇಲ್ಲ!
(ಈ ಲೇಖನ ನಮ್ಮ ಪತ್ರಿಕೆ ’ದ ಸಂಡೆ ಇಂಡಿಯನ್’ನಲ್ಲಿ ಪ್ರಕಟಿತ)
ಅಕ್ರಮ ಗಣಿಗಾರಿಕೆ, ಬಿಡಿಎ ಹಗರಣ, ಕೆಐಎಡಿಬಿ ಹಗರಣ, ಪ್ರೇರಣಾ ಟ್ರಸ್ಟ್ ದೇಣಿಗೆ ವಿವಾದ, ಪ್ರವಾಹ ಪೀಡಿತರಿಗೆ ಸೂರು ನೀಡುವ ಆಸರೆ ಯೋಜನೆಯಲ್ಲಿನ ವಿಫಲತೆ, ಅಧಿಕಾರ ದುರುಪಯೋಗ, ಸಂವಿಧಾನ ಬಾಹಿರ ಚಟುವಟಿಕೆಗಳು, ಸ್ವಜನ ಪಕ್ಷಪಾತ, ಗುಂಪುಗಾರಿಕೆ... ಹೀಗೆ ಸಾಲು ಸಾಲು ಆರೋಪಗಳಿಗೆ ತುತ್ತಾದರೂ ಕೂಡ ಪದಚ್ಯುತಗೊಳ್ಳದ ದೇಶದ ಏಕೈಕ ಮತ್ತು ಪ್ರಪ್ರಥಮ ಮುಖ್ಯಮಂತ್ರಿ ಬಹುಶಃ ಯಡಿಯೂರಪ್ಪರೇ ಇರಬೇಕು.
ದಕ್ಷಿಣ ಭಾರತದಲ್ಲಿ ತನ್ನ ಅಧಿಕಾರದ ಖಾತೆಯನ್ನು ತೆರೆಯಬೇಕು ಎಂಬ ಬಿಜೆಪಿಯ ತುಡಿತವನ್ನು ಮೂರು ವರ್ಷಗಳ ಹಿಂದೆ ಸಾಕಾರಗೊಳಿಸಿದವರು ಯಡಿಯೂರಪ್ಪ. ಇದಕ್ಕಾಗಿ ಅವರು ಸುಮಾರು ೩ ದಶಕಗಳಿಗೂ ಹೆಚ್ಚಿನ ಕಾಲ ಅವಿರತವಾಗಿ ದುಡಿದಿದ್ದಾರೆ, ಹೋರಾಡಿದ್ದಾರೆ ಆ ಮೂಲಕ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಪೊರೆದಿದ್ದಾರೆ. ದಕ್ಷಿಣ ಭಾರತದ ಬೇರೆ ಯಾವುದೇ ರಾಜ್ಯದಲ್ಲೂ ಬಿಜೆಪಿಗೆ ಇಂತಹ ಒಬ್ಬ ಕಾರ್ಯಕರ್ತ ಸಿಗಲಿಲ್ಲ. ಅದ್ದರಿಂದ ದಕ್ಷಿಣದ ದೊಡ್ಡ ರಾಜ್ಯಗಳಾದ ಕೇರಳ, ತಮಿಳು ನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಬಿಜೆಪಿಗೆ ನೆಲೆ, ಬೆಲೆ ಎರಡೂ ಇಲ್ಲ. ಆದರೆ ತಮ್ಮಿಂದಲೇ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ, ತಾನಿಲ್ಲದೆ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅಸ್ತಿತ್ವವೇ ಇರುತ್ತಿರಲಿಲ್ಲ ಎಂಬ ಯಡಿಯೂರಪ್ಪರ ಭ್ರಮೆಗೆ ಸಿಲುಕಿ ರಾಜ್ಯದ ಬಿಜೆಪಿ ಮತ್ತದರ ಸಿದ್ಧಾಂತ ಚಿಂದಿ ಚಿತ್ರಾನ್ನವಾಗಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಎಂಬುದು ತಿರುಕನ ಕನಸಿನಂತಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇನ್ನೆರಡು ತಿಂಗಳಿ(ಮೇ ೨೮)ಗೆ ಮೂರು ವರ್ಷ ತುಂಬಲಿದೆ. ಆದರೆ ಈ ಮೂರು ವರ್ಷಗಳಲ್ಲಿ ಯಡಿಯೂರಪ್ಪ ಮಾಡಿದ ಸಾಧನೆ ಎಂದರೆ ಮಾತಿಗೊಂದರಂತೆ ಈಡೇರಿಸಲಾಗದ ಭರವಸೆ ನೀಡಿ, ಹೆಜ್ಜೆಗೊಂದರಂತೆ ಹಗರಣಗಳಲ್ಲಿ ಭಾಗಿಯಾಗಿ, ದಿನ ಬೆಳಗಾಗುತ್ತಲೇ ಸ್ವಪಕ್ಷೀಯರ ಜೊತೆ ಗುದ್ದಾಡಿ ಇನ್ನೂ ತಾನು ಮುಖ್ಯಮಂತ್ರಿಯಾಗಿ ಅಧಿಕಾರ ಉಳಿಸಿಕೊಂಡಿರುವುದು ಮಾತ್ರ.
ಯಡಿಯೂರಪ್ಪ ಜೆಡಿಎಸ್ ಬೆಂಬಲದೊಂದಿಗೆ ಮೊತ್ತ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು ನವೆಂಬರ್ ೨೦೦೭ರಲ್ಲಿ. ಅಂದು ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿಯ ಪರಮೋಚ್ಛ ನಾಯಕ ಎಲ್ ಕೆ ಅಡ್ವಾಣಿ ಅವರು, "ಈ ದಿನ ಅತಿ ಸಂತಸದ ದಿನ. ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ಆರಂಭವಾಗಿದೆ. ಇನ್ನೆಲ್ಲ ಶುಭವಾಗಲಿದೆ" ಎಂದಿದ್ದರು. ಆದರೆ ಇಂದು ಅಡ್ವಾಣಿಯವರೇ ಮುಖ ಕೊಟ್ಟು ಮಾತನಾಡಲಾಗದಷ್ಟು ಹೇಸಿಗೆಯನ್ನು ತಮ್ಮ ಪಕ್ಷದ ಮುಖಕ್ಕೆ ಯಡಿಯೂರಪ್ಪ ಬಳಿದಿದ್ದಾರೆ. ಇಂದಿಗೂ ಕೇಂದ್ರ ಸರ್ಕಾರದ ಅನಾಚಾರಗಳ ವಿರುದ್ಧ ಸಮರ ಸಾರಿರುವ ಬಿಜೆಪಿಗೆ ಯಡಿಯೂರಪ್ಪರ ಅಕ್ರಮಗಳೇ ಬಗಲ ಮುಳ್ಳಾಗಿದೆ. ಶುಭ ನುಡಿಯಲಿದೆ ಎಂದು ಬಿಜೆಪಿ ವರಿಷ್ಠರು ಮತ್ತು ರಾಜ್ಯದ ಜನತೆ ಭಾವಿಸಿದ್ದ ಹಕ್ಕಿ ಇಂದು ಒಂದರ ಮೇಲೊಂದರಂತೆ ಅಪಶಕುನದ ಸುದ್ದಿಗಳನ್ನೇ ನೀಡುತ್ತಿದೆ.
ಮಾರ್ಚ್ನ ಆರಂಭದಿಂದಲೇ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದವು (ವಾಸ್ತವವಾಗಿ ಬಿಜೆಪಿ ಗದ್ದುಗೆಗೆ ಬಂದಂದಿನಿಂದಲೇ ಈ ಚಟುವಟಿಕೆಗಳು ನಡೆಯುತ್ತಿವೆ). ಯಡಿಯೂರಪ್ಪ ನಮ್ಮ ನಾಯಕರು ಎಂದು ಹೇಳುತ್ತಲೇ ಪಕ್ಷದ ರಾಜ್ಯ ಅಧ್ಯಕ್ಷ ಕೆ ಎಸ್ ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ರೆಡ್ಡಿ ಸೋದರರು, ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಸಿ ಟಿ ರವಿ ಮುಂತಾದ ಘಟಾನುಘಟಿಗಳು ಅವರನ್ನು ಖೆಡ್ಡಾಕ್ಕೆ ಹಾಕಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು. ಮಾನ್ಯ ಮುಖ್ಯಮಂತ್ರಿಗಳು ಶಾಸಕ, ಸಚಿವರನ್ನು ಅತ್ಯಂತ ಕೀಳಾಗಿ ಕಂಡ ಅನೇಕ ಘಟನೆಗಳ ಜೊತೆಗೆ, ಅವರ ದರ್ಪ, ಸ್ವಜನ ಪಕ್ಷಪಾತ, ಭ್ರಷ್ಟತೆಗಳೆಲ್ಲ ಈ ಬಂಡುಕೋರ ಚಟುವಟಿಕೆಗೆ ಇಂಧನವಾಯಿತು. ಬಿಜೆಪಿಯ ಅನೇಕ ನಿಷ್ಠಾವಂತರೇ ಹೇಳುವ ಪ್ರಕಾರ ಈ ಬಂಡುಕೋರ ಚಟುವಟಿಕೆಗಳಲ್ಲಿ ಯಾವುದೇ ತಪ್ಪಿಲ್ಲವಂತೆ ಏಕೆಂದರೆ ಪಕ್ಷದಲ್ಲಿ ಕುದಿ ಜ್ವಾಲಾಮುಖಿ ಹುಟ್ಟಲು ಯಡಿಯೂರಪ್ಪರೇ ಕಾರಣವಂತೆ.
ರಾಜ್ಯದ ಲಿಂಗಾಯತ ಸಮುದಾಯಕ್ಕೆ ತಾನೊಬ್ಬನೆ ರಾಜಕೀಯ ನಾಯಕನಾಗಬೇಕು ಎಂಬ ಅವರ ಧೋರಣೆ ಮತ್ತದಕ್ಕಾಗಿ ಅವರು ಹೆಣೆದ ಯೋಜನೆಗಳು ಇಂದು ಅವರನ್ನು ಒಂಚೂರು ರಕ್ಷಿಸುತ್ತಿದೆ. ಅವರ ಈ ಸಂಚು ೧೯೯೯ರ ಹೊತ್ತಿಗೆ ಅಂದರೆ ದಶಕಗಳ ಹಿಂದೆಯೇ ಜನ್ಮತಾಳಿತ್ತು. ಅವರ ನಾಯಕನಾಗುವ ದಾಹಕ್ಕೆ ಮೊದಲ ಬಲಿ ಬಿ ಬಿ ಶಿವಪ್ಪರಾದರೆ ಅದರ ಫಲಾನುಭವಿಯಾಗಿದ್ದು ಈಗ ಯಡಿಯೂರಪ್ಪರ ವಿರುದ್ಧ ತೊಡೆ ತಟ್ಟಿ ನಿಂತಿರುವ ಜಗದೀಶ್ ಶೆಟ್ಟರ್! ಆದರೆ ಶೆಟ್ಟರ್ ಯಡಿಯೂರಪ್ಪರಿಗೆ ಸುಲಭ ತುತ್ತಾಗಲಾರರು. ಏಕೆಂದರೆ ಈ ಹಿಂದೆ ಯಡಿಯೂರಪ್ಪರ ಒಳನಡೆಗಳಿಗೆ ಅನಂತ್ ಕುಮಾರ್ರ ಆಶಿರ್ವಾದವಿದ್ದರೇ ಈಗ ಯಡಿಯೂರಪ್ಪರ ಹೆಡೆಮುರಿ ಕಟ್ಟಲು ಅನಂತ್ ಕುಮಾರ್ಗೆ ಶೆಟ್ಟರೇ ಅಸ್ತ್ರ. ಇದರ ಜೊತೆಗೆ ಈ ಹಿಂದೆ ಯಡಿಯೂರಪ್ಪರಿಗೆ ಪಕ್ಷದೊಳಗೆ ಒಂದು ರೀತಿಯ ಗೌರವ, ಅಭಿಮಾನಗಳಿದ್ದವು ಅವರು ಏನು ಮಾಡಿದರೂ ಪಕ್ಷದೊಳಿತಿಗಾಗಿ ಮಾಡುತ್ತಾರೆ ಎಂಬ ಭಾವನೆ ಇರುತ್ತಿತ್ತು. ಆದರೆ ಈಗ ಎಲ್ಲರಿಗೆ ಯಡ್ಡಿಯ ನಿಜ ಬಣ್ಣ ಗೊತ್ತಾಗಿದೆ. ಹಾಗೆಯೇ ಯಡ್ಡಿಗೂ ಹುಟ್ಟು ಬಿಜೆಪಿಗರ ಮೇಲೆ ನಂಬಿಕೆಯಿಲ್ಲ ಅದಕ್ಕಾಗಿಯೇ ಅವರು ತಮ್ಮ ಆಪ್ತ ವಲಯದಲ್ಲಿ ವಲಸಿಗರನ್ನೇ ತುಂಬಿಸಿಕೊಂಡಿದ್ದಾರೆ.
ಇದೀಗ ಬಂಡಾಯ ಚಟುವಟಿಕೆಗಳು ರಾಜ್ಯ ಬಿಜೆಪಿ ಪಾಲಿಗೆ ನಿತ್ಯ ಪ್ರಾರ್ಥನೆಯಾಗಿದೆ. ಆದರೆ ಈ ಬಾರಿಯ ಬಂಡಾಯ ಚಟುವಟಿಕೆಗಳು ಸಾಕಷ್ಟು ಕುತೂಹಲ ಮೂಡಿಸಿತ್ತು. ಇದಕ್ಕೆ ಕಾರಣ ಯಡಿಯೂರಪ್ಪರ ಒಂದ ಕಾಲತ್ತಿಲ್’ನ ಆಪ್ತ ಸ್ನೇಹಿತ, ಕೇಂದ್ರದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಅನಂತ್ ಕುಮಾರ್ ಮತ್ತು ಈಶ್ವರಪ್ಪ ಸ್ವತಃ ಈ ಬಂಡುಕೋರ ಚಟುವಟಿಕೆಯ ಮೂಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಎಂದಿನಂತೆ ರೆಡ್ಡಿ ಸೋದರರು ಇದಕ್ಕೆ ಕೋರಸ್’ ಹಾಡಿದ್ದರು. ಆದರೂ ಈ ಬಂಡಾಯ ಯಶಸ್ವಿ ಸ್ವಾತಂತ್ರ್ಯ ಹೋರಾಟವಾಗದೆ ಮತ್ತೊಂದು ಬಂಡಾಯ ಚಟುವಟಿಕೆಯಾಗಿ ಕಾಲಗರ್ಭ ಸೇರಿದೆ. ಇದಕ್ಕೆ ಪ್ರಮುಖ ಕಾರಣ ಬಂಡಾಯ ಹುಟ್ಟಿಕೊಂಡ ಮೂಹೂರ್ತ!
ಏಪ್ರಿಲ್ ೯ ರಂದು ಜಗಳೂರು, ಬಂಗಾರಪೇಟೆ ಮತ್ತು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಬುದ್ಧಿವಂತರು ಯಾರೂ ಕೂಡ ನಾಯಕತ್ವ ಬದಲಾಯಿಸಬೇಕು ಎಂದು ಒತ್ತಾಯಿಸುವುದಿಲ್ಲ. ಒತ್ತಾಯಿಸಿದರೂ ಕೂಡ ಅದಕ್ಕೆ ಪ್ರಬಲವಾದ ಕಾರಣವನ್ನೇ ಕೊಡಬೇಕಾಗುತ್ತದೆ. ಈಗ ಯಡಿಯೂರಪ್ಪರನ್ನು ಕೆಳಗಿಳಿಸಲು ಗಟ್ಟಿಯಾದ ಕಾರಣಗಳಿವೆ, ಆದರೆ ಬಿಜೆಪಿಯ ನಾಯಕರಿಗೆ ಇದು ಇನ್ನೂ ಗಟ್ಟಿ ಕಾರಣಗಳು ಎಂದೆನಿಸಿಲ್ಲ! ಆದ್ದರಿಂದ ಇನ್ನೂ ಗಟ್ಟಿ ಕಾರಣಗಳನ್ನು ಕಳೆ ಹಾಕಿ ಅದನ್ನು ವರಿಷ್ಠರಿಗೆ ಅರ್ಥ ಮಾಡಿಸಿಕೊಡಲು ಈ ನಾಯಕರು ಇನ್ನೂ ಹೆಚ್ಚಿನ ಹೋಮ್ವರ್ಕ್ ಮಾಡುವುದು ಅಗತ್ಯವಾಗಿತ್ತು. ಅದರ ಜೊತೆ ಜೊತೆಗೆ ಈಶ್ವರಪ್ಪರ ಮೇಲೂ ಭ್ರಷ್ಟಾಚಾರದ ಆರೋಪವಿದೆ, ಅನಂತ್ ಕುಮಾರ್ ಬಿಜೆಪಿಯ ರಾಷ್ಟ್ರ ನಾಯಕರಾಗಿದ್ದರು ಕೂಡ ಅವರು ಸುಷ್ಮಾ ಸ್ವರಾಜ್ ಬಣದವರು. ರೆಡ್ಡಿಗಳು ಕೂಡ ಅಷ್ಟೆ. ಅದ್ದರಿಂದ ಈ ನಾಯಕರು ಯಡಿಯೂರಪ್ಪರ ವಿರುದ್ಧ ಅದೆಷ್ಟು ದೂರು ಕೊಂಡು ಹೋದರು ಕೂಡ ಅದರಲ್ಲಿ ಕೇಂದ್ರ ನಾಯಕರು ಇವರ ಸ್ವಾರ್ಥ ಹುಡುಕಿ ಅಲ್ಲಿಂದಲ್ಲಿಗೆ ತೇಪೆ ಹಾಕಿ ಯಡಿಯೂರಪ್ಪ ಉಘೇ ಉಘೇ ಎನ್ನುತ್ತಾರೆಯೇ ಹೊರತು ಇವರ ಮಾತಿಗೆ ಕವಡೆ ಕಿಮ್ಮತನ್ನು ಕೂಡ ನೀಡುವುದಿಲ್ಲ. ಕಳೆದ ನವೆಂಬರ್ನಲ್ಲಿ ಕೂಡ ಆಗಿದ್ದು ಇದೇ ತಾನೆ.
ಈ ಬಂಡಾಯದ ಮೂಲಕ ಯಡಿಯೂರಪ್ಪರಿಗೆ ಪಾಠ ಕಲಿಸುವ ಮತ್ತೊಂದು ಸುವರ್ಣಾವಕಾಶವನ್ನು ಕೂಡ ಈ ನಾಯಕರು ಕಳೆದುಕೊಂಡಿದ್ದಾರೆ. ಅದೇನೆಂದರೆ ಈ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ ಆ ಮೂಲಕ ರಾಜ್ಯದ ಜನತೆ ಯಡಿಯೂರಪ್ಪರ ವಿರುದ್ಧ ಇದ್ದಾರೆ ಎಂಬುದನ್ನು ಪಕ್ಷದ ಹಿರಿತಲೆಗಳಿಗೆ ತೋರಿಸಿ ಕೊಡಬಹುದಾಗಿದ್ದ ಅವಕಾಶವದು. ಆ ಸಾಧ್ಯತೆ ಈಗಲೂ ನಿಚ್ಛಳವಾಗಿಯೇ ಇದೆ. ಆದರೆ ಆ ರೀತಿಯಾದರೆ ಯಡಿಯೂರಪ್ಪ ಬಿಜೆಪಿಯ ಸೋಲಿಗೆ ಭಿನ್ನಮತೀಯರು ತೆರೆಮರೆಯಲ್ಲಿ ಡಬಲ್ ಗೇಮ್ ಆಡಿದ್ದೆ ಕಾರಣ ಎಂದು ಸಾರಿ ಬಂಡುಕೋರರಿಗೆ ಪಕ್ಷ ವಿರೋಧಿ ಪಟ್ಟ ಕೊಡುವುದು ಶತಃಸಿದ್ಧ. ಅಗ ಪುನಃ ಯಡಿಯೂರಪ್ಪರೇ ಕಿಂಗ್ ಆಗಲಿದ್ದಾರೆ. ಅದ್ದರಿಂದ ಈ ಉಪಚುನಾವಣೆ ಮುಗಿಯುವ ತನಕ ಸುಮ್ಮನಿದ್ದು ಫಲಿತಾಂಶ ನೋಡಿಕೊಂಡು ತಮ್ಮ ಚಟುವಟಿಕೆಗಳಿಗೆ ರೆಕ್ಕೆ ಮೂಡಿಸುತ್ತಿದ್ದರೆ ಈ ಬಂಡಾಯ ಯಶ ಕಾಣುವ ಸಾಧ್ಯತೆ ಹೆಚ್ಚಿತ್ತು.
ಇದರ ಜೊತೆ ಜೊತೆಗೆ ಬದಲಿ ಮುಖ್ಯಮಂತ್ರಿಯಾಗಿ ಯಾರನ್ನೂ ಬಿಂಬಿಸಬೇಕು ಎಂಬ ಗೊಂದಲ ಕೂಡ ಈ ಬಂಡುಕೋರರಲ್ಲಿದೆ. ಅದೇ ರೀತಿ ಯಡಿಯೂರಪ್ಪರನ್ನು ಕೆಳಗಿಳಿಸದ್ದೇ ಆದರೆ ಮುಂದೆ ಯಾರನ್ನೂ ಮುಖ್ಯಮಂತ್ರಿ ಮಾಡುವುದು ಎಂಬುದು ಹೈಕಮಾಂಡ್ಗೆ ತಲೆನೋವು ತಂದಿದೆ. ಏಕೆಂದರೆ ಪಕ್ಷ ಮಧ್ಯಂತರ ಚುನಾವಣೆ ಎದುರಿಸುವುದನ್ನು ಯಾವ ಕಾರಣಕ್ಕೂ ಬಯಸುತ್ತಿಲ್ಲ ಈ ಮಾತನ್ನು ಅನಂತ್ ಕುಮಾರ್ ಎರಡು ತಿಂಗಳ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆಗ ಸಿಎಮ್ ಮಧ್ಯಾಂತರ ಚುನಾವಣೆಯ ಮಂತ್ರ ಮೊಳಗಿಸುತ್ತಿದ್ದರು! ಸರ್ಕಾರದ ಗುಪ್ತಚಾರ ಇಲಾಖೆ ನೀಡಿದ ವರದಿ ಪ್ರಕಾರ ಈಗ ಚುನಾವಣೆ ನಡೆದರೆ ಬಿಜೆಪಿ ಸುಮಾರು ಶೇ. ೨೦ರಷ್ಟು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಪತ್ರಿಕಾ ವರದಿಯೊಂದು ತಿಳಿಸಿತ್ತು.
ಅದೇ ರೀತಿ ರಾಜ್ಯದಲ್ಲಿರುವ ಪ್ರತಿಪಕ್ಷಗಳಿಗೂ ಮಧ್ಯಂತರ ಚುನಾವಣೆ ನಡೆಯುವುದು ಬೇಡದ ಕೂಸೇ ಆಗಿದೆ.
ಆದರೆ ಮುಂದಿನ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನ ಗೆದ್ದರೂ ಆ ಬಳಿಕ ಯಡಿಯೂರಪ್ಪರನ್ನು ಹಿಡಿಯುವುದು ಕಷ್ಟ ಎಂಬುದು ಈ ಭಿನ್ನಮತೀಯರಿಗೆ ಚೆನ್ನಾಗಿ ಗೊತ್ತಿದೆ. ಅದರ ಜೊತೆಗೆ ಸದ್ಯ ನ್ಯಾಯಾಲಯದ ಮುಂದೆಯಿರುವ ಶಾಸಕರ ಅನರ್ಹ ಪ್ರಕರಣದಲ್ಲಿ ಸರ್ಕಾರಕ್ಕೆ ಜಯ ಸಿಕ್ಕರೆ ಆಗ ತೆರವಾಗುವ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯಬೇಕಿದೆ. ಆದರೆ ಇಲ್ಲಿ ಸರ್ಕಾರಕ್ಕೆ ಸೋಲಾದರೆ ಮತ್ತೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ.
ಅದ್ದರಿಂದ ಭಿನ್ನಮತೀಯರು ತಮ್ಮ ಬಂಡಾಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಈ ಮೂರರಲ್ಲಿ ಒಂದು ಸ್ಥಾನ ಗೆಲ್ಲುವಂತೆ ನೋಡಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಈ ಚುನಾವಣೆ ಬಳಿಕ ಮತ್ತೊಂದು ಸುತ್ತಿನ ಬಂಡಾಯ ಚಟುವಟಿಕೆ ಗರಿ ಕೆದರಿಕೊಳ್ಳುವುದು ಕೂಡ ನಿಶ್ಚಿತ. ಸಿಎಮ್ ತಮ್ಮ ತಪ್ಪುಗಳಿಂದ ಇನ್ನೂ ಪಾಠ ಕಲಿತಿಲ್ಲ, ಕಲಿಯುವ ಲಕ್ಷಣವು ಕಾಣುತ್ತಿಲ್ಲ. ಈಗ ಹಾಕಿರುವ ತೇಪೆ ತಾತ್ಕಲಿಕ.
ಅದ್ದರಿಂದ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ತನಕ ಬಿಜೆಪಿಯಲ್ಲಿ ಬಂಡುಕೋರರಿಗೂ ತುಂಬು ಕೆಲಸವಿರುತ್ತದೆ ಎನ್ನಲು ಯಾವುದೇ ಭಯವಿಲ್ಲ!
ಅಕ್ರಮ ಗಣಿಗಾರಿಕೆ, ಬಿಡಿಎ ಹಗರಣ, ಕೆಐಎಡಿಬಿ ಹಗರಣ, ಪ್ರೇರಣಾ ಟ್ರಸ್ಟ್ ದೇಣಿಗೆ ವಿವಾದ, ಪ್ರವಾಹ ಪೀಡಿತರಿಗೆ ಸೂರು ನೀಡುವ ಆಸರೆ ಯೋಜನೆಯಲ್ಲಿನ ವಿಫಲತೆ, ಅಧಿಕಾರ ದುರುಪಯೋಗ, ಸಂವಿಧಾನ ಬಾಹಿರ ಚಟುವಟಿಕೆಗಳು, ಸ್ವಜನ ಪಕ್ಷಪಾತ, ಗುಂಪುಗಾರಿಕೆ... ಹೀಗೆ ಸಾಲು ಸಾಲು ಆರೋಪಗಳಿಗೆ ತುತ್ತಾದರೂ ಕೂಡ ಪದಚ್ಯುತಗೊಳ್ಳದ ದೇಶದ ಏಕೈಕ ಮತ್ತು ಪ್ರಪ್ರಥಮ ಮುಖ್ಯಮಂತ್ರಿ ಬಹುಶಃ ಯಡಿಯೂರಪ್ಪರೇ ಇರಬೇಕು.
ದಕ್ಷಿಣ ಭಾರತದಲ್ಲಿ ತನ್ನ ಅಧಿಕಾರದ ಖಾತೆಯನ್ನು ತೆರೆಯಬೇಕು ಎಂಬ ಬಿಜೆಪಿಯ ತುಡಿತವನ್ನು ಮೂರು ವರ್ಷಗಳ ಹಿಂದೆ ಸಾಕಾರಗೊಳಿಸಿದವರು ಯಡಿಯೂರಪ್ಪ. ಇದಕ್ಕಾಗಿ ಅವರು ಸುಮಾರು ೩ ದಶಕಗಳಿಗೂ ಹೆಚ್ಚಿನ ಕಾಲ ಅವಿರತವಾಗಿ ದುಡಿದಿದ್ದಾರೆ, ಹೋರಾಡಿದ್ದಾರೆ ಆ ಮೂಲಕ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಪೊರೆದಿದ್ದಾರೆ. ದಕ್ಷಿಣ ಭಾರತದ ಬೇರೆ ಯಾವುದೇ ರಾಜ್ಯದಲ್ಲೂ ಬಿಜೆಪಿಗೆ ಇಂತಹ ಒಬ್ಬ ಕಾರ್ಯಕರ್ತ ಸಿಗಲಿಲ್ಲ. ಅದ್ದರಿಂದ ದಕ್ಷಿಣದ ದೊಡ್ಡ ರಾಜ್ಯಗಳಾದ ಕೇರಳ, ತಮಿಳು ನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಬಿಜೆಪಿಗೆ ನೆಲೆ, ಬೆಲೆ ಎರಡೂ ಇಲ್ಲ. ಆದರೆ ತಮ್ಮಿಂದಲೇ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ, ತಾನಿಲ್ಲದೆ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅಸ್ತಿತ್ವವೇ ಇರುತ್ತಿರಲಿಲ್ಲ ಎಂಬ ಯಡಿಯೂರಪ್ಪರ ಭ್ರಮೆಗೆ ಸಿಲುಕಿ ರಾಜ್ಯದ ಬಿಜೆಪಿ ಮತ್ತದರ ಸಿದ್ಧಾಂತ ಚಿಂದಿ ಚಿತ್ರಾನ್ನವಾಗಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಎಂಬುದು ತಿರುಕನ ಕನಸಿನಂತಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇನ್ನೆರಡು ತಿಂಗಳಿ(ಮೇ ೨೮)ಗೆ ಮೂರು ವರ್ಷ ತುಂಬಲಿದೆ. ಆದರೆ ಈ ಮೂರು ವರ್ಷಗಳಲ್ಲಿ ಯಡಿಯೂರಪ್ಪ ಮಾಡಿದ ಸಾಧನೆ ಎಂದರೆ ಮಾತಿಗೊಂದರಂತೆ ಈಡೇರಿಸಲಾಗದ ಭರವಸೆ ನೀಡಿ, ಹೆಜ್ಜೆಗೊಂದರಂತೆ ಹಗರಣಗಳಲ್ಲಿ ಭಾಗಿಯಾಗಿ, ದಿನ ಬೆಳಗಾಗುತ್ತಲೇ ಸ್ವಪಕ್ಷೀಯರ ಜೊತೆ ಗುದ್ದಾಡಿ ಇನ್ನೂ ತಾನು ಮುಖ್ಯಮಂತ್ರಿಯಾಗಿ ಅಧಿಕಾರ ಉಳಿಸಿಕೊಂಡಿರುವುದು ಮಾತ್ರ.
ಯಡಿಯೂರಪ್ಪ ಜೆಡಿಎಸ್ ಬೆಂಬಲದೊಂದಿಗೆ ಮೊತ್ತ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು ನವೆಂಬರ್ ೨೦೦೭ರಲ್ಲಿ. ಅಂದು ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿಯ ಪರಮೋಚ್ಛ ನಾಯಕ ಎಲ್ ಕೆ ಅಡ್ವಾಣಿ ಅವರು, "ಈ ದಿನ ಅತಿ ಸಂತಸದ ದಿನ. ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ಆರಂಭವಾಗಿದೆ. ಇನ್ನೆಲ್ಲ ಶುಭವಾಗಲಿದೆ" ಎಂದಿದ್ದರು. ಆದರೆ ಇಂದು ಅಡ್ವಾಣಿಯವರೇ ಮುಖ ಕೊಟ್ಟು ಮಾತನಾಡಲಾಗದಷ್ಟು ಹೇಸಿಗೆಯನ್ನು ತಮ್ಮ ಪಕ್ಷದ ಮುಖಕ್ಕೆ ಯಡಿಯೂರಪ್ಪ ಬಳಿದಿದ್ದಾರೆ. ಇಂದಿಗೂ ಕೇಂದ್ರ ಸರ್ಕಾರದ ಅನಾಚಾರಗಳ ವಿರುದ್ಧ ಸಮರ ಸಾರಿರುವ ಬಿಜೆಪಿಗೆ ಯಡಿಯೂರಪ್ಪರ ಅಕ್ರಮಗಳೇ ಬಗಲ ಮುಳ್ಳಾಗಿದೆ. ಶುಭ ನುಡಿಯಲಿದೆ ಎಂದು ಬಿಜೆಪಿ ವರಿಷ್ಠರು ಮತ್ತು ರಾಜ್ಯದ ಜನತೆ ಭಾವಿಸಿದ್ದ ಹಕ್ಕಿ ಇಂದು ಒಂದರ ಮೇಲೊಂದರಂತೆ ಅಪಶಕುನದ ಸುದ್ದಿಗಳನ್ನೇ ನೀಡುತ್ತಿದೆ.
ಮಾರ್ಚ್ನ ಆರಂಭದಿಂದಲೇ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದವು (ವಾಸ್ತವವಾಗಿ ಬಿಜೆಪಿ ಗದ್ದುಗೆಗೆ ಬಂದಂದಿನಿಂದಲೇ ಈ ಚಟುವಟಿಕೆಗಳು ನಡೆಯುತ್ತಿವೆ). ಯಡಿಯೂರಪ್ಪ ನಮ್ಮ ನಾಯಕರು ಎಂದು ಹೇಳುತ್ತಲೇ ಪಕ್ಷದ ರಾಜ್ಯ ಅಧ್ಯಕ್ಷ ಕೆ ಎಸ್ ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ರೆಡ್ಡಿ ಸೋದರರು, ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಸಿ ಟಿ ರವಿ ಮುಂತಾದ ಘಟಾನುಘಟಿಗಳು ಅವರನ್ನು ಖೆಡ್ಡಾಕ್ಕೆ ಹಾಕಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು. ಮಾನ್ಯ ಮುಖ್ಯಮಂತ್ರಿಗಳು ಶಾಸಕ, ಸಚಿವರನ್ನು ಅತ್ಯಂತ ಕೀಳಾಗಿ ಕಂಡ ಅನೇಕ ಘಟನೆಗಳ ಜೊತೆಗೆ, ಅವರ ದರ್ಪ, ಸ್ವಜನ ಪಕ್ಷಪಾತ, ಭ್ರಷ್ಟತೆಗಳೆಲ್ಲ ಈ ಬಂಡುಕೋರ ಚಟುವಟಿಕೆಗೆ ಇಂಧನವಾಯಿತು. ಬಿಜೆಪಿಯ ಅನೇಕ ನಿಷ್ಠಾವಂತರೇ ಹೇಳುವ ಪ್ರಕಾರ ಈ ಬಂಡುಕೋರ ಚಟುವಟಿಕೆಗಳಲ್ಲಿ ಯಾವುದೇ ತಪ್ಪಿಲ್ಲವಂತೆ ಏಕೆಂದರೆ ಪಕ್ಷದಲ್ಲಿ ಕುದಿ ಜ್ವಾಲಾಮುಖಿ ಹುಟ್ಟಲು ಯಡಿಯೂರಪ್ಪರೇ ಕಾರಣವಂತೆ.
ರಾಜ್ಯದ ಲಿಂಗಾಯತ ಸಮುದಾಯಕ್ಕೆ ತಾನೊಬ್ಬನೆ ರಾಜಕೀಯ ನಾಯಕನಾಗಬೇಕು ಎಂಬ ಅವರ ಧೋರಣೆ ಮತ್ತದಕ್ಕಾಗಿ ಅವರು ಹೆಣೆದ ಯೋಜನೆಗಳು ಇಂದು ಅವರನ್ನು ಒಂಚೂರು ರಕ್ಷಿಸುತ್ತಿದೆ. ಅವರ ಈ ಸಂಚು ೧೯೯೯ರ ಹೊತ್ತಿಗೆ ಅಂದರೆ ದಶಕಗಳ ಹಿಂದೆಯೇ ಜನ್ಮತಾಳಿತ್ತು. ಅವರ ನಾಯಕನಾಗುವ ದಾಹಕ್ಕೆ ಮೊದಲ ಬಲಿ ಬಿ ಬಿ ಶಿವಪ್ಪರಾದರೆ ಅದರ ಫಲಾನುಭವಿಯಾಗಿದ್ದು ಈಗ ಯಡಿಯೂರಪ್ಪರ ವಿರುದ್ಧ ತೊಡೆ ತಟ್ಟಿ ನಿಂತಿರುವ ಜಗದೀಶ್ ಶೆಟ್ಟರ್! ಆದರೆ ಶೆಟ್ಟರ್ ಯಡಿಯೂರಪ್ಪರಿಗೆ ಸುಲಭ ತುತ್ತಾಗಲಾರರು. ಏಕೆಂದರೆ ಈ ಹಿಂದೆ ಯಡಿಯೂರಪ್ಪರ ಒಳನಡೆಗಳಿಗೆ ಅನಂತ್ ಕುಮಾರ್ರ ಆಶಿರ್ವಾದವಿದ್ದರೇ ಈಗ ಯಡಿಯೂರಪ್ಪರ ಹೆಡೆಮುರಿ ಕಟ್ಟಲು ಅನಂತ್ ಕುಮಾರ್ಗೆ ಶೆಟ್ಟರೇ ಅಸ್ತ್ರ. ಇದರ ಜೊತೆಗೆ ಈ ಹಿಂದೆ ಯಡಿಯೂರಪ್ಪರಿಗೆ ಪಕ್ಷದೊಳಗೆ ಒಂದು ರೀತಿಯ ಗೌರವ, ಅಭಿಮಾನಗಳಿದ್ದವು ಅವರು ಏನು ಮಾಡಿದರೂ ಪಕ್ಷದೊಳಿತಿಗಾಗಿ ಮಾಡುತ್ತಾರೆ ಎಂಬ ಭಾವನೆ ಇರುತ್ತಿತ್ತು. ಆದರೆ ಈಗ ಎಲ್ಲರಿಗೆ ಯಡ್ಡಿಯ ನಿಜ ಬಣ್ಣ ಗೊತ್ತಾಗಿದೆ. ಹಾಗೆಯೇ ಯಡ್ಡಿಗೂ ಹುಟ್ಟು ಬಿಜೆಪಿಗರ ಮೇಲೆ ನಂಬಿಕೆಯಿಲ್ಲ ಅದಕ್ಕಾಗಿಯೇ ಅವರು ತಮ್ಮ ಆಪ್ತ ವಲಯದಲ್ಲಿ ವಲಸಿಗರನ್ನೇ ತುಂಬಿಸಿಕೊಂಡಿದ್ದಾರೆ.
ಇದೀಗ ಬಂಡಾಯ ಚಟುವಟಿಕೆಗಳು ರಾಜ್ಯ ಬಿಜೆಪಿ ಪಾಲಿಗೆ ನಿತ್ಯ ಪ್ರಾರ್ಥನೆಯಾಗಿದೆ. ಆದರೆ ಈ ಬಾರಿಯ ಬಂಡಾಯ ಚಟುವಟಿಕೆಗಳು ಸಾಕಷ್ಟು ಕುತೂಹಲ ಮೂಡಿಸಿತ್ತು. ಇದಕ್ಕೆ ಕಾರಣ ಯಡಿಯೂರಪ್ಪರ ಒಂದ ಕಾಲತ್ತಿಲ್’ನ ಆಪ್ತ ಸ್ನೇಹಿತ, ಕೇಂದ್ರದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಅನಂತ್ ಕುಮಾರ್ ಮತ್ತು ಈಶ್ವರಪ್ಪ ಸ್ವತಃ ಈ ಬಂಡುಕೋರ ಚಟುವಟಿಕೆಯ ಮೂಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಎಂದಿನಂತೆ ರೆಡ್ಡಿ ಸೋದರರು ಇದಕ್ಕೆ ಕೋರಸ್’ ಹಾಡಿದ್ದರು. ಆದರೂ ಈ ಬಂಡಾಯ ಯಶಸ್ವಿ ಸ್ವಾತಂತ್ರ್ಯ ಹೋರಾಟವಾಗದೆ ಮತ್ತೊಂದು ಬಂಡಾಯ ಚಟುವಟಿಕೆಯಾಗಿ ಕಾಲಗರ್ಭ ಸೇರಿದೆ. ಇದಕ್ಕೆ ಪ್ರಮುಖ ಕಾರಣ ಬಂಡಾಯ ಹುಟ್ಟಿಕೊಂಡ ಮೂಹೂರ್ತ!
ಏಪ್ರಿಲ್ ೯ ರಂದು ಜಗಳೂರು, ಬಂಗಾರಪೇಟೆ ಮತ್ತು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಬುದ್ಧಿವಂತರು ಯಾರೂ ಕೂಡ ನಾಯಕತ್ವ ಬದಲಾಯಿಸಬೇಕು ಎಂದು ಒತ್ತಾಯಿಸುವುದಿಲ್ಲ. ಒತ್ತಾಯಿಸಿದರೂ ಕೂಡ ಅದಕ್ಕೆ ಪ್ರಬಲವಾದ ಕಾರಣವನ್ನೇ ಕೊಡಬೇಕಾಗುತ್ತದೆ. ಈಗ ಯಡಿಯೂರಪ್ಪರನ್ನು ಕೆಳಗಿಳಿಸಲು ಗಟ್ಟಿಯಾದ ಕಾರಣಗಳಿವೆ, ಆದರೆ ಬಿಜೆಪಿಯ ನಾಯಕರಿಗೆ ಇದು ಇನ್ನೂ ಗಟ್ಟಿ ಕಾರಣಗಳು ಎಂದೆನಿಸಿಲ್ಲ! ಆದ್ದರಿಂದ ಇನ್ನೂ ಗಟ್ಟಿ ಕಾರಣಗಳನ್ನು ಕಳೆ ಹಾಕಿ ಅದನ್ನು ವರಿಷ್ಠರಿಗೆ ಅರ್ಥ ಮಾಡಿಸಿಕೊಡಲು ಈ ನಾಯಕರು ಇನ್ನೂ ಹೆಚ್ಚಿನ ಹೋಮ್ವರ್ಕ್ ಮಾಡುವುದು ಅಗತ್ಯವಾಗಿತ್ತು. ಅದರ ಜೊತೆ ಜೊತೆಗೆ ಈಶ್ವರಪ್ಪರ ಮೇಲೂ ಭ್ರಷ್ಟಾಚಾರದ ಆರೋಪವಿದೆ, ಅನಂತ್ ಕುಮಾರ್ ಬಿಜೆಪಿಯ ರಾಷ್ಟ್ರ ನಾಯಕರಾಗಿದ್ದರು ಕೂಡ ಅವರು ಸುಷ್ಮಾ ಸ್ವರಾಜ್ ಬಣದವರು. ರೆಡ್ಡಿಗಳು ಕೂಡ ಅಷ್ಟೆ. ಅದ್ದರಿಂದ ಈ ನಾಯಕರು ಯಡಿಯೂರಪ್ಪರ ವಿರುದ್ಧ ಅದೆಷ್ಟು ದೂರು ಕೊಂಡು ಹೋದರು ಕೂಡ ಅದರಲ್ಲಿ ಕೇಂದ್ರ ನಾಯಕರು ಇವರ ಸ್ವಾರ್ಥ ಹುಡುಕಿ ಅಲ್ಲಿಂದಲ್ಲಿಗೆ ತೇಪೆ ಹಾಕಿ ಯಡಿಯೂರಪ್ಪ ಉಘೇ ಉಘೇ ಎನ್ನುತ್ತಾರೆಯೇ ಹೊರತು ಇವರ ಮಾತಿಗೆ ಕವಡೆ ಕಿಮ್ಮತನ್ನು ಕೂಡ ನೀಡುವುದಿಲ್ಲ. ಕಳೆದ ನವೆಂಬರ್ನಲ್ಲಿ ಕೂಡ ಆಗಿದ್ದು ಇದೇ ತಾನೆ.
ಈ ಬಂಡಾಯದ ಮೂಲಕ ಯಡಿಯೂರಪ್ಪರಿಗೆ ಪಾಠ ಕಲಿಸುವ ಮತ್ತೊಂದು ಸುವರ್ಣಾವಕಾಶವನ್ನು ಕೂಡ ಈ ನಾಯಕರು ಕಳೆದುಕೊಂಡಿದ್ದಾರೆ. ಅದೇನೆಂದರೆ ಈ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ ಆ ಮೂಲಕ ರಾಜ್ಯದ ಜನತೆ ಯಡಿಯೂರಪ್ಪರ ವಿರುದ್ಧ ಇದ್ದಾರೆ ಎಂಬುದನ್ನು ಪಕ್ಷದ ಹಿರಿತಲೆಗಳಿಗೆ ತೋರಿಸಿ ಕೊಡಬಹುದಾಗಿದ್ದ ಅವಕಾಶವದು. ಆ ಸಾಧ್ಯತೆ ಈಗಲೂ ನಿಚ್ಛಳವಾಗಿಯೇ ಇದೆ. ಆದರೆ ಆ ರೀತಿಯಾದರೆ ಯಡಿಯೂರಪ್ಪ ಬಿಜೆಪಿಯ ಸೋಲಿಗೆ ಭಿನ್ನಮತೀಯರು ತೆರೆಮರೆಯಲ್ಲಿ ಡಬಲ್ ಗೇಮ್ ಆಡಿದ್ದೆ ಕಾರಣ ಎಂದು ಸಾರಿ ಬಂಡುಕೋರರಿಗೆ ಪಕ್ಷ ವಿರೋಧಿ ಪಟ್ಟ ಕೊಡುವುದು ಶತಃಸಿದ್ಧ. ಅಗ ಪುನಃ ಯಡಿಯೂರಪ್ಪರೇ ಕಿಂಗ್ ಆಗಲಿದ್ದಾರೆ. ಅದ್ದರಿಂದ ಈ ಉಪಚುನಾವಣೆ ಮುಗಿಯುವ ತನಕ ಸುಮ್ಮನಿದ್ದು ಫಲಿತಾಂಶ ನೋಡಿಕೊಂಡು ತಮ್ಮ ಚಟುವಟಿಕೆಗಳಿಗೆ ರೆಕ್ಕೆ ಮೂಡಿಸುತ್ತಿದ್ದರೆ ಈ ಬಂಡಾಯ ಯಶ ಕಾಣುವ ಸಾಧ್ಯತೆ ಹೆಚ್ಚಿತ್ತು.
ಇದರ ಜೊತೆ ಜೊತೆಗೆ ಬದಲಿ ಮುಖ್ಯಮಂತ್ರಿಯಾಗಿ ಯಾರನ್ನೂ ಬಿಂಬಿಸಬೇಕು ಎಂಬ ಗೊಂದಲ ಕೂಡ ಈ ಬಂಡುಕೋರರಲ್ಲಿದೆ. ಅದೇ ರೀತಿ ಯಡಿಯೂರಪ್ಪರನ್ನು ಕೆಳಗಿಳಿಸದ್ದೇ ಆದರೆ ಮುಂದೆ ಯಾರನ್ನೂ ಮುಖ್ಯಮಂತ್ರಿ ಮಾಡುವುದು ಎಂಬುದು ಹೈಕಮಾಂಡ್ಗೆ ತಲೆನೋವು ತಂದಿದೆ. ಏಕೆಂದರೆ ಪಕ್ಷ ಮಧ್ಯಂತರ ಚುನಾವಣೆ ಎದುರಿಸುವುದನ್ನು ಯಾವ ಕಾರಣಕ್ಕೂ ಬಯಸುತ್ತಿಲ್ಲ ಈ ಮಾತನ್ನು ಅನಂತ್ ಕುಮಾರ್ ಎರಡು ತಿಂಗಳ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆಗ ಸಿಎಮ್ ಮಧ್ಯಾಂತರ ಚುನಾವಣೆಯ ಮಂತ್ರ ಮೊಳಗಿಸುತ್ತಿದ್ದರು! ಸರ್ಕಾರದ ಗುಪ್ತಚಾರ ಇಲಾಖೆ ನೀಡಿದ ವರದಿ ಪ್ರಕಾರ ಈಗ ಚುನಾವಣೆ ನಡೆದರೆ ಬಿಜೆಪಿ ಸುಮಾರು ಶೇ. ೨೦ರಷ್ಟು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಪತ್ರಿಕಾ ವರದಿಯೊಂದು ತಿಳಿಸಿತ್ತು.
ಅದೇ ರೀತಿ ರಾಜ್ಯದಲ್ಲಿರುವ ಪ್ರತಿಪಕ್ಷಗಳಿಗೂ ಮಧ್ಯಂತರ ಚುನಾವಣೆ ನಡೆಯುವುದು ಬೇಡದ ಕೂಸೇ ಆಗಿದೆ.
ಆದರೆ ಮುಂದಿನ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನ ಗೆದ್ದರೂ ಆ ಬಳಿಕ ಯಡಿಯೂರಪ್ಪರನ್ನು ಹಿಡಿಯುವುದು ಕಷ್ಟ ಎಂಬುದು ಈ ಭಿನ್ನಮತೀಯರಿಗೆ ಚೆನ್ನಾಗಿ ಗೊತ್ತಿದೆ. ಅದರ ಜೊತೆಗೆ ಸದ್ಯ ನ್ಯಾಯಾಲಯದ ಮುಂದೆಯಿರುವ ಶಾಸಕರ ಅನರ್ಹ ಪ್ರಕರಣದಲ್ಲಿ ಸರ್ಕಾರಕ್ಕೆ ಜಯ ಸಿಕ್ಕರೆ ಆಗ ತೆರವಾಗುವ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯಬೇಕಿದೆ. ಆದರೆ ಇಲ್ಲಿ ಸರ್ಕಾರಕ್ಕೆ ಸೋಲಾದರೆ ಮತ್ತೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ.
ಅದ್ದರಿಂದ ಭಿನ್ನಮತೀಯರು ತಮ್ಮ ಬಂಡಾಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಈ ಮೂರರಲ್ಲಿ ಒಂದು ಸ್ಥಾನ ಗೆಲ್ಲುವಂತೆ ನೋಡಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಈ ಚುನಾವಣೆ ಬಳಿಕ ಮತ್ತೊಂದು ಸುತ್ತಿನ ಬಂಡಾಯ ಚಟುವಟಿಕೆ ಗರಿ ಕೆದರಿಕೊಳ್ಳುವುದು ಕೂಡ ನಿಶ್ಚಿತ. ಸಿಎಮ್ ತಮ್ಮ ತಪ್ಪುಗಳಿಂದ ಇನ್ನೂ ಪಾಠ ಕಲಿತಿಲ್ಲ, ಕಲಿಯುವ ಲಕ್ಷಣವು ಕಾಣುತ್ತಿಲ್ಲ. ಈಗ ಹಾಕಿರುವ ತೇಪೆ ತಾತ್ಕಲಿಕ.
ಅದ್ದರಿಂದ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ತನಕ ಬಿಜೆಪಿಯಲ್ಲಿ ಬಂಡುಕೋರರಿಗೂ ತುಂಬು ಕೆಲಸವಿರುತ್ತದೆ ಎನ್ನಲು ಯಾವುದೇ ಭಯವಿಲ್ಲ!
Friday, March 18, 2011
ಬರೇ...
ಬರೇ ಕನಸುಗಳಲ್ಲ ಇವು
ನಾಳೆಯ ಬಾಳಿನ ಭರವಸೆಗಳು
ನೊಂದ ಬೆಂದ ಮನಕ್ಕೆ
ತಂಪನ್ನಿಯುವ ಅಮೃತಬಿಂದುಗಳು
ಬರೇ ಮೌನಗಳಲ್ಲ ಇವು
ಮಾತಿನ ಹಿಂದಿರುವ ಯೋಜನೆಗಳು
ಯಾರೂ ತಿಳಿಯದ, ಇನ್ಯಾರು ಅರಿಯದ
ಅವರ್ಯಾರು ಮುರಿಯದ ಆಟಿಕೆಗಳು
ತನಗೂ ಮೆದುಳಿದೆ ಅನ್ನುವ ಸೂಚನೆಗಳು
ಬರೇ ಮಾತುಗಳಲ್ಲ ಇವು,
ಯಾವೊಂದು ಜೀವಿಯಲ್ಲೂ
ಇರದ ಒಳ ಹೊರಗಿನ ಅಭಿವ್ಯಕ್ತಿಗಳು
ನನ್ನ ನಿನ್ನ ನಡುವಿನ ಅತ್ಮಿಯ ಬೆಸುಗೆಗಳು
ಬರೇ ಸ್ನೇಹಗಳಲ್ಲ ಇವು,
ಮನುಕುಲದ ಸುಂದರ ಚಿತ್ರಣಗಳು
ಸೂರ್ಯನ ಬೆಳಕಿನಷ್ಟೆ ಸತ್ಯವಾದ,
ನಿತ್ಯವಾದ, ಹೃದಯಂಗಮವಾದ
ಹೆಣೆಹೆಣೆದು ಬೆಸೆದುಕೊಳ್ಳುವ
ಬಿಗಿ ಬಾಂಧವ್ಯಗಳು.
ಬರೇ ನಂಬಿಕೆಗಳಲ್ಲ ಇವು
ನನ್ನ ನಿನ್ನ ನಡುವೆ ನಡೆಯುವ
ನೂರೊಂದು ವ್ಯವಹಾರಕ್ಕೆ ಸೇತುವೆಗಳು
ಜಗದ ಸಾವು ನೋವುಗಳ
ಮರೆಯಲು, ತೊರೆಯಲು
ಕಾರಣವಾಗೋ ಗಿಡ ಮೂಲಿಕೆಗಳು.
ನಾಳೆಯ ಬಾಳಿನ ಭರವಸೆಗಳು
ನೊಂದ ಬೆಂದ ಮನಕ್ಕೆ
ತಂಪನ್ನಿಯುವ ಅಮೃತಬಿಂದುಗಳು
ಬರೇ ಮೌನಗಳಲ್ಲ ಇವು
ಮಾತಿನ ಹಿಂದಿರುವ ಯೋಜನೆಗಳು
ಯಾರೂ ತಿಳಿಯದ, ಇನ್ಯಾರು ಅರಿಯದ
ಅವರ್ಯಾರು ಮುರಿಯದ ಆಟಿಕೆಗಳು
ತನಗೂ ಮೆದುಳಿದೆ ಅನ್ನುವ ಸೂಚನೆಗಳು
ಬರೇ ಮಾತುಗಳಲ್ಲ ಇವು,
ಯಾವೊಂದು ಜೀವಿಯಲ್ಲೂ
ಇರದ ಒಳ ಹೊರಗಿನ ಅಭಿವ್ಯಕ್ತಿಗಳು
ನನ್ನ ನಿನ್ನ ನಡುವಿನ ಅತ್ಮಿಯ ಬೆಸುಗೆಗಳು
ಬರೇ ಸ್ನೇಹಗಳಲ್ಲ ಇವು,
ಮನುಕುಲದ ಸುಂದರ ಚಿತ್ರಣಗಳು
ಸೂರ್ಯನ ಬೆಳಕಿನಷ್ಟೆ ಸತ್ಯವಾದ,
ನಿತ್ಯವಾದ, ಹೃದಯಂಗಮವಾದ
ಹೆಣೆಹೆಣೆದು ಬೆಸೆದುಕೊಳ್ಳುವ
ಬಿಗಿ ಬಾಂಧವ್ಯಗಳು.
ಬರೇ ನಂಬಿಕೆಗಳಲ್ಲ ಇವು
ನನ್ನ ನಿನ್ನ ನಡುವೆ ನಡೆಯುವ
ನೂರೊಂದು ವ್ಯವಹಾರಕ್ಕೆ ಸೇತುವೆಗಳು
ಜಗದ ಸಾವು ನೋವುಗಳ
ಮರೆಯಲು, ತೊರೆಯಲು
ಕಾರಣವಾಗೋ ಗಿಡ ಮೂಲಿಕೆಗಳು.
Tuesday, March 8, 2011
ಅವರು ನನ್ನನ್ನು ಬಿಡಿ, ತಮ್ಮ ಕನಸುಗಳನ್ನು ಕೂಡ ತಮ್ಮ ಜೊತೆ ಇಟ್ಟುಕೊಂಡಿಲ್ಲ!
ಇಂದು ಮಹಿಳೆಯರ ದಿನ....
ಮಹಿಳೆಯರನ್ನು ಹೊಗಳಿ ಅಟ್ಟಕೇರಿಸಲು ಇರುವ ದಿನ...
ಮಹಿಳೆಯರ ಸಶಕ್ತಿಕರಣಕ್ಕಾಗಿ ಹೋರಾಡಲು ಮೂಹೂರ್ತವಿಡುವ ದಿನ...
ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕಂಠ ಶೋಷಣೆ ಮಾಡಲಿರುವ ಸುದಿನ...
ಮತ್ತೇ, ಉಳಿದ ೩೬೪ ದಿನಗಳ ಕಥೆ - ವ್ಯಥೆಗೆ ಕೊನೆ ಹಾಡಿ ನಾಳಿನ ಭರವಸೆಗೆ ಹೊಸ ಭಾಷ್ಯ ಬರೆಸುವ ಪಣ ತೊಡುವ ದಿನ...
ಹೌದೌದು ಎಲ್ಲವೂ ಹೌದು... ಯಾರಿಗೆ ಉಳ್ಳವರಿಗೆ... ಆಧುನಿಕತೆಯ ರಾಜಪಥದಲ್ಲಿ ರಾಜರಂತೆ ನಡೆಯುವವರಿಗೆ! ಆದರೆ ಅದೇ ದಾರಿಯಲ್ಲಿ ತರಗೆಲೆಯಂತೆ ಬಿದ್ದು ಅಸ್ತಿತ್ವ ಕಳೆದುಕೊಂಡು ಗಾಳಿ ಬಂದ ಕಡೆಗೆ ಅತ್ತಿಂದಿತ್ತ ಇತ್ತಿಂದಿತ್ತ ಹಾರುತ್ತಾ, ಯಾವುದೋ ಕುಟುಂಬದ ವಟ ವೃಕ್ಷದ ಬುಡಕ್ಕೆ ಬಿದ್ದು ತನ್ನ ಸತ್ವವನ್ನು ಅದಕ್ಕೆ ಧಾರೆಯೆರೆಯುವ ಬಹುಪಾಲು ಮಹಿಳಾ ಸಂಕುಲಕ್ಕೆ ಎಲ್ಲ ದಿನಗಳೂ ಕೂಡ ಮತ್ತೊಂದು ದಿನಗಳೇ... ಎಲ್ಲ ಕ್ಷಣಗಳು ಕೂಡ ಜೀವಚ್ಛವಗೊಳಿಸುವ ಕ್ಷಣಗಳೇ ಆದರೂ ಅಲ್ಲೊಂದು ಇಲ್ಲೊಂದು ಖುಷಿಯ ಒರತೆ ಕಾಣುವ, ಆ ಒರತೆಯಲ್ಲೇ ತನ್ನೆಲ್ಲ ಕೊರತೆಯನ್ನು ತುಂಬಿಕೊಳ್ಳುವ ನನ್ನೆಲ್ಲ ಅಕ್ಕತಂಗಿಯಂದಿರಿಗೆ, ತಾಯಂದಿರಿಗೆ, ಗೆಳತಿಯಂದಿರಿಗೆ ಪ್ರಣಾಮ ಹೇಳಲೇ, ಧಿಕ್ಕಾರ ಕೂಗಲೇ ಗೊತ್ತಾಗುತ್ತಿಲ್ಲ.
ನನಗೆ ನನ್ನ ಪರಿಸರದ ಅನೇಕ ಹುಡುಗಿಯರನ್ನು ಕಂಡಾಗ, ಮಾತನಾಡಿಸಿದಾಗ ಇವರು ಏಕೆ ಹೀಗೆ? ಎಂದು ಅನಿಸುತ್ತದೆ. ಒಮ್ಮೊಮ್ಮೆ ಅಸಹಾಯಕತೆ, ಕೋಪ, ವಾಕರಿಕೆ ಎಲ್ಲವೂ ಎದೆಯೊಳಗೆ ಹುಟ್ಟಿಕೊಳ್ಳುತ್ತದೆ. ನನ್ನ ಪರಿಸರದಲ್ಲಿರುವ ಬಹುತೇಕ ಹುಡುಗಿಯರು ಸಾಂಪ್ರದಾಯಿಕ ಮನೆತನದವರು. ಇಂದಿಗೂ ನರಳುತ್ತಿರುವ ಹುಡುಗಿಯರು ಹೆಚ್ಚಾಗಿ ಬಡ ಕುಟುಂಬಗಳಲ್ಲಿದ್ದರೆ, ಕೊರಗುತ್ತಿರುವುದು ಮಧ್ಯಮ ವರ್ಗದ ಸಾಂಪ್ರದಾಯಿಕ ಮನೆಗಳ ಹುಡುಗಿಯರು. ಅವರು ನಾಲ್ಕು ಕೋಣೆ, ೫ ಕಿಟಕಿ, ೨ ಬಾಗಿಲಿನೊಳಗೆ ಬಂಧಿಯಾಗಿದ್ದರೆ. ಅವರು ಉದ್ಯೋಗಕ್ಕೆ ಹೋಗಿದ್ದರು ಮನೆಯ ಮಾರ್ಯಾದೆಯೆಂಬ ಚಾವಡಿಯ ನಡುಗಂಬ (ಈಗ ಎಲ್ಲ ಆರ್ಸಿಸಿ ಮನೆಯಾಗಿದೆ, ಮನೆ ಕಟ್ಟು ರೀತಿಯಲ್ಲಿ ಅಧುನಿಕತೆ ಬಂದಿದ್ದರು ಮನ ಕಟ್ಟುವ ರೀತಿಯಲ್ಲಿ ಬದಲಾವಣೆ ಆಗದಿರುವುದು ವಿಪರ್ಯಾಸ)ಕ್ಕೆ ಬಿಗಿದಿರುವ ಹಗ್ಗ, ಸರಪಳಿ ಏನು ಬೇಕಾದರೂ ಹೇಳಿ ಅದು ಅವರ ಕುತ್ತಿಗೆಗೆ ಭದ್ರವಾಗಿ ಸುತ್ತು ಹಾಕಲ್ಟಟ್ಟಿದೆ.
ನಾನು ನನ್ನ ಜೊತೆ ಬೆಳೆದ ಅನೇಕ ಹುಡುಗಿಯರ ಪಕ್ಕ ಕುಳಿತು ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಪಿಯುಸಿಯಲ್ಲಿ ಅದು ಆಗಬೇಕು, ಇದು ಮಾಡಬೇಕು, ನಾನು ಹಾಗೇ, ನಾನು ಹೀಗೆಯೇ ಇರುತ್ತೇನೆ ಎಂದವರು ಇಂದು ನನ್ನನ್ನು ಅವರ ಪಕ್ಕ ಕೂರಲೂ ಕೂಡ ಬಿಡುವುದಿಲ್ಲ. ಅದು ನನಗೆ ಬೇಸರದ ವಿಷಯವೇ ಅಲ್ಲ. ಆದರೆ ದುರಂತವೆಂದರೆ ಅವರು ನನ್ನನ್ನು ಬಿಡಿ, ತಮ್ಮ ಕನಸುಗಳನ್ನು ಕೂಡ ತಮ್ಮ ಜೊತೆ ಇಟ್ಟುಕೊಂಡಿಲ್ಲ!
ಮತ್ತೆ ಅದೇನೋ ಹಿಂದಿನ ಸಲುಗೆಯಲ್ಲಿ ಅವರನ್ನು ಕೆಣಕಿದರೆ ಅವರು ತಮ್ಮ ಪಥ ಭ್ರಷ್ಟತೆಯನ್ನು ನಗು ನಗುತ್ತಾ ಹೇಳುತ್ತಾರೆ. ಮನೆಯ ಅನಿವಾರ್ಯತೆಗಾಗಿ ತಾವು ಮಾಡುತ್ತಿರುವ ತ್ಯಾಗದ ಬಗ್ಗೆ ಹೆಮ್ಮೆ ಪಡುತ್ತಾರೆ. ಮದುವೆ ಅಗಲೇ ಬೇಕು ಎಂಬ ಮನೆಯವರ ಒತ್ತಡಕ್ಕೆ ತಾವು ಹೇಗೆ ತಲೆ ಬಾಗಿದ್ದೇವೆ, ಬಾಗುತ್ತಿದ್ದೇವೆ ಎಂದು ಸಿಹಿ ಬೆಲ್ಲ ಸವಿಯುವಂತೆ ಹೇಳುತ್ತಾರೆ. ಅವರು ಮದುವೆ ಆಗುತ್ತಾರೆ ಎಂಬುದು ಖುಷಿಯ ಸಂಗತಿ. ಹುಡುಗಿ ಎಂಬ ಸಲಿಗೆ ದಾಟಿ ಮಹಿಳೆ ಅನ್ನುವ ಗೌರವದ ಆವರಣೊಳಗೆ ಅವರು ಕೂರುವುದು ಅದನ್ನು ನಾನು ಸೇರಿದಂತೆ ಅವರ ಓರಗೆಯ ಸ್ನೇಹಿತರು ಸ್ವೀಕರಿಸುವ ರೀತಿ ನಿಜಕ್ಕೂ ವಿಶಿಷ್ಟವಾದದ್ದು. ಆದರೆ ಮನೆಯವರ ಒತ್ತಡಕ್ಕೆ ಬಲಿಯಾಗಿ, ಮನೆಯವರ ಕರ್ತವ್ಯ, ಗೌರವವನ್ನು ಪೂರೈಸಲು, ಹೆಚ್ಚಿಸುವುದಕ್ಕಾಗಿ ತಮ್ಮ ಸತ್ವರ್ಪಣೆ ಮಾಡಿಕೊಳ್ಳುತ್ತಾರಲ್ಲ ಅದು ನಿಜಕ್ಕೂ ಎದೆಗೆ ಬೆಂಕಿ ಹಾಕಿದ ಅನುಭವ ತರುತ್ತದೆ.
ಇಂತಹ ಹುಡುಗಿಯರನ್ನು ಕಂಡಾಗ ನನಗೆ ಏಕೆ ಕೋಪ ಬರುತ್ತದೆ ಎಂದರೆ... ಒಂದಿಷ್ಟು ಕೆಚ್ಚು ತೋರಿಸದೆ ಸಮಾಜದ ಸಿದ್ಧ ಸೂತ್ರಕ್ಕೆ ತಮ್ಮನ್ನು ತಾವು ನೈವೇದ್ಯ ಮಾಡಿಕೊಳ್ಳುತ್ತಾರಲ್ಲ ಅದಕ್ಕೆ. ಸ್ವತಃ ತಮ್ಮಲ್ಲಿ ವಿದ್ಯೆ, ಬುದ್ಧಿ ಇದ್ದರು ಕೂಡ ಅದು ಇನ್ನೊಬ್ಬನ ತೆಕ್ಕೆಯಲ್ಲಿ ಅರಳಲಿ ಎಂದು ಬಯಸುತ್ತಾರಲ್ಲ ಅದಕ್ಕೆ. ತಮ್ಮತನದ ಉಳಿವಿಗಾಗಿ ಹೋರಾಟದ ಲವಲೇಷವನ್ನು ತೋರಿಸದೇ ಅವಶೇಷವಾಗುತ್ತರಲ್ಲಾ ಅದಕ್ಕೆ. ಇಂತಹ ಮಹಿಳೆಯರಿಗೆ ಕಲ್ಪನಾ ಚಾವ್ಲ, ಸುನೀತಾ ವಿಲಿಯಮ್ಸ್, ನೀರಜಾ ಭಾನೋಟ್, ಐಶ್ವರ್ಯಾ ರೈ, ಮಮತಾ ಬ್ಯಾನರ್ಜಿ, ಪಿ ಟಿ ಉಷಾ, ಮೇಧಾ ಪಾಟ್ಕರ್ ಮುಂತಾದವರು ಪುಸ್ತಕದ ಆದರ್ಶಗಳಾಗಿ ಬಿಡುತ್ತಾರಲ್ಲ ಅದಕ್ಕೆ. ತಾವು ಅವರಂತಾಗಬೇಕು ಎಂದು ತಾವೇ ಕಂಡ ಕನಸನ್ನು ತಾವೇ ಚಿವುಟಿ ಹಾಕಿ ನಗುತ್ತಾರಲ್ಲ ಅದಕ್ಕೆ. ಸಾಹಸಿ ಮಹಿಳೆಯರ ಪಾಠ ಮಾಡುವಾಗ ಟೀಚರ್ ರ ಮನದಲ್ಲಿ "ನನಗಂತೂ ಆ ಸಾಹಸ ಮಾಡಲಾಗಲಿಲ್ಲ ಈ ಮಕ್ಕಳಾದರೂ ಮಾಡಲಿ" ಎಂಬ ಆಶಯ ಇರುತ್ತಿತ್ತೇನೋ, ಆ ಆಶಯವನ್ನು ಈಡೇರಿಸುವ ಜವಾಬ್ಧಾರಿಯನ್ನು ಈ ಹುಡುಗಿಯರು ಮತ್ತೇ ತಮ್ಮ ಮುಂದಿನ ಪೀಳಿಗೆಗೆ ದಾಟಿಸುತ್ತಾರಲ್ಲ ಅದಕ್ಕೆ. ಈ ರೀತಿ ಇರುವ ಹುಡುಗಿಯರು ಒಂದು ಮಾತನ್ನು ಗಮನದಲ್ಲಿಟ್ಟು ಕೊಳ್ಳಬೇಕು. ನೀವು ಕಾಣುವ ಕನಸು ನಿಮ್ಮದಾಗಿದ್ದರೆ ಅದನ್ನು ನನಸು ಮಾಡುವ ಜವಾಬ್ಧಾರಿ ಕೂಡ ನಿಮ್ಮದು. ಅದನ್ನು ನನಸು ಮಾಡಲು ಇನ್ನೊಬ್ಬರು ಬರಬೇಕು ಅಥವಾ ಅದನ್ನು ನನಸು ಮಾಡಲು ಇನ್ನೊಬ್ಬರು ಹೋರಾಡಲಿ ಎಂದು ಬಯಸುವುದಾದರೆ ನಿಮಗೆ ಈ ಸಮಾಜವನ್ನು ಟೀಕಿಸುವ, ದ್ವೇಷಿಸುವ ಯಾವುದೇ ನೈತಿಕತೆ ಉಳಿದಿರುವುದಿಲ್ಲ. ಸಾಯುತ್ತಿರುವ ಮಂದಿ ಬದುಕುವ ಕನಸು ಕಾಣುತ್ತಾರೆ ನಿಜ ಆದರೆ ಬದುಕುವ, ಬದುಕಲು ಹೋರಾಡುವ ಪ್ರಯತ್ನ ಮಾಡದಿದ್ದರೆ, ಕನಿಷ್ಠ ಪಕ್ಷ ಒದ್ದಾಡದಿದ್ದರೆ (ಒದ್ದಾಡುತ್ತಿದ್ದರೆ ಯಾರಾದರೂ ಪುಣ್ಯಾತ್ಮರು ಕಂಡು ನಿಮ್ಮನ್ನು ಅಸ್ಪತ್ರೆಗೆ ಸಾಗಿಸಬಹುದು, ಅಲ್ಲಿ ನೀವು ಪುನಃ ಬದುಕಿ ಬರಬಹುದು, ಮತ್ತೇ ಹೊಸ ಜೀವನ ಸಾಗಿಸಬಹುದು) ನಿಮ್ಮನ್ನು, ನಿಮ್ಮ ಕನಸುಗಳನ್ನು ಯಾರೆಂದರೆ ಯಾರು ಬದುಕಿಸುವುದಿಲ್ಲ.
ಆದರೆ ಈ ಸಾಲುಗಳನ್ನೆ ಬಡ ಮಹಿಳೆಯರಿಗೆ ಹೇಳುವಂತಿಲ್ಲ. ಅವರಿಗೆ ಅವರ ಹಕ್ಕುಗಳನ್ನು ಪಡೆಯಲು ಸಮಾಜದ ಬೆಂಗಾವಲು ಬೇಕೆ ಬೇಕು. ಅವರ ಅಭಿವೃದ್ಧಿ ಅಂದರೆ ಅದಕ್ಕೆ ಇನ್ನೂ ಅನೇಕ ಆಯಾಮಗಳಿರುತ್ತವೆ. ಅವರನ್ನು ಮೊದಲು ಮನೆಯಲ್ಲಿ ಆಗುವ ಶಾರೀರಿಕ, ಮಾನಸಿಕ ಶೋಷಣೆಗಳಿಂದ ಹೊರ ತರುವ ಕೆಲಸ ಮಾಡಬೇಕು, ಶಿಕ್ಷಣ ಕೊಡಬೇಕು ಹೀಗೆ. ಅವರು ಆದರೆ ಅವರಲ್ಲಿರುವ ಹೋರಾಟದ ಕೆಚ್ಚು ಈ ಸಾಂಪ್ರದಾಯಿಕ ಮನೆಗಳಲ್ಲಿನ ಹುಡುಗಿಯರಿಗಿಂತ ಹೆಚ್ಚಿರುತ್ತದೆ. ಅದಕ್ಕೆ ಒಂಚೂರು ತೈಲ ಎರೆದರೆ ಅವರು ಯಾವುದೇ ವ್ಯವಸ್ಥೆಯನ್ನು ಬುಡಮೇಲು ಮಾಡಬಲ್ಲರು. ಅವರು ಅಗತ್ಯಬಿದ್ದರೆ ಏಕಾಂಗಿಯಾಗಿಯೇ ಗೌರವಯುತ ಜೀವನ ಸಾಗಿಸಬಲ್ಲರು. ಆದರೆ ಅವರ ಶಿಕ್ಷಣದ ಮಟ್ಟ ಅವರನ್ನು ಕಟ್ಟಿ ಹಾಕುತ್ತದೆ. ಮತ್ತೇ ಮತ್ತೇ ಶೋಷಣೆಯ ಮಡಿಲಲ್ಲಿ ಪವಡಿಸವ ಹಾಗೇ ಮಾಡುತ್ತದೆ. ಇಂದು ಇಂತಹ ಮಹಿಳೆಯರ ಬಗ್ಗೆ ಮಾತನಾಡಲು ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಸರ್ಕಾರ ಕೂಡ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಸಾಂಪ್ರದಾಯಿಕ ಕುಟುಂಬಗಳ 'ಮಾನ ರಕ್ಷಕ' ಹುಡುಗಿಯರ ಹಿತರಕ್ಷಣೆಗೆ ಯಾರೆಂದರೆ ಯಾರೂ ಇಲ್ಲ. ದುರಂತವೆಂದರೆ ಸ್ವತಃ ಅವರು ಕೂಡ!
************************************************************************************
ಇಂದು ನಾನು ನನ್ನ ಆತ್ಮೀಯ ಗೆಳತಿಯರಾಗಿ ಇನ್ನೂ ಉಳಿದುಕೊಂಡಿರುವ ಅಥವಾ ಉಳಿದಿದ್ದಾರೆ ಎಂದು ನಾನು ಭಾವಿಸಿರುವ ಎಲ್ಲರಿಗೂ ಒಂದು ಎಸ್ಎಮ್ಎಸ್ ಮಾಡಿದ್ದೆ ಅದೇನೆಂದರೆ "ಮಹಿಳೆಯಾಗುವತ್ತ ವೇಗವಾಗಿ ಓಡುತ್ತಿರುವ ನನ್ನ ನಲ್ಮೆಯ ಹುಡುಗಿಗೆ ಈ ದಿನದ ಹಸಿ ಹಸಿ ಬಿಸಿ ಬಿಸಿ ಶುಭಕಾಮನೆಗಳು" ಎಂದು. ನನ್ನ ಬಹುತೇಕ ಗೆಳತಿಯರು ಗರಿಷ್ಠ ಇನ್ನೆರಡು ವರ್ಷಗಳಲ್ಲಿ ಮಹಿಳೆಯಾಗಲಿದ್ದಾರೆ. ಅವರು ಹುಡುಗಿಯರಾಗಿದ್ದ ಸಂದರ್ಭದಲ್ಲಿ ಅಂದರೆ ಈಗ ನಮ್ಮ ನಡುವೆ ಇರುವ ಸಲಿಗೆ ತೆರೆಗೆ ಸರಿಯಲಿದೆ, ನೆನಪುಗಳ ಪಟ್ಟಿಯಲ್ಲಿ ಒಂದು ಸ್ಥಾನ ಪಡೆಯಲಿದೆ (ಅನೇಕ ಮಂದಿ ಈಗಾಗಲೇ ಹುಡುಗಿಯರಾಗಿರುವಾಗಲೇ ಅಲ್ಲಿ ಸ್ಥಾನ ಪಡೆದಿದ್ದಾರೆ, ಬದುಕಿದ್ದಾಗಲೆ ಅವರ ಅಂತ್ಯ ಸಂಸ್ಕಾರ ನೆರವೇರಿಸಿದ್ದೇನೆ, ಇದಕ್ಕಾಗಿ ಕ್ಷಮಿಸಿ ಅನ್ನಲೇ... ಗೊತ್ತಾಗುತ್ತಿಲ್ಲ). ಅಷ್ಟರಲ್ಲಿ ಒಬ್ಬಳು ಗೆಳತಿ ಥ್ಯಾಂಕ್ಸ್ ಎಂದು ನನಗೆ ರಿಪ್ಲೈ ಮಾಡಿದಳು. ನಾನು ತಕ್ಷಣ ಮಹಿಳೆ ಆಗುವ ಬಗ್ಗೆ ನಿನ್ನ ಅಭಿಪ್ರಾಯ ಏನು ಎಂದು ಕೇಳಿದೆ... "ಏನಿಲ್ಲ" ಅಂದಳು. ಆದರೆ ಆ "ಏನಿಲ್ಲ" ಅನ್ನುವ ಪದ ಹೇಳಿದಕ್ಕಿಂತ ಹೇಳದಿದ್ದದ್ದೇ ಹೆಚ್ಚು ಎಂದು ನನಗೆ ಆ ಕ್ಷಣವೇ ಅರ್ಥವಾಗಿತ್ತು.
ಹುಡುಗಿಯೊಬ್ಬಳು ಮಹಿಳೆ ಆಗುವುದೆಂದರೆ ಏನು? ಚೆಲ್ಲು ಚೆಲ್ಲಾಗಿರುವ ಹುಡುಗಿಯೇ ಆಗಲಿ, ಘನ ಗಾಂಬಿರ್ಯದ ಹುಡುಗಿಯೇ ಆಗಲಿ ಮಹಿಳೆ ಆಗುತ್ತಾಳೆ ಎಂದರೆ ಅವಳು ಒಂದು ಹೊಸ ಜವಾಬ್ಧಾರಿಯನ್ನು ಹೊತ್ತುಕೊಂಡಂತೆಯೇ. ಆದರೆ ಅವರು ಮಹಿಳೆ ಆಗುವ ಪ್ರಕ್ರಿಯೆ ಅವರ ವೈಯುಕ್ತಿಕ ಆಯ್ಕೆಯಾಗಿರಬೇಕು ಅನ್ನುವುದು ನನ್ನ ಕನಸು. ಅವರು ಇಷ್ಟ ಪಟ್ಟು ಜವಾಬ್ಧಾರಿ ಹೊರಲು ತಯಾರಿದ್ದು ಮದುವೆ ಆದರೆ, ಮಕ್ಕಳಿಗೆ ಜನ್ಮ ನೀಡಿದರೆ ಆ ಬಗ್ಗೆ ಒಡಕು ಮಾತು ಆಡುವಂತಿಲ್ಲ. ಆದರೆ ಮದುವೆ ಮಾಡುತ್ತಾರೆ, ಅದ್ದರಿಂದ ಮದುವೆ ಆಗಬೇಕು, ಮದುವೆ ಆದ ಮೇಲೆ ಎಲ್ಲರೂ ಮಗು ಕೇಳುತ್ತಾರೆ ಅದಕ್ಕೆ ಮಕ್ಕಳನ್ನು ಹೆರಬೇಕು ಎಂಬ ಒತ್ತಾಯಕ್ಕೆ ಬಿದ್ದು ಸಾಮಾಜಿಕ ಸಂಕೋಲೆಯೊಳಗೆ ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವುದು ನಿಜಕ್ಕೂ ಅಸಹಜ. ಒಬ್ಬಳು ಹುಡುಗಿ(ಮಹಿಳೆ)ಯನ್ನು ಒತ್ತಾಯದಿಂದ ಸಂಭೋಗಿಸಿದರೆ ಅದನ್ನು ಅತ್ಯಾಚಾರ ಎಂದು ಕರೆದು ಶಿಕ್ಷೆ ನೀಡಬಹುದಾದರೆ ಒಬ್ಬಳು ಹುಡುಗಿಯನ್ನು ಬಲವಂತವಾಗಿ ಮಹಿಳೆಯನ್ನಾಗಿಸುವುದು ಕೂಡ ಅತ್ಯಾಚಾರವಲ್ಲದೇ ಮತ್ತೇನು? ಪರಿಸ್ಥಿತಿಯನ್ನು ಎದುರಿಸಿ ಬದುಕಲಾಗದೇ ಜೀವ ಕಳೆದುಕೊಳ್ಳುವುದನ್ನು ಆತ್ಮಹತ್ಯೆ ಎನ್ನುವುದಾದರೆ ಪರಿಸ್ಥಿತಿಯನ್ನು ಎದುರಿಸಲಾಗದೇ ತನ್ನತನವನ್ನು ಕಳೆದುಕೊಳ್ಳುವುದು ಕೂಡ ಆತ್ಮಹತ್ಯೆಯಲ್ಲವೇ?
ನನಗೆ ಬೇಸರವಾಗುವುದು, ದುಃಖವಾಗುವುದು ಅದೇ.... ಇನ್ನೂ ಈ ಜೀವಂತ ಶವಗಳ ಮುಖ ನೋಡುತ್ತಿರಬೇಕಲ್ಲ ಎಂಬುದು.... ಆದರೆ ಎಲ್ಲೋ ಒಂದು ಕಡೆ ಇವರಲ್ಲಿ ಒಬ್ಬಳಾದರೂ ಎದ್ದು ನಿಲ್ಲಬಲ್ಲಳೇ, ಗೆದ್ದು ಸಾಗಬಲ್ಲಳೇ, ಉಳಿದವರಿಗೂ ಗೆಲುವಿನ ರುಚಿ ನೀಡಬಲ್ಲಳೇ, ಕನಿಷ್ಠ ಪಕ್ಷ ಮಿಸುಕಾಡಿಯಾದರೂ ಒಂದೇ ಒಂದು ಕಿಡಿ ಹೊತ್ತಿಸಬಲ್ಲಳೇ...ಎಂಬ ಕಾತರ ನನ್ನದು... ಕಾದು ನೋಡುತ್ತಿದ್ದೇನೆ.... ಕಾಯುವುದೇ ಜೀವನ... ಜೀವನ ಎಂಬುದು ಕಾಯುವುದು, ಕಾಯಿಸುವುದು ಆಗಿರುವ ಈ ಹೊತ್ತಲ್ಲಿ!
ಮಹಿಳೆಯರನ್ನು ಹೊಗಳಿ ಅಟ್ಟಕೇರಿಸಲು ಇರುವ ದಿನ...
ಮಹಿಳೆಯರ ಸಶಕ್ತಿಕರಣಕ್ಕಾಗಿ ಹೋರಾಡಲು ಮೂಹೂರ್ತವಿಡುವ ದಿನ...
ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕಂಠ ಶೋಷಣೆ ಮಾಡಲಿರುವ ಸುದಿನ...
ಮತ್ತೇ, ಉಳಿದ ೩೬೪ ದಿನಗಳ ಕಥೆ - ವ್ಯಥೆಗೆ ಕೊನೆ ಹಾಡಿ ನಾಳಿನ ಭರವಸೆಗೆ ಹೊಸ ಭಾಷ್ಯ ಬರೆಸುವ ಪಣ ತೊಡುವ ದಿನ...
ಹೌದೌದು ಎಲ್ಲವೂ ಹೌದು... ಯಾರಿಗೆ ಉಳ್ಳವರಿಗೆ... ಆಧುನಿಕತೆಯ ರಾಜಪಥದಲ್ಲಿ ರಾಜರಂತೆ ನಡೆಯುವವರಿಗೆ! ಆದರೆ ಅದೇ ದಾರಿಯಲ್ಲಿ ತರಗೆಲೆಯಂತೆ ಬಿದ್ದು ಅಸ್ತಿತ್ವ ಕಳೆದುಕೊಂಡು ಗಾಳಿ ಬಂದ ಕಡೆಗೆ ಅತ್ತಿಂದಿತ್ತ ಇತ್ತಿಂದಿತ್ತ ಹಾರುತ್ತಾ, ಯಾವುದೋ ಕುಟುಂಬದ ವಟ ವೃಕ್ಷದ ಬುಡಕ್ಕೆ ಬಿದ್ದು ತನ್ನ ಸತ್ವವನ್ನು ಅದಕ್ಕೆ ಧಾರೆಯೆರೆಯುವ ಬಹುಪಾಲು ಮಹಿಳಾ ಸಂಕುಲಕ್ಕೆ ಎಲ್ಲ ದಿನಗಳೂ ಕೂಡ ಮತ್ತೊಂದು ದಿನಗಳೇ... ಎಲ್ಲ ಕ್ಷಣಗಳು ಕೂಡ ಜೀವಚ್ಛವಗೊಳಿಸುವ ಕ್ಷಣಗಳೇ ಆದರೂ ಅಲ್ಲೊಂದು ಇಲ್ಲೊಂದು ಖುಷಿಯ ಒರತೆ ಕಾಣುವ, ಆ ಒರತೆಯಲ್ಲೇ ತನ್ನೆಲ್ಲ ಕೊರತೆಯನ್ನು ತುಂಬಿಕೊಳ್ಳುವ ನನ್ನೆಲ್ಲ ಅಕ್ಕತಂಗಿಯಂದಿರಿಗೆ, ತಾಯಂದಿರಿಗೆ, ಗೆಳತಿಯಂದಿರಿಗೆ ಪ್ರಣಾಮ ಹೇಳಲೇ, ಧಿಕ್ಕಾರ ಕೂಗಲೇ ಗೊತ್ತಾಗುತ್ತಿಲ್ಲ.
ನನಗೆ ನನ್ನ ಪರಿಸರದ ಅನೇಕ ಹುಡುಗಿಯರನ್ನು ಕಂಡಾಗ, ಮಾತನಾಡಿಸಿದಾಗ ಇವರು ಏಕೆ ಹೀಗೆ? ಎಂದು ಅನಿಸುತ್ತದೆ. ಒಮ್ಮೊಮ್ಮೆ ಅಸಹಾಯಕತೆ, ಕೋಪ, ವಾಕರಿಕೆ ಎಲ್ಲವೂ ಎದೆಯೊಳಗೆ ಹುಟ್ಟಿಕೊಳ್ಳುತ್ತದೆ. ನನ್ನ ಪರಿಸರದಲ್ಲಿರುವ ಬಹುತೇಕ ಹುಡುಗಿಯರು ಸಾಂಪ್ರದಾಯಿಕ ಮನೆತನದವರು. ಇಂದಿಗೂ ನರಳುತ್ತಿರುವ ಹುಡುಗಿಯರು ಹೆಚ್ಚಾಗಿ ಬಡ ಕುಟುಂಬಗಳಲ್ಲಿದ್ದರೆ, ಕೊರಗುತ್ತಿರುವುದು ಮಧ್ಯಮ ವರ್ಗದ ಸಾಂಪ್ರದಾಯಿಕ ಮನೆಗಳ ಹುಡುಗಿಯರು. ಅವರು ನಾಲ್ಕು ಕೋಣೆ, ೫ ಕಿಟಕಿ, ೨ ಬಾಗಿಲಿನೊಳಗೆ ಬಂಧಿಯಾಗಿದ್ದರೆ. ಅವರು ಉದ್ಯೋಗಕ್ಕೆ ಹೋಗಿದ್ದರು ಮನೆಯ ಮಾರ್ಯಾದೆಯೆಂಬ ಚಾವಡಿಯ ನಡುಗಂಬ (ಈಗ ಎಲ್ಲ ಆರ್ಸಿಸಿ ಮನೆಯಾಗಿದೆ, ಮನೆ ಕಟ್ಟು ರೀತಿಯಲ್ಲಿ ಅಧುನಿಕತೆ ಬಂದಿದ್ದರು ಮನ ಕಟ್ಟುವ ರೀತಿಯಲ್ಲಿ ಬದಲಾವಣೆ ಆಗದಿರುವುದು ವಿಪರ್ಯಾಸ)ಕ್ಕೆ ಬಿಗಿದಿರುವ ಹಗ್ಗ, ಸರಪಳಿ ಏನು ಬೇಕಾದರೂ ಹೇಳಿ ಅದು ಅವರ ಕುತ್ತಿಗೆಗೆ ಭದ್ರವಾಗಿ ಸುತ್ತು ಹಾಕಲ್ಟಟ್ಟಿದೆ.
ನಾನು ನನ್ನ ಜೊತೆ ಬೆಳೆದ ಅನೇಕ ಹುಡುಗಿಯರ ಪಕ್ಕ ಕುಳಿತು ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಪಿಯುಸಿಯಲ್ಲಿ ಅದು ಆಗಬೇಕು, ಇದು ಮಾಡಬೇಕು, ನಾನು ಹಾಗೇ, ನಾನು ಹೀಗೆಯೇ ಇರುತ್ತೇನೆ ಎಂದವರು ಇಂದು ನನ್ನನ್ನು ಅವರ ಪಕ್ಕ ಕೂರಲೂ ಕೂಡ ಬಿಡುವುದಿಲ್ಲ. ಅದು ನನಗೆ ಬೇಸರದ ವಿಷಯವೇ ಅಲ್ಲ. ಆದರೆ ದುರಂತವೆಂದರೆ ಅವರು ನನ್ನನ್ನು ಬಿಡಿ, ತಮ್ಮ ಕನಸುಗಳನ್ನು ಕೂಡ ತಮ್ಮ ಜೊತೆ ಇಟ್ಟುಕೊಂಡಿಲ್ಲ!
ಮತ್ತೆ ಅದೇನೋ ಹಿಂದಿನ ಸಲುಗೆಯಲ್ಲಿ ಅವರನ್ನು ಕೆಣಕಿದರೆ ಅವರು ತಮ್ಮ ಪಥ ಭ್ರಷ್ಟತೆಯನ್ನು ನಗು ನಗುತ್ತಾ ಹೇಳುತ್ತಾರೆ. ಮನೆಯ ಅನಿವಾರ್ಯತೆಗಾಗಿ ತಾವು ಮಾಡುತ್ತಿರುವ ತ್ಯಾಗದ ಬಗ್ಗೆ ಹೆಮ್ಮೆ ಪಡುತ್ತಾರೆ. ಮದುವೆ ಅಗಲೇ ಬೇಕು ಎಂಬ ಮನೆಯವರ ಒತ್ತಡಕ್ಕೆ ತಾವು ಹೇಗೆ ತಲೆ ಬಾಗಿದ್ದೇವೆ, ಬಾಗುತ್ತಿದ್ದೇವೆ ಎಂದು ಸಿಹಿ ಬೆಲ್ಲ ಸವಿಯುವಂತೆ ಹೇಳುತ್ತಾರೆ. ಅವರು ಮದುವೆ ಆಗುತ್ತಾರೆ ಎಂಬುದು ಖುಷಿಯ ಸಂಗತಿ. ಹುಡುಗಿ ಎಂಬ ಸಲಿಗೆ ದಾಟಿ ಮಹಿಳೆ ಅನ್ನುವ ಗೌರವದ ಆವರಣೊಳಗೆ ಅವರು ಕೂರುವುದು ಅದನ್ನು ನಾನು ಸೇರಿದಂತೆ ಅವರ ಓರಗೆಯ ಸ್ನೇಹಿತರು ಸ್ವೀಕರಿಸುವ ರೀತಿ ನಿಜಕ್ಕೂ ವಿಶಿಷ್ಟವಾದದ್ದು. ಆದರೆ ಮನೆಯವರ ಒತ್ತಡಕ್ಕೆ ಬಲಿಯಾಗಿ, ಮನೆಯವರ ಕರ್ತವ್ಯ, ಗೌರವವನ್ನು ಪೂರೈಸಲು, ಹೆಚ್ಚಿಸುವುದಕ್ಕಾಗಿ ತಮ್ಮ ಸತ್ವರ್ಪಣೆ ಮಾಡಿಕೊಳ್ಳುತ್ತಾರಲ್ಲ ಅದು ನಿಜಕ್ಕೂ ಎದೆಗೆ ಬೆಂಕಿ ಹಾಕಿದ ಅನುಭವ ತರುತ್ತದೆ.
ಇಂತಹ ಹುಡುಗಿಯರನ್ನು ಕಂಡಾಗ ನನಗೆ ಏಕೆ ಕೋಪ ಬರುತ್ತದೆ ಎಂದರೆ... ಒಂದಿಷ್ಟು ಕೆಚ್ಚು ತೋರಿಸದೆ ಸಮಾಜದ ಸಿದ್ಧ ಸೂತ್ರಕ್ಕೆ ತಮ್ಮನ್ನು ತಾವು ನೈವೇದ್ಯ ಮಾಡಿಕೊಳ್ಳುತ್ತಾರಲ್ಲ ಅದಕ್ಕೆ. ಸ್ವತಃ ತಮ್ಮಲ್ಲಿ ವಿದ್ಯೆ, ಬುದ್ಧಿ ಇದ್ದರು ಕೂಡ ಅದು ಇನ್ನೊಬ್ಬನ ತೆಕ್ಕೆಯಲ್ಲಿ ಅರಳಲಿ ಎಂದು ಬಯಸುತ್ತಾರಲ್ಲ ಅದಕ್ಕೆ. ತಮ್ಮತನದ ಉಳಿವಿಗಾಗಿ ಹೋರಾಟದ ಲವಲೇಷವನ್ನು ತೋರಿಸದೇ ಅವಶೇಷವಾಗುತ್ತರಲ್ಲಾ ಅದಕ್ಕೆ. ಇಂತಹ ಮಹಿಳೆಯರಿಗೆ ಕಲ್ಪನಾ ಚಾವ್ಲ, ಸುನೀತಾ ವಿಲಿಯಮ್ಸ್, ನೀರಜಾ ಭಾನೋಟ್, ಐಶ್ವರ್ಯಾ ರೈ, ಮಮತಾ ಬ್ಯಾನರ್ಜಿ, ಪಿ ಟಿ ಉಷಾ, ಮೇಧಾ ಪಾಟ್ಕರ್ ಮುಂತಾದವರು ಪುಸ್ತಕದ ಆದರ್ಶಗಳಾಗಿ ಬಿಡುತ್ತಾರಲ್ಲ ಅದಕ್ಕೆ. ತಾವು ಅವರಂತಾಗಬೇಕು ಎಂದು ತಾವೇ ಕಂಡ ಕನಸನ್ನು ತಾವೇ ಚಿವುಟಿ ಹಾಕಿ ನಗುತ್ತಾರಲ್ಲ ಅದಕ್ಕೆ. ಸಾಹಸಿ ಮಹಿಳೆಯರ ಪಾಠ ಮಾಡುವಾಗ ಟೀಚರ್ ರ ಮನದಲ್ಲಿ "ನನಗಂತೂ ಆ ಸಾಹಸ ಮಾಡಲಾಗಲಿಲ್ಲ ಈ ಮಕ್ಕಳಾದರೂ ಮಾಡಲಿ" ಎಂಬ ಆಶಯ ಇರುತ್ತಿತ್ತೇನೋ, ಆ ಆಶಯವನ್ನು ಈಡೇರಿಸುವ ಜವಾಬ್ಧಾರಿಯನ್ನು ಈ ಹುಡುಗಿಯರು ಮತ್ತೇ ತಮ್ಮ ಮುಂದಿನ ಪೀಳಿಗೆಗೆ ದಾಟಿಸುತ್ತಾರಲ್ಲ ಅದಕ್ಕೆ. ಈ ರೀತಿ ಇರುವ ಹುಡುಗಿಯರು ಒಂದು ಮಾತನ್ನು ಗಮನದಲ್ಲಿಟ್ಟು ಕೊಳ್ಳಬೇಕು. ನೀವು ಕಾಣುವ ಕನಸು ನಿಮ್ಮದಾಗಿದ್ದರೆ ಅದನ್ನು ನನಸು ಮಾಡುವ ಜವಾಬ್ಧಾರಿ ಕೂಡ ನಿಮ್ಮದು. ಅದನ್ನು ನನಸು ಮಾಡಲು ಇನ್ನೊಬ್ಬರು ಬರಬೇಕು ಅಥವಾ ಅದನ್ನು ನನಸು ಮಾಡಲು ಇನ್ನೊಬ್ಬರು ಹೋರಾಡಲಿ ಎಂದು ಬಯಸುವುದಾದರೆ ನಿಮಗೆ ಈ ಸಮಾಜವನ್ನು ಟೀಕಿಸುವ, ದ್ವೇಷಿಸುವ ಯಾವುದೇ ನೈತಿಕತೆ ಉಳಿದಿರುವುದಿಲ್ಲ. ಸಾಯುತ್ತಿರುವ ಮಂದಿ ಬದುಕುವ ಕನಸು ಕಾಣುತ್ತಾರೆ ನಿಜ ಆದರೆ ಬದುಕುವ, ಬದುಕಲು ಹೋರಾಡುವ ಪ್ರಯತ್ನ ಮಾಡದಿದ್ದರೆ, ಕನಿಷ್ಠ ಪಕ್ಷ ಒದ್ದಾಡದಿದ್ದರೆ (ಒದ್ದಾಡುತ್ತಿದ್ದರೆ ಯಾರಾದರೂ ಪುಣ್ಯಾತ್ಮರು ಕಂಡು ನಿಮ್ಮನ್ನು ಅಸ್ಪತ್ರೆಗೆ ಸಾಗಿಸಬಹುದು, ಅಲ್ಲಿ ನೀವು ಪುನಃ ಬದುಕಿ ಬರಬಹುದು, ಮತ್ತೇ ಹೊಸ ಜೀವನ ಸಾಗಿಸಬಹುದು) ನಿಮ್ಮನ್ನು, ನಿಮ್ಮ ಕನಸುಗಳನ್ನು ಯಾರೆಂದರೆ ಯಾರು ಬದುಕಿಸುವುದಿಲ್ಲ.
ಆದರೆ ಈ ಸಾಲುಗಳನ್ನೆ ಬಡ ಮಹಿಳೆಯರಿಗೆ ಹೇಳುವಂತಿಲ್ಲ. ಅವರಿಗೆ ಅವರ ಹಕ್ಕುಗಳನ್ನು ಪಡೆಯಲು ಸಮಾಜದ ಬೆಂಗಾವಲು ಬೇಕೆ ಬೇಕು. ಅವರ ಅಭಿವೃದ್ಧಿ ಅಂದರೆ ಅದಕ್ಕೆ ಇನ್ನೂ ಅನೇಕ ಆಯಾಮಗಳಿರುತ್ತವೆ. ಅವರನ್ನು ಮೊದಲು ಮನೆಯಲ್ಲಿ ಆಗುವ ಶಾರೀರಿಕ, ಮಾನಸಿಕ ಶೋಷಣೆಗಳಿಂದ ಹೊರ ತರುವ ಕೆಲಸ ಮಾಡಬೇಕು, ಶಿಕ್ಷಣ ಕೊಡಬೇಕು ಹೀಗೆ. ಅವರು ಆದರೆ ಅವರಲ್ಲಿರುವ ಹೋರಾಟದ ಕೆಚ್ಚು ಈ ಸಾಂಪ್ರದಾಯಿಕ ಮನೆಗಳಲ್ಲಿನ ಹುಡುಗಿಯರಿಗಿಂತ ಹೆಚ್ಚಿರುತ್ತದೆ. ಅದಕ್ಕೆ ಒಂಚೂರು ತೈಲ ಎರೆದರೆ ಅವರು ಯಾವುದೇ ವ್ಯವಸ್ಥೆಯನ್ನು ಬುಡಮೇಲು ಮಾಡಬಲ್ಲರು. ಅವರು ಅಗತ್ಯಬಿದ್ದರೆ ಏಕಾಂಗಿಯಾಗಿಯೇ ಗೌರವಯುತ ಜೀವನ ಸಾಗಿಸಬಲ್ಲರು. ಆದರೆ ಅವರ ಶಿಕ್ಷಣದ ಮಟ್ಟ ಅವರನ್ನು ಕಟ್ಟಿ ಹಾಕುತ್ತದೆ. ಮತ್ತೇ ಮತ್ತೇ ಶೋಷಣೆಯ ಮಡಿಲಲ್ಲಿ ಪವಡಿಸವ ಹಾಗೇ ಮಾಡುತ್ತದೆ. ಇಂದು ಇಂತಹ ಮಹಿಳೆಯರ ಬಗ್ಗೆ ಮಾತನಾಡಲು ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಸರ್ಕಾರ ಕೂಡ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಸಾಂಪ್ರದಾಯಿಕ ಕುಟುಂಬಗಳ 'ಮಾನ ರಕ್ಷಕ' ಹುಡುಗಿಯರ ಹಿತರಕ್ಷಣೆಗೆ ಯಾರೆಂದರೆ ಯಾರೂ ಇಲ್ಲ. ದುರಂತವೆಂದರೆ ಸ್ವತಃ ಅವರು ಕೂಡ!
************************************************************************************
ಇಂದು ನಾನು ನನ್ನ ಆತ್ಮೀಯ ಗೆಳತಿಯರಾಗಿ ಇನ್ನೂ ಉಳಿದುಕೊಂಡಿರುವ ಅಥವಾ ಉಳಿದಿದ್ದಾರೆ ಎಂದು ನಾನು ಭಾವಿಸಿರುವ ಎಲ್ಲರಿಗೂ ಒಂದು ಎಸ್ಎಮ್ಎಸ್ ಮಾಡಿದ್ದೆ ಅದೇನೆಂದರೆ "ಮಹಿಳೆಯಾಗುವತ್ತ ವೇಗವಾಗಿ ಓಡುತ್ತಿರುವ ನನ್ನ ನಲ್ಮೆಯ ಹುಡುಗಿಗೆ ಈ ದಿನದ ಹಸಿ ಹಸಿ ಬಿಸಿ ಬಿಸಿ ಶುಭಕಾಮನೆಗಳು" ಎಂದು. ನನ್ನ ಬಹುತೇಕ ಗೆಳತಿಯರು ಗರಿಷ್ಠ ಇನ್ನೆರಡು ವರ್ಷಗಳಲ್ಲಿ ಮಹಿಳೆಯಾಗಲಿದ್ದಾರೆ. ಅವರು ಹುಡುಗಿಯರಾಗಿದ್ದ ಸಂದರ್ಭದಲ್ಲಿ ಅಂದರೆ ಈಗ ನಮ್ಮ ನಡುವೆ ಇರುವ ಸಲಿಗೆ ತೆರೆಗೆ ಸರಿಯಲಿದೆ, ನೆನಪುಗಳ ಪಟ್ಟಿಯಲ್ಲಿ ಒಂದು ಸ್ಥಾನ ಪಡೆಯಲಿದೆ (ಅನೇಕ ಮಂದಿ ಈಗಾಗಲೇ ಹುಡುಗಿಯರಾಗಿರುವಾಗಲೇ ಅಲ್ಲಿ ಸ್ಥಾನ ಪಡೆದಿದ್ದಾರೆ, ಬದುಕಿದ್ದಾಗಲೆ ಅವರ ಅಂತ್ಯ ಸಂಸ್ಕಾರ ನೆರವೇರಿಸಿದ್ದೇನೆ, ಇದಕ್ಕಾಗಿ ಕ್ಷಮಿಸಿ ಅನ್ನಲೇ... ಗೊತ್ತಾಗುತ್ತಿಲ್ಲ). ಅಷ್ಟರಲ್ಲಿ ಒಬ್ಬಳು ಗೆಳತಿ ಥ್ಯಾಂಕ್ಸ್ ಎಂದು ನನಗೆ ರಿಪ್ಲೈ ಮಾಡಿದಳು. ನಾನು ತಕ್ಷಣ ಮಹಿಳೆ ಆಗುವ ಬಗ್ಗೆ ನಿನ್ನ ಅಭಿಪ್ರಾಯ ಏನು ಎಂದು ಕೇಳಿದೆ... "ಏನಿಲ್ಲ" ಅಂದಳು. ಆದರೆ ಆ "ಏನಿಲ್ಲ" ಅನ್ನುವ ಪದ ಹೇಳಿದಕ್ಕಿಂತ ಹೇಳದಿದ್ದದ್ದೇ ಹೆಚ್ಚು ಎಂದು ನನಗೆ ಆ ಕ್ಷಣವೇ ಅರ್ಥವಾಗಿತ್ತು.
ಹುಡುಗಿಯೊಬ್ಬಳು ಮಹಿಳೆ ಆಗುವುದೆಂದರೆ ಏನು? ಚೆಲ್ಲು ಚೆಲ್ಲಾಗಿರುವ ಹುಡುಗಿಯೇ ಆಗಲಿ, ಘನ ಗಾಂಬಿರ್ಯದ ಹುಡುಗಿಯೇ ಆಗಲಿ ಮಹಿಳೆ ಆಗುತ್ತಾಳೆ ಎಂದರೆ ಅವಳು ಒಂದು ಹೊಸ ಜವಾಬ್ಧಾರಿಯನ್ನು ಹೊತ್ತುಕೊಂಡಂತೆಯೇ. ಆದರೆ ಅವರು ಮಹಿಳೆ ಆಗುವ ಪ್ರಕ್ರಿಯೆ ಅವರ ವೈಯುಕ್ತಿಕ ಆಯ್ಕೆಯಾಗಿರಬೇಕು ಅನ್ನುವುದು ನನ್ನ ಕನಸು. ಅವರು ಇಷ್ಟ ಪಟ್ಟು ಜವಾಬ್ಧಾರಿ ಹೊರಲು ತಯಾರಿದ್ದು ಮದುವೆ ಆದರೆ, ಮಕ್ಕಳಿಗೆ ಜನ್ಮ ನೀಡಿದರೆ ಆ ಬಗ್ಗೆ ಒಡಕು ಮಾತು ಆಡುವಂತಿಲ್ಲ. ಆದರೆ ಮದುವೆ ಮಾಡುತ್ತಾರೆ, ಅದ್ದರಿಂದ ಮದುವೆ ಆಗಬೇಕು, ಮದುವೆ ಆದ ಮೇಲೆ ಎಲ್ಲರೂ ಮಗು ಕೇಳುತ್ತಾರೆ ಅದಕ್ಕೆ ಮಕ್ಕಳನ್ನು ಹೆರಬೇಕು ಎಂಬ ಒತ್ತಾಯಕ್ಕೆ ಬಿದ್ದು ಸಾಮಾಜಿಕ ಸಂಕೋಲೆಯೊಳಗೆ ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವುದು ನಿಜಕ್ಕೂ ಅಸಹಜ. ಒಬ್ಬಳು ಹುಡುಗಿ(ಮಹಿಳೆ)ಯನ್ನು ಒತ್ತಾಯದಿಂದ ಸಂಭೋಗಿಸಿದರೆ ಅದನ್ನು ಅತ್ಯಾಚಾರ ಎಂದು ಕರೆದು ಶಿಕ್ಷೆ ನೀಡಬಹುದಾದರೆ ಒಬ್ಬಳು ಹುಡುಗಿಯನ್ನು ಬಲವಂತವಾಗಿ ಮಹಿಳೆಯನ್ನಾಗಿಸುವುದು ಕೂಡ ಅತ್ಯಾಚಾರವಲ್ಲದೇ ಮತ್ತೇನು? ಪರಿಸ್ಥಿತಿಯನ್ನು ಎದುರಿಸಿ ಬದುಕಲಾಗದೇ ಜೀವ ಕಳೆದುಕೊಳ್ಳುವುದನ್ನು ಆತ್ಮಹತ್ಯೆ ಎನ್ನುವುದಾದರೆ ಪರಿಸ್ಥಿತಿಯನ್ನು ಎದುರಿಸಲಾಗದೇ ತನ್ನತನವನ್ನು ಕಳೆದುಕೊಳ್ಳುವುದು ಕೂಡ ಆತ್ಮಹತ್ಯೆಯಲ್ಲವೇ?
ನನಗೆ ಬೇಸರವಾಗುವುದು, ದುಃಖವಾಗುವುದು ಅದೇ.... ಇನ್ನೂ ಈ ಜೀವಂತ ಶವಗಳ ಮುಖ ನೋಡುತ್ತಿರಬೇಕಲ್ಲ ಎಂಬುದು.... ಆದರೆ ಎಲ್ಲೋ ಒಂದು ಕಡೆ ಇವರಲ್ಲಿ ಒಬ್ಬಳಾದರೂ ಎದ್ದು ನಿಲ್ಲಬಲ್ಲಳೇ, ಗೆದ್ದು ಸಾಗಬಲ್ಲಳೇ, ಉಳಿದವರಿಗೂ ಗೆಲುವಿನ ರುಚಿ ನೀಡಬಲ್ಲಳೇ, ಕನಿಷ್ಠ ಪಕ್ಷ ಮಿಸುಕಾಡಿಯಾದರೂ ಒಂದೇ ಒಂದು ಕಿಡಿ ಹೊತ್ತಿಸಬಲ್ಲಳೇ...ಎಂಬ ಕಾತರ ನನ್ನದು... ಕಾದು ನೋಡುತ್ತಿದ್ದೇನೆ.... ಕಾಯುವುದೇ ಜೀವನ... ಜೀವನ ಎಂಬುದು ಕಾಯುವುದು, ಕಾಯಿಸುವುದು ಆಗಿರುವ ಈ ಹೊತ್ತಲ್ಲಿ!
Friday, February 25, 2011
ಎದೆಯ ತುಂಬ ದೆಹಲಿಯದ್ದೇ ಗಾನ...
ದೆಹಲಿ ದೇಶದ ರಾಜಧಾನಿಯೂ ಹೌದು. ದೇಶದ ಎಲ್ಲ ಸಮಸ್ಯೆಗಳ ರಾಜಧಾನಿಯೂ ಹೌದು! ದೆಹಲಿ ನೆಟ್ಟಗಿದ್ದರೆ ದೇಶ ನೆಟ್ಟಗಿರುತ್ತಿತ್ತು. ದೆಹಲಿ ಸೊಟ್ಟಗಿರುವುದರಿಂದಲೇ ದೇಶವೂ ಸೊಟ್ಟಗಿದೆ! ಎರಡೇ ಸಾಲಿನ ತೀರ್ಪಿದು.
ಭಾರತದಂತ ವಿವಿಧತೆಯನ್ನೇ ತನ್ನ ಹಿರಿಮೆ ಮಾಡಿಕೊಂಡ ದೇಶದಲ್ಲಿ ಈ ರೀತಿಯ ತೀರ್ಪು ಅಸಂಬದ್ಧವಾದದ್ದು ಅಥವಾ ಬಾಲಿಶತನದಿಂದ ಕೂಡಿದ್ದು ಎಂದು ನಿಮಗೆ ಅನಿಸಿ ಬಿಡಲು ಅರೆ ಕ್ಷಣ ಸಾಕು. ಆದರೆ ಇದು ನಿಜ ಎಂದು ಒಪ್ಪಿಕೊಳ್ಳಬೇಕಾದರೆ ನಮ್ಮ ದೇಶದ ಇತಿಹಾಸ ಮತ್ತು ವರ್ತಮಾನಗಳ ಒಂದಿಷ್ಟು ಅರಿವಾದರೂ ಬೇಕು.
ದೆಹಲಿಗೆ ಸುಮ್ಮನಿದ್ದು ಗೊತ್ತಿಲ್ಲ ಅಥವಾ ದೆಹಲಿಯನ್ನು ಸುಮ್ಮನಿರಲೂ ಯಾರೂ ಬಿಟ್ಟಿಲ್ಲ. ತುರಿಸಿಕೊಳ್ಳುತ್ತಿರುವುದೇ ದೆಹಲಿಯ ಖಯಾಲಿ! ಪುರಾಣ, ಇತಿಹಾಸಗಳ ಪುಟದಲ್ಲಿ ದೆಹಲಿಯ ಬಗೆಗಿನ ವಿವರಣೆಗಳು ಇದಕ್ಕಿಂತ ಹೆಚ್ಚಾಗಿ ದೆಹಲಿ ಕೇಂದ್ರಿತ ಆಗುಹೋಗುಗಳು ಸ್ಪುಟವಾಗಿ ದೊರೆಯುತ್ತವೆ, ಈ ವಿಷಯದಲ್ಲಿ ದೇಶದ ಇತರ ಮಹಾನಗರಗಳಾದ ಕೋಲ್ಕತ್ತಾ, ಮುಂಬೈ, ಚೆನೈ, ಬೆಂಗಳೂರು, ಹೈದರಾಬಾದ್ಗಳು ಬರೀ ಬಚ್ಚಾಗಳು!
ಇಂದ್ರಪ್ರಸ್ಥ, ಕುರುಕ್ಷೇತ್ರ, ಹಸ್ತಿನಾಪುರ ಮುಂತಾದವು ಪುರಾಣದಲ್ಲಿನ ದೆಹಲಿ ಆದರೆ ಅನಂತರ ಮೊಘಲರ ದೆಹಲಿ, ಬ್ರಿಟಿಷರ ದೆಹಲಿ ಮತ್ತೇ ಈಗ ...? ಯಾರ ದೆಹಲಿ? ಅಥವಾ ಯಾರದ್ದೋ ದೆಹಲಿ... ಎಲ್ಲರ ದೆಹಲಿ ಆಗಬೇಕಾದ ಪ್ರಸಂಗದಲ್ಲಿ ಯಾರದ್ದೂ ಆಗಲಾರದೆ ಹೋಗುವ ಸ್ಥಿತಿ. ಒಂದು ರೀತಿಯಲ್ಲಿ ವೇಷ್ಯೆಯಂತೆ! ಸುಖಕ್ಕೆ ಬೇಕು... ಅನಿವಾರ್ಯತೆಗೆ ಬೇಕು... ಆದರೆ ಅದರ ಕಣ್ಣೀರು ಬೇಡವೇ ಬೇಡ.
ಇತಿಹಾಸದ ಆಧಾರದಲ್ಲಿ ನೋಡುವುದಾದರೆ ದೆಹಲಿಯ ಸ್ಥಾಪನೆ ತೋಮರ್ ವಂಶಸ್ಥ ಅನಂಗಪಾಲನಿಂದ ಆಗಿತ್ತು. ಅನಂತರ ಮಾಮ್ಲುಕರು, ಖಿಲ್ಜಿ, ತುಘಲಕ್, ಸೈಯದಿಗಳು, ಲೋಧಿ, ಮುಘಲರು ಮತ್ತು ಬ್ರಿಟಿಷರು ಇಲ್ಲಿಂದ ರಾಜ್ಯಭಾರ ಮಾಡಿದ್ದರು. ಆದರೆ ದೆಹಲಿಗೆ ತಾಕಿಕೊಂಡೇ ಇರುವ ನೊಯ್ಡಾದ ಶ್ರೀನಿವಾಸಪುರಿಯಲ್ಲಿ ಕ್ರಿ. ಪೂ ೩೦೦ರ ಕಾಲಘಟ್ಟದ ಆಶೋಕನ ಕಾಲದ ಶಾಸನ ಪತ್ತೆಯಾಗಿರುವುದು ಮತ್ತು ಕುತುಬ್ ಮಿನಾರ್ನ ಬಳಿ ಇರುವ ಉಕ್ಕಿನ ಕಂಬ ಸರಿಸುಮಾರು ಇದೇ ಕಾಲಕ್ಕೆ ಸೇರಿರುವುದು ಈ ಪ್ರದೇಶದಲ್ಲಿದ್ದ ಜನವಸತಿ ಅಥವಾ ಜನ ಚಟುವಟಿಕೆಯ ಇತಿಹಾಸವನ್ನು ಇನ್ನೂ ಹಿಂದೊಯ್ಯುತ್ತದೆ. ಹಾಗೇ ಹಿಂದಿನ ದೆಹಲಿ ಅಂದರೆ ಈಗಿನ ದೆಹಲಿಯನ್ನೇ ಆಧಾರವಾಗಿಟ್ಟು ನೋಡಲಾಗದು. ಒಂದೊಂದು ಕಾಲದಲ್ಲಿ ಈಗ ವಿಶಾಲವಾಗಿ ಹಬ್ಬಿರುವ ದೆಹಲಿಯ ಒಂದೊಂದು ಭಾಗ ಪ್ರಾಮುಖ್ಯತೆ ಪಡೆದುಕೊಂಡಿತ್ತು.
ಆದರೆ ನಾವು ಮಹಾಭಾರತದಲ್ಲಿನ ದೆಹಲಿಯ ಉಲ್ಲೇಖವನ್ನು ಗಂಭೀರವಾಗಿ ಪರಿಗಣಿಸಿದ್ದೇ ಆದರೆ ಕ್ರಿ ಪೂ ೨೫೦೦ರಷ್ಟು ಹಿಂದೆಯೇ ದೆಹಲಿಯ ಅಸ್ತಿತ್ವವಿತ್ತು ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆಗ ಈ ಲೇಖನದಲ್ಲಿ ಮೊದಲೇ ಹೇಳಿದಂತೆ ದೆಹಲಿಯನ್ನು ಇಂದ್ರಪ್ರಸ್ಥ ಎಂದು ಕರೆಯುತ್ತಿದ್ದರು. ಇಂದ್ರಪ್ರಸ್ಥ ಎಂಬ ಪ್ರದೇಶ ಆಧುನಿಕ ದೆಹಲಿಯಲ್ಲಿ ೧೯ನೇ ಶತಮಾನದವರೆಗೂ ಇತ್ತು! ಆದರೆ ನವದೆಹಲಿ ಕಟ್ಟುವ ಬ್ರಿಟಿಷರ ಆಸೆಗೆ ಈ ಪ್ರದೇಶ ಹೇಳಹೆಸರಿಲ್ಲದಾಯಿತು. ಪುರಾಣ ಕಿಲಾ ಬಳಿ ಇಂದ್ರಪ್ರಸ್ಥ ಇದ್ದದ್ದಕ್ಕೆ ಪುರಾತತ್ವ ಸಾಕ್ಷ್ಯಗಳು ದೊರಕಿವೆ. ಇಂದಿನ ನವದೆಹಲಿಯ ವಿನ್ಯಾಸ ಮಾಡಿದ ಕೀರ್ತಿ ಎಡ್ವೀನ್ ಲುಟಾಯಿಸ್ಗೆ ಸಲ್ಲುತ್ತದೆ.
ದೆಹಲಿ ವಿಶ್ವದ ಆತ್ಯಂತ ಪ್ರಾಚೀನ ಮತ್ತು ಇಂದಿಗೂ ಅಸ್ತಿತ್ವದಲ್ಲಿರುವ ಹಾಗೂ ರಾಜಧಾನಿಯಾಗಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದ ಜಗತ್ತಿನ ಕೆಲವೇ ಕೆಲವು ನಗರಗಳಲ್ಲಿ ಒಂದು. ಈ ನಗರದ ಪ್ರಾಚೀನತೆಯ ಮುಂದೆ ವಾಷಿಂಗ್ಟನ್, ಲಂಡನ್ ಇತ್ಯಾದಿ ಜಾಗತಿಕ ರಾಜಧಾನಿಗಳು ಅಂಬೆಗಾಲಿಡುವ ಮಗು. ಆದರೆ ವಯಸ್ಸೇ ಎಲ್ಲವೂ ಅಲ್ಲವಲ್ಲ!
ಅಂದು, ಇಂದು ಆ ನಗರಗಳು ಎದ್ದು ಫಾರ್ಮುಲಾ ೧ ಕಾರ್ನ ವೇಗದಲ್ಲಿ ಅಭಿವೃದ್ಧಿಯ ನೊಗ ಹೆಗಲಿಗೇರಿಸಿಕೊಂಡು ಸಾಗುತ್ತಿದ್ದರೆ ದೆಹಲಿ ಮಾತ್ರ ಸೈಕಲ್ ತುಳಿಯುತ್ತಿದೆ! ಒಂದು ನಗರವನ್ನು ಹುಟ್ಟು ಹಾಕಿ ಅದನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು (ಪಕ್ಕಾ ಯೋಜನೆ, ಇಚ್ಚಾಶಕ್ತಿ ಇದಲ್ಲಿ ಮಾತ್ರ) ಒಂದೆರಡು ದಶಕ ಸಾಕು. ಆದರೆ ದೆಹಲಿ ಈ ವಿಷಯದಲ್ಲಿ ಎಲ್ಲಿ ಸೋತಿತು? ಉತ್ತರ ಕಂಡುಕೊಳ್ಳುವುದು ತೀರಾ ಕಷ್ಟ. ಇಂದಿಗೂ ದೆಹಲಿಯ ಕೆಲ ಭಾಗಗಳು ಅತ್ಯುತ್ತಮವಾಗಿದ್ದು, ವ್ಯವಸ್ಥಿತವಾಗಿವೆ. ಆದರೆ ಬಹುತೇಕ ಭಾಗಗಳು ಗಬ್ಬೆದ್ದು ನಾರುತ್ತಿವೆ.
ಇದಕ್ಕೆ ಕಾರಣ ಒಮ್ಮಲೇ ಹರಿದು ಬಂದ ಜನಸಂಖ್ಯೆ ಮತ್ತು ದೂರದೃಷ್ಟಿ ಇಲ್ಲದ ನಗರ ಯೋಜನೆ ಮತ್ತು ಜನ ಸಂಯೋಜನೆಯೇ ಆಗಿದೆ. ಇಲ್ಲಿನ ಜನಸಂಯೋಜನೆ ತೀರಾ ತೀರಾ ವಿಚಿತ್ರ. ಆದರೆ ಮಹಾನಗರಗಳ ಹಣೆ ಬರಹ ಇಷ್ಟೇ ಅಲ್ಲವೇ? ಅಂದರೆ ಮೂಲ ನಿವಾಸಿಗಳಿಗಿಂತ ವಲಸಿಗರನ್ನು ಪೊರೆಯುವ ಚಟ ಅವಕ್ಕೆ. ಅದೇ ರೀತಿ ದೆಹಲಿ ಕೂಡ ಶತ ಶತಮಾನಗಳಿಂದ ವಲಸಿಗರಿಗೆ ತನ್ನ ದ್ವಾರ ತೆರೆದಿಟ್ಟುಕೊಂಡೇ ಇದೆ. ಅದು ಈಗಲೂ ಮುಂದುವರಿಯುತ್ತಿದೆ. ಮುಂದೆಯೂ ಮುಂದುವರಿಯುತ್ತದೆ. ಅದ್ದರಿಂದ ಅದನ್ನು ಸಮಸ್ಯೆ ಎಂದು ಪರಿಗಣಿಸುವುದರಲ್ಲಿಯೇ ದೆಹಲಿಯ ಸೋಲು ಅಡಗಿದೆ. ಬದಲಾಗಿ ಅದನ್ನು ಒಂದು ಸವಾಲಾಗಿ ಅದು ತೆಗೆದುಕೊಳ್ಳಬೇಕಿದೆ.
ಅದು ಹೇಗೆ? ಇದಕ್ಕಾಗಿ ತನ್ನೆರಡು ಉಪಗ್ರಹ ನಗರಗಳಾದ ನೋಯ್ಡಾ ಮತ್ತು ಗುರ್ಗಾಂವ್ ಅನ್ನು ಮತ್ತಷ್ಟು ವಿಶಾಲವಾಗಿ ಹಬ್ಬಿಸಲು ಕೆಲ ಕ್ರಮ ಕೈಗೊಳ್ಳುವುದರ ಜೊತೆ ಜೊತೆಗೆ ತನ್ನಲ್ಲಿ ಅದಷ್ಟು ಸರ್ಕಾರಿ ಕಚೇರಿಗಳು ಮಾತ್ರ ಇರುವಂತೆ ನೋಡಿಕೊಂಡು ಖಾಸಗಿ ಸಂಸ್ಥೆಗಳನ್ನು ಅದಷ್ಟು ಈ ಉಪಗ್ರಹ ನಗರಗಳಿಗೆ ದಾಟಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಜನ ಸಂಯೋಜನೆಯಲ್ಲಿ ಒಂದು ವ್ಯವಸ್ಥಿತ ಬದಲಾವಣೆ ತಂದುಕೊಳ್ಳುವುದು ಅದಕ್ಕೆ ಸಾಧ್ಯ. ಈ ಜನಸಂಖ್ಯೆ ಹೆಚ್ಚಳದ ಸಮಸ್ಯೆಯ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವುಗಳೆಂದರೆ ಸುರಕ್ಷತೆ, ಭದ್ರತೆ, ವಸತಿ, ವಿದ್ಯುತ್, ಉತ್ತಮ ರಸ್ತೆ, ನೀರಿನ ವ್ಯವಸ್ಥೆ ಮತ್ತು ಶುಚಿತ್ವ ಕಾಪಾಡಿಕೊಳ್ಳುವ ಸಮಸ್ಯೆಗಳು.
ಇಂದು ದೆಹಲಿಯಲ್ಲಿ ಜನರಿಗೆ ನೀಡುವ ಭದ್ರತೆ ಅಥವಾ ಜನರ ಸುರಕ್ಷತೆ ಪ್ರಶ್ನಾರ್ಹವಾಗಿದೆ. ಇಲ್ಲಿ ಅಪರಾಧ ಪ್ರಮಾಣ ಎಗ್ಗಿಲ್ಲದೆ ಏರುತ್ತಿದೆ. ಜನರ ಭದ್ರತೆಯ ಜವಾಬ್ಧಾರಿ ವಹಿಸಿಕೊಳ್ಳಬೇಕಾದ ಪೊಲೀಸರು ದೊಡ್ಡವರ ಗೇಟ್ ಕಾಯುತ್ತಿದ್ದಾರೆ. ಉತ್ತಮ ರಸ್ತೆ ನೀಡುವ ನಿಟ್ಟಿನಲ್ಲಿ ದೆಹಲಿ ಒಂಚೂರು ಯಶ ಕಂಡಿದೆ. ಇದಕ್ಕೆ ಕಾಮನ್ವೆಲ್ತ್ ಗೇಮ್ಸ್ ಕೂಡ ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ಆದರೆ ವಾಹನಗಳ ಸಂಖ್ಯೆಗೆ ಹೋಲಿಸಿದರೆ ರಸ್ತೆಗಳ ಅಗಲ ಏನೇನು ಸಾಲದು. ಇನ್ನೂ ಕೆಲ ಕಡೆ ರಸ್ತೆ ಸಾಕಷ್ಟು ಅಗಲವಾಗಿದ್ದರೂ ಅದರ ಶೇ. ೭೫ ಭಾಗದಲ್ಲಿ ವಾಹನಗಳು ನಿಂತು ಇಡೀ ಟ್ರಾಫಿಕ್ ವ್ಯವಸ್ಥೆಯನ್ನೆ ಗೊಂದಲದ ಗೂಡಾಗಿಸಿ ಬಿಡುವುದು ಸಾಮಾನ್ಯ. ಬಸ್ ವ್ಯವಸ್ಥೆ ಚೆನ್ನಾಗಿಲ್ಲ. ಇನ್ನೂ ಮೆಟ್ರೋ ಜನಪ್ರಿಯವಾಗಿದ್ದರೂ ಈ ಜನಪ್ರಿಯತೆಯೆ ಅದರ ಸುಗಮ ಪಯಣಕ್ಕೆ ಮುಳುವಾಗಿದೆ. ಒಂದು ಕಡೆ ಮಿತಿ ಮೀರಿದ ಪ್ರಯಾಣಿಕರು ಮತ್ತೊಂದು ಕಡೆ ಆಗಾಗ ಕಾಡುವ ತಾಂತ್ರಿಕ ಅಡಚಣೆಗಳು ಮೆಟ್ರೋಕ್ಕೆ ಬಗಲ ಮುಳ್ಳಾಗಿ ಕಾಡುತ್ತಿದೆ. ಯಮುನೆಯ ಕೃಪೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಚೆನ್ನಾಗಿದೆ. ವಿದ್ಯುತ್ ವ್ಯವಸ್ಥೆಯ ಬಗ್ಗೆ ಯಾವುದೇ ತಕರಾರು ತೆಗೆಯುವಂತಿಲ್ಲ.
ದೆಹಲಿಯ ವಾಯುಗುಣವಂತೂ ಅತಿರೇಕಗಳ ಸಂಗಮ. ಚಳಿಗಾಲದಲ್ಲಿ ಶೂನ್ಯದ ಬಳಿ ಸುಳಿದಾಡುವ ಪಾದರಸ ಬೇಸಿಗೆಯಲ್ಲಿ ೫೦ ಡಿಗ್ರಿಯ ಬಳಿ ಕುಣಿದಾಡುತ್ತಿರುತ್ತದೆ. ಒಮ್ಮೆ ಚಳಿಯ ತಂಪಿಗೆ ಮರಗಟ್ಟುವ ದೇಹ ಮತ್ತೊಮ್ಮೆ ಬೇಸಿಗೆಯ ತಾಪಕ್ಕೆ ಥರಗಟ್ಟಿ ಹೋಗುತ್ತದೆ. ಇಲ್ಲಿ ಚಳಿ ಮತ್ತು ಬೇಸಿಗೆ ಕೆಲ ಜೀವಗಳಿಗೆ ಕಂಟಕವಾಗುವುದು ಸಾಮಾನ್ಯ. ದೆಹಲಿಯಲ್ಲಿ ಬದುಕುವುದೆಂದರೆ ಈ ಎರಡು ಅತಿರೇಕಗಳ ನಡುವಿನ ಒದ್ದಾಟ ಮತ್ತು ನರಳಾಟ!
ಆದರೂ ದೆಹಲಿಗೆ ಅದೆಂಥದ್ದೋ ಒಂದು ಚುಂಬಕತೆಯಿದೆ... ಇಲ್ಲವಾದರೆ ಇಂತಹ ವೈರುಧ್ಯಗಳನ್ನು ಬಗಲಲ್ಲಿ, ಮುಗಿಲಲ್ಲಿ ಕಟ್ಟಿಕೊಂಡು ಸಹಸ್ರ ಸಹಸ್ರ ವರ್ಷಗಳಿಂದ ಈ ನಗರ ರಾಜನಂತೆ ಬಾಳಿ ಬದುಕುತ್ತಿರಲಿಲ್ಲ. ದರೋಡೆ, ಲೂಟಿ, ಆಕ್ರಮಣ ಮತ್ತು ದಾಸ್ಯಗಳಿಗೆ ಸತತವಾಗಿ ಒಳಪಟ್ಟರು ದೆಹಲಿ ತನ್ನತನವನ್ನು ಎಲ್ಲೂ ಸೂರೆಗೊಳ್ಳಲು ಬಿಡಲಿಲ್ಲ; ಬದಲಾಗಿ ಅವರ ತನವನ್ನು ತನ್ನಲ್ಲಿ ಅಂತರ್ಗತ ಮಾಡಿಕೊಳ್ಳುತ್ತ ಸಾಗಿತು, ಸಾಗಿದೆ.
ನನಗಂತೂ ದೆಹಲಿ ರೋಮಾಂಚನಗಳ ರಸ ಬೀಡು, ಕುಣಿದಾಟದ ಮೈದಾನ, ನನ್ನೂರಿನಲ್ಲಿ ಕಳೆದುಕೊಂಡದನ್ನು ಮೊಗೆಮೊಗೆದು ಪಡೆಯೋ ತಾಣ...
ನಾನು ಸವಾಲುಗಳನ್ನು ಇಷ್ಟಪಡುತ್ತೇನೆ. ಅದಕ್ಕಾಗಿಯೇ ಇರಬೇಕು ದೆಹಲಿಯನ್ನೂ ಕೂಡ ...
Tuesday, February 22, 2011
ವಿದಾಯ ಹೇಳುವ ಮುನ್ನಾ
ಆ ದಾರಿಯಲ್ಲಿ ನಾ
ಏಕಾಂಗಿಯಾದೇನೆ?
ಸಾವಿರಾರು ಹೆಜ್ಜೆಯಿಟ್ಟಿದ್ದ
ದಾರಿಯಲ್ಲಿ ನಾ
ಇಂಗಿಹೋದೇನೆ?
ಆ ನಗು, ನಲಿವುಗಳೆಲ್ಲ
ಅವರ ಪಾದದಡಿಯ ಧೂಳಾಯಿತೇ?
ಕಾದಿದ್ದೆ ನಾ ಆ ದಾರಿಯಲ್ಲಿ
ನನ್ನ ಗೆಳೆಯರಿಗಾಗಿ
ಅವರು, ಅದೇ ದಾರಿಯಲ್ಲಿ ಬಂದೆ ಬರುವರೆಂದು
ಇಂದೂ ಅಲ್ಲೇ ಕಾಯುತ್ತಿರುವೆ
ಅವರಿನ್ನೂ ಬರಲಾರರು ಎಂದು ತಿಳಿದು ಸಹ!
ಯಾರಿಗೋ ವಿಶ್ ಮಾಡಿದ್ದೆ
ಇನ್ಯಾರನ್ನೋ ಪುಶ್ ಮಾಡಿದ್ದೆ
ಅವನ್ಯಾರೋ ನನ್ನನ್ನು ಕಂಡು ಬುಸ್ ಗುಟ್ಟಿದ್ದ
ಕಣ್ಣಂಚಲ್ಲಿ ಅವಳ ಚೆಲುವ ಹೀರಿದ್ದೆ
ನನ್ನ ಕಣ್ಣಮಿಂಚಲ್ಲಿ ಅವಳ ಪುಲಕಗೊಳಿಸಿದ್ದೆ
ಒಂದು ತುಂಟ ನಗು ನಕ್ಕು ಮರೆಯಾಗಿದ್ದೆ
ಇದೆಲ್ಲ ಕ್ಷಣಗಳು ಸೆರೆಯಾಗಿದೆ ನನ್ನ ಮನದಲ್ಲಿ
ಕೂರಲಾರದ ತೆರೆಯಾಗಿದೆ ನನ್ನ ಹೃದಯದಲ್ಲಿ.
ಅಂದು ನನ್ನ ಸುತ್ತಲೇ ಕುಂಯ್ ಗುಟ್ಟುತ್ತಿದ್ದ ನನ್ನ ಜೂನಿಯರ್
ಇಂದು ನಾನೇ ತಲೆ ಬಾಗಿದರು ಡೋಂಟ್ ಕೇರ್
ಇದೆಂತಹ ಪ್ಯಾರ್?
ಆದರೂ ನಾ ಅವನನ್ನು ಕ್ಷಮಿಸಲೇ ಬೇಕು
ಯಾಕೆಂದರೆ ಆ ದಾರಿಯಲ್ಲಿ ನಾನೊಬ್ಬನೆ!
ಅಂದು ಆಡಿದ ಮಾತುಗಳು, ಮಾಡಿದ ಕೀಟಲೆಗಳು
ನಗುವಿನ ಸೆಲೆಗಳು, ಆತ್ಮೀಯತೆಯ ಅಭಿವ್ಯಕ್ತಿಗಳು
ಇವಕ್ಕೆಲ್ಲ ಆ ಕಾರಿಡಾರಿನ ಇಟ್ಟಿಗೆಗಳು ಮೂಕ ಸಾಕ್ಷಿಗಳು
ನೆನೆದಾಗ ಹನಿಯಾಗುತ್ತವೆ ನನ್ನ ಅಕ್ಷಿಗಳು
ಬೆಳಕಿಲ್ಲದಿದ್ದರೂ ನಡೆಯುವೆ ಆ
ದಾರಿಯಲ್ಲಿ ಅನ್ನುವ ಧೈರ್ಯ ನನಗಿತ್ತು
ಏನೇ ಬಂದರೂ ಜಯಿಸುವೆ ಎಂಬ
ಶೌರ್ಯ ಮನದೊಳಗಿತ್ತು
ಈ ಬೆಳಕಲ್ಲೆ, ಅದೇ ಮನಸ್ಸಲ್ಲೆ
ಏನೊಂದು ತಡೆಯಿಲ್ಲದಿದ್ದರೂ
ನಡೆಯಲಾರದೇ ಕುಸಿಯುತ್ತಿದ್ದೇನೆ
ದಾರಿಯ ಮಧ್ಯದಲ್ಲಿ
ರಕ್ಷಣೆಗೆ ಒರ್ವನೂ ನನ್ನವನ್ನಿಲ್ಲ
ವೀಕ್ಷಣೆಗೆ, ಭಕ್ಷಣೆಗೆ ಈ ದಾರಿಯ
ಇಂದಿನ ಪಯಣಿಗರು ನಾಳೆಯ
ಏಕಾಂಗಿಗಳು ಸಿದ್ಧರಾಗಿರುವರು!
ಕೂಗಿ ಹೇಳಬೇಕೆನಿಸುತ್ತದೆ, ಗೆಳೆಯರೇ,
ಇಂದು ನಗಬೇಡಿ, ನಾಳೆ ಇಲ್ಲಿ ನಿಂತು
ನನ್ನ ಹಾಗೆ ನೀವು ಮರುಗಬೇಡಿ ಎಂದು
ಆದರೇನು? ಗಂಟಲಿನಿಂದ ಹೊರಟ ದನಿ
ಅವರಿಗೆ ಕೇಳಿಸುತ್ತಿಲ್ಲ
ಕೇಳಿದರು, ಕೇಳಿಸದಂತಿರುವರೋ ಅದು ಗೊತ್ತಿಲ್ಲ!
ಅಲ್ಲ, ಆ ದನಿ ನನ್ನ ಭ್ರಮೆಯೋ?
ಇಗೋ ಇಂಗಿ ಹೋಗುತ್ತಿದ್ದೇನೆ ಈ ದಾರಿಯಲ್ಲಿ
ಏಕಾಂಗಿಯಾಗಿ...
ನಾನಿಟ್ಟ ಹೆಜ್ಜೆಯಡಿಯಲ್ಲಿ
ಅವರ ಹೆಜ್ಜೆಯ ಸಪ್ಪಳದ ಅಡಿಯಲ್ಲಿ!!!
(ಪದವಿಯ ಕೊನೆಯ ದಿನಗಳಲ್ಲಿ ಬರೆದ ಕವನವಿದು)
ಏಕಾಂಗಿಯಾದೇನೆ?
ಸಾವಿರಾರು ಹೆಜ್ಜೆಯಿಟ್ಟಿದ್ದ
ದಾರಿಯಲ್ಲಿ ನಾ
ಇಂಗಿಹೋದೇನೆ?
ಆ ನಗು, ನಲಿವುಗಳೆಲ್ಲ
ಅವರ ಪಾದದಡಿಯ ಧೂಳಾಯಿತೇ?
ಕಾದಿದ್ದೆ ನಾ ಆ ದಾರಿಯಲ್ಲಿ
ನನ್ನ ಗೆಳೆಯರಿಗಾಗಿ
ಅವರು, ಅದೇ ದಾರಿಯಲ್ಲಿ ಬಂದೆ ಬರುವರೆಂದು
ಇಂದೂ ಅಲ್ಲೇ ಕಾಯುತ್ತಿರುವೆ
ಅವರಿನ್ನೂ ಬರಲಾರರು ಎಂದು ತಿಳಿದು ಸಹ!
ಯಾರಿಗೋ ವಿಶ್ ಮಾಡಿದ್ದೆ
ಇನ್ಯಾರನ್ನೋ ಪುಶ್ ಮಾಡಿದ್ದೆ
ಅವನ್ಯಾರೋ ನನ್ನನ್ನು ಕಂಡು ಬುಸ್ ಗುಟ್ಟಿದ್ದ
ಕಣ್ಣಂಚಲ್ಲಿ ಅವಳ ಚೆಲುವ ಹೀರಿದ್ದೆ
ನನ್ನ ಕಣ್ಣಮಿಂಚಲ್ಲಿ ಅವಳ ಪುಲಕಗೊಳಿಸಿದ್ದೆ
ಒಂದು ತುಂಟ ನಗು ನಕ್ಕು ಮರೆಯಾಗಿದ್ದೆ
ಇದೆಲ್ಲ ಕ್ಷಣಗಳು ಸೆರೆಯಾಗಿದೆ ನನ್ನ ಮನದಲ್ಲಿ
ಕೂರಲಾರದ ತೆರೆಯಾಗಿದೆ ನನ್ನ ಹೃದಯದಲ್ಲಿ.
ಅಂದು ನನ್ನ ಸುತ್ತಲೇ ಕುಂಯ್ ಗುಟ್ಟುತ್ತಿದ್ದ ನನ್ನ ಜೂನಿಯರ್
ಇಂದು ನಾನೇ ತಲೆ ಬಾಗಿದರು ಡೋಂಟ್ ಕೇರ್
ಇದೆಂತಹ ಪ್ಯಾರ್?
ಆದರೂ ನಾ ಅವನನ್ನು ಕ್ಷಮಿಸಲೇ ಬೇಕು
ಯಾಕೆಂದರೆ ಆ ದಾರಿಯಲ್ಲಿ ನಾನೊಬ್ಬನೆ!
ಅಂದು ಆಡಿದ ಮಾತುಗಳು, ಮಾಡಿದ ಕೀಟಲೆಗಳು
ನಗುವಿನ ಸೆಲೆಗಳು, ಆತ್ಮೀಯತೆಯ ಅಭಿವ್ಯಕ್ತಿಗಳು
ಇವಕ್ಕೆಲ್ಲ ಆ ಕಾರಿಡಾರಿನ ಇಟ್ಟಿಗೆಗಳು ಮೂಕ ಸಾಕ್ಷಿಗಳು
ನೆನೆದಾಗ ಹನಿಯಾಗುತ್ತವೆ ನನ್ನ ಅಕ್ಷಿಗಳು
ಬೆಳಕಿಲ್ಲದಿದ್ದರೂ ನಡೆಯುವೆ ಆ
ದಾರಿಯಲ್ಲಿ ಅನ್ನುವ ಧೈರ್ಯ ನನಗಿತ್ತು
ಏನೇ ಬಂದರೂ ಜಯಿಸುವೆ ಎಂಬ
ಶೌರ್ಯ ಮನದೊಳಗಿತ್ತು
ಈ ಬೆಳಕಲ್ಲೆ, ಅದೇ ಮನಸ್ಸಲ್ಲೆ
ಏನೊಂದು ತಡೆಯಿಲ್ಲದಿದ್ದರೂ
ನಡೆಯಲಾರದೇ ಕುಸಿಯುತ್ತಿದ್ದೇನೆ
ದಾರಿಯ ಮಧ್ಯದಲ್ಲಿ
ರಕ್ಷಣೆಗೆ ಒರ್ವನೂ ನನ್ನವನ್ನಿಲ್ಲ
ವೀಕ್ಷಣೆಗೆ, ಭಕ್ಷಣೆಗೆ ಈ ದಾರಿಯ
ಇಂದಿನ ಪಯಣಿಗರು ನಾಳೆಯ
ಏಕಾಂಗಿಗಳು ಸಿದ್ಧರಾಗಿರುವರು!
ಕೂಗಿ ಹೇಳಬೇಕೆನಿಸುತ್ತದೆ, ಗೆಳೆಯರೇ,
ಇಂದು ನಗಬೇಡಿ, ನಾಳೆ ಇಲ್ಲಿ ನಿಂತು
ನನ್ನ ಹಾಗೆ ನೀವು ಮರುಗಬೇಡಿ ಎಂದು
ಆದರೇನು? ಗಂಟಲಿನಿಂದ ಹೊರಟ ದನಿ
ಅವರಿಗೆ ಕೇಳಿಸುತ್ತಿಲ್ಲ
ಕೇಳಿದರು, ಕೇಳಿಸದಂತಿರುವರೋ ಅದು ಗೊತ್ತಿಲ್ಲ!
ಅಲ್ಲ, ಆ ದನಿ ನನ್ನ ಭ್ರಮೆಯೋ?
ಇಗೋ ಇಂಗಿ ಹೋಗುತ್ತಿದ್ದೇನೆ ಈ ದಾರಿಯಲ್ಲಿ
ಏಕಾಂಗಿಯಾಗಿ...
ನಾನಿಟ್ಟ ಹೆಜ್ಜೆಯಡಿಯಲ್ಲಿ
ಅವರ ಹೆಜ್ಜೆಯ ಸಪ್ಪಳದ ಅಡಿಯಲ್ಲಿ!!!
(ಪದವಿಯ ಕೊನೆಯ ದಿನಗಳಲ್ಲಿ ಬರೆದ ಕವನವಿದು)
Monday, February 14, 2011
ಪ್ರೀತಿಗೆ ಕಣ್ಣು ಬೇಡ, ಒಂದಿಷ್ಟು ಮಣ್ಣಾದರೂ ಬೇಡವೇ?
ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ.....! ಇದು ಭಾರತದಲ್ಲಿ ಈ ದಿನಾಚರಣೆಯ ಒಟ್ಟೊಟ್ಟಿಗೆ ಬೆಳೆದು ಬಂದ ಒಂದು ಘೋಷಣೆ ಮತ್ತು ಕ್ರಿಯೆ. ಇಲ್ಲಿ ವಿರೋಧ ಮತ್ತು ಪರ ಒಟ್ಟೊಟ್ಟಿಗೆಯೇ ಸಾಗಿದೆ, ಸಾಗುತ್ತಿದೆ ಮತ್ತು ಮುಂದೆಯೂ ಸಾಗಬಹುದು. ವಿಪರ್ಯಾಸವೆಂದರೆ ಧಿಕ್ಕಾರದ ಕೂಗು ಜೋರಾದಂತೆ ಸ್ವೀಕಾರದ ಬಯಕೆ ಕೂಡ ಏರುತ್ತಿದೆ. ಅದು ಹಾಗೆಯೇ, ಮುಚ್ಚಿಟ್ಟಿರುವುದರ ಬಗೆಗೆ ಹೆಚ್ಚು ಕುತೂಹಲ. ಇದು ಮಾನವನ ಸಹಜ ಸಂಸ್ಕ್ರತಿ. ಕಾಲದ ಹರಿವು ಮುಂದೆ ಮುಂದೆ.... ಹಿಂದೆಯಲ್ಲ, ಅನ್ನುವುದು ’ಹೀಗೂ ಒಂದು ದಿನ’ ಬೇಕು ಎಂಬುವವರ ಅಂಬೋಣ. ಆದರೆ ಯಾವುದು ಮುಂದೆ, ಯಾವುದು ಹಿಂದೆ ಎಂಬುದು ನಿರ್ದಿಷ್ಟ ವ್ಯಾಖ್ಯೆಯಿಲ್ಲದ ’ಕಾಲಗುಣ’. ಒಟ್ಟಿನಲ್ಲಿ ನನ್ನಂಥವರ ಸದ್ಯದ ಸ್ಥಿತಿ, ಮೂರು ಮಾರ್ಗದ ಮಧ್ಯೆ ಮದ್ಯ ಕುಡಿದು ತೂರಾಡುವವನಂತಾಗಿದೆ!
***
ಪ್ರವೀಣ್ ಗೊಡ್ಕಿಂಡಿಯ ಕೊಳಲನಾದ ಅಲೆ ಅಲೆಯಾಗಿ ತೇಲಿ ವಾಲಿ ನನ್ನ ಸುತ್ತ ಮತ್ತು ನನ್ನೊಳಗೊಂದು ಭಾವವಲಯ ಸ್ರೃಷ್ಟಿಸಿ ಬಿಡುತ್ತದೆ. ಹೌದು, ನಾನು ಕೊಳಲನ್ನು ಪ್ರೀತಿಸುತ್ತೇನೆ. ನುಡಿಸುವವನನಲ್ಲ! ಅದನ್ನು ಯಾರು ನುಡಿಸಿದರೂ ನನಗಷ್ಟೆ! ನಾ ಝಾಕೀರ್ ಹುಸೇನ್ನನ್ನು ಪ್ರೀತಿಸುತ್ತೇನೆ. ತಬಲವನ್ನಲ್ಲ! ಕೊಳಲು ವಾದಕನ ಉಸಿರು ಕೊಳಲಿಗೆ ತಾಕಿದರೆ ಸಾಕು ನನಗದು ಬರಿ ಕೊಳಲ ದನಿಯಾಗಿ ಉಳಿಯೋದಿಲ್ಲ, ಅದು ಮನಃಶಾಂತಿಯ ಕೊಳವಾಗಿ ಬಿಡುತ್ತದೆ. ತಬಲ.... ಇಲ್ಲದೆ ’ನನ್ನ’ ಹುಸೇನ್ಗೆ ಅಸ್ತಿತ್ವವೇ ಇಲ್ಲ! ವೇಣುಗಾನ ಸೋನೆಯಾಗಿ ಸುರಿಯುವಾಗ ತಬಲ ನನಗೆ ಗುಡುಗಿನಂತೆ ಭಯ ಹುಟ್ಟಿಸುತ್ತದೆ. ಆದರೂ ನಾ ಹುಸೇನ್ನನ್ನು ಪ್ರೀತಿಸುವುದನ್ನು ಬಿಟ್ಟಿಲ್ಲ!
ಈಗ ಆಯ್ಕೆ ಪ್ರೀತಿಯದ್ದು. ನನ್ನ ಪ್ರೀತಿ ಯಾರ ಕಡೆಗೆ? ಯಾವುದು ನೈಜ ಪ್ರೀತಿ? ಅಷ್ಟರಲ್ಲಿ ಆಕೆಯ ಮಿಸ್ಡ್ ಕಾಲ್! ಕೊಳಲು ಬೇಡ! ಹುಸೇನ್ನ್ನು ಬೇಡ!
***
ಅವಳದ್ದು ಕಲ್ಲು ಹೃದಯ, ಅವಳೂ ಹಾಗೆ ಹೇಳಿಕೊಳ್ಳುತ್ತಿದ್ದಳು, ಅವಳಿಗಾಗಿ ಹಪಹಪಿಸಿದವರೂ ಕೂಡ! ಒಂದು ದಿನ ’ಪರಾರಿ’ ಸುದ್ದಿಯಡಿಯಲ್ಲಿ ಅವಳ ಹೆಸರು! ಅವನ್ಯಾರೋ ಚಿರಪರಿಚಿತ ಟಪೋರಿ! ಅದು ಕಲ್ಲು ಕರಗುವ ಸಮಯ! ’ಪ್ರೀತಿಗೆ ಕಣ್ಣಿಲ್ಲ’ ಎನ್ನುವವರಿಗೆ ಸಿಕ್ಕ ಉದಾಹರಣೆ. ಪ್ರೀತಿಗೆ ಕಣ್ಣು ಬೇಡ ಬಿಡಿ, ಕೊನೆಗೊಂದಿಷ್ಟು ಮಣ್ಣಾದರೂ ಬೇಡವೇ? ಇದು ಅವಳ ತಂದೆ ತಾಯಿಯ ಅಳಲು, ಕೊನೆಗೊಂದು ದಿನ ಅವಳದ್ದು ಕೂಡ!
***
ಪ್ರೀತಿಯಿಂದ ಬಿತ್ತಿದರೆ ಅಕ್ಕಿಯಿಂದ ಭತ್ತ ಬೆಳೆಯಬಹುದು, ಪ್ರೀತಿಯಿದ್ದರೆ ಗಾಳಿಯನ್ನು ಕೂಡ ಮುಷ್ಟಿಯಲ್ಲಿ ಹಿಡಿದು ತೋರಿಸಬಹುದು, ಒಣ ಮರಳಲ್ಲಿ ಆಳೆತ್ತರದ ಗೋಡೆ ಕಟ್ಟಬಹುದು, ಹೀಗೆ ಪ್ರೀತಿಯಿದ್ದಲ್ಲಿ ಎಲ್ಲ ಬಹುದುಗಳೇ! ಪ್ರೀತಿಯೆಂದರೆ
ಏನು? ನಾವು ಪ್ರೀತಿಗೆ ಬೀಳುವುದಾ? ಅಥವಾ ಪ್ರೀತಿ ನಮ್ಮನ್ನು ಎಬ್ಬಿಸುವುದಾ? ಪ್ರೀತಿಯಲ್ಲಿ ನೈತಿಕ ಮತ್ತು ಅನೈತಿಕ ಎಂಬ ವಿಧ ಇದೆಯಾ? ಅದು ವರ್ತನೆಯಲ್ಲಿ ಮಾತ್ರ ಅಲ್ವಾ?
ನಾ ಮುಗ್ದ ಮುಖವಿಟ್ಟುಕೊಂಡು, ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನು ಕೇಳುತ್ತಿದ್ದೇನೆ..... ಒಂದೋ ಉತ್ತರ ಕೊಡಿ. ಇಲ್ಲ, ಒಂದಿಷ್ಟು ಪ್ರೀತಿ......!
***
ಪ್ರವೀಣ್ ಗೊಡ್ಕಿಂಡಿಯ ಕೊಳಲನಾದ ಅಲೆ ಅಲೆಯಾಗಿ ತೇಲಿ ವಾಲಿ ನನ್ನ ಸುತ್ತ ಮತ್ತು ನನ್ನೊಳಗೊಂದು ಭಾವವಲಯ ಸ್ರೃಷ್ಟಿಸಿ ಬಿಡುತ್ತದೆ. ಹೌದು, ನಾನು ಕೊಳಲನ್ನು ಪ್ರೀತಿಸುತ್ತೇನೆ. ನುಡಿಸುವವನನಲ್ಲ! ಅದನ್ನು ಯಾರು ನುಡಿಸಿದರೂ ನನಗಷ್ಟೆ! ನಾ ಝಾಕೀರ್ ಹುಸೇನ್ನನ್ನು ಪ್ರೀತಿಸುತ್ತೇನೆ. ತಬಲವನ್ನಲ್ಲ! ಕೊಳಲು ವಾದಕನ ಉಸಿರು ಕೊಳಲಿಗೆ ತಾಕಿದರೆ ಸಾಕು ನನಗದು ಬರಿ ಕೊಳಲ ದನಿಯಾಗಿ ಉಳಿಯೋದಿಲ್ಲ, ಅದು ಮನಃಶಾಂತಿಯ ಕೊಳವಾಗಿ ಬಿಡುತ್ತದೆ. ತಬಲ.... ಇಲ್ಲದೆ ’ನನ್ನ’ ಹುಸೇನ್ಗೆ ಅಸ್ತಿತ್ವವೇ ಇಲ್ಲ! ವೇಣುಗಾನ ಸೋನೆಯಾಗಿ ಸುರಿಯುವಾಗ ತಬಲ ನನಗೆ ಗುಡುಗಿನಂತೆ ಭಯ ಹುಟ್ಟಿಸುತ್ತದೆ. ಆದರೂ ನಾ ಹುಸೇನ್ನನ್ನು ಪ್ರೀತಿಸುವುದನ್ನು ಬಿಟ್ಟಿಲ್ಲ!
ಈಗ ಆಯ್ಕೆ ಪ್ರೀತಿಯದ್ದು. ನನ್ನ ಪ್ರೀತಿ ಯಾರ ಕಡೆಗೆ? ಯಾವುದು ನೈಜ ಪ್ರೀತಿ? ಅಷ್ಟರಲ್ಲಿ ಆಕೆಯ ಮಿಸ್ಡ್ ಕಾಲ್! ಕೊಳಲು ಬೇಡ! ಹುಸೇನ್ನ್ನು ಬೇಡ!
***
ಅವಳದ್ದು ಕಲ್ಲು ಹೃದಯ, ಅವಳೂ ಹಾಗೆ ಹೇಳಿಕೊಳ್ಳುತ್ತಿದ್ದಳು, ಅವಳಿಗಾಗಿ ಹಪಹಪಿಸಿದವರೂ ಕೂಡ! ಒಂದು ದಿನ ’ಪರಾರಿ’ ಸುದ್ದಿಯಡಿಯಲ್ಲಿ ಅವಳ ಹೆಸರು! ಅವನ್ಯಾರೋ ಚಿರಪರಿಚಿತ ಟಪೋರಿ! ಅದು ಕಲ್ಲು ಕರಗುವ ಸಮಯ! ’ಪ್ರೀತಿಗೆ ಕಣ್ಣಿಲ್ಲ’ ಎನ್ನುವವರಿಗೆ ಸಿಕ್ಕ ಉದಾಹರಣೆ. ಪ್ರೀತಿಗೆ ಕಣ್ಣು ಬೇಡ ಬಿಡಿ, ಕೊನೆಗೊಂದಿಷ್ಟು ಮಣ್ಣಾದರೂ ಬೇಡವೇ? ಇದು ಅವಳ ತಂದೆ ತಾಯಿಯ ಅಳಲು, ಕೊನೆಗೊಂದು ದಿನ ಅವಳದ್ದು ಕೂಡ!
***
ಪ್ರೀತಿಯಿಂದ ಬಿತ್ತಿದರೆ ಅಕ್ಕಿಯಿಂದ ಭತ್ತ ಬೆಳೆಯಬಹುದು, ಪ್ರೀತಿಯಿದ್ದರೆ ಗಾಳಿಯನ್ನು ಕೂಡ ಮುಷ್ಟಿಯಲ್ಲಿ ಹಿಡಿದು ತೋರಿಸಬಹುದು, ಒಣ ಮರಳಲ್ಲಿ ಆಳೆತ್ತರದ ಗೋಡೆ ಕಟ್ಟಬಹುದು, ಹೀಗೆ ಪ್ರೀತಿಯಿದ್ದಲ್ಲಿ ಎಲ್ಲ ಬಹುದುಗಳೇ! ಪ್ರೀತಿಯೆಂದರೆ
ಏನು? ನಾವು ಪ್ರೀತಿಗೆ ಬೀಳುವುದಾ? ಅಥವಾ ಪ್ರೀತಿ ನಮ್ಮನ್ನು ಎಬ್ಬಿಸುವುದಾ? ಪ್ರೀತಿಯಲ್ಲಿ ನೈತಿಕ ಮತ್ತು ಅನೈತಿಕ ಎಂಬ ವಿಧ ಇದೆಯಾ? ಅದು ವರ್ತನೆಯಲ್ಲಿ ಮಾತ್ರ ಅಲ್ವಾ?
ನಾ ಮುಗ್ದ ಮುಖವಿಟ್ಟುಕೊಂಡು, ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನು ಕೇಳುತ್ತಿದ್ದೇನೆ..... ಒಂದೋ ಉತ್ತರ ಕೊಡಿ. ಇಲ್ಲ, ಒಂದಿಷ್ಟು ಪ್ರೀತಿ......!
Subscribe to:
Posts (Atom)




