Monday, November 28, 2011

ಪ್ರಾದೇಶಿಕ ಪಕ್ಷಗಳಿಗೆ ಇಲ್ಲಿ ನೆಲೆಯಿಲ್ಲ

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿ ರಾಜಕೀಯವಾಗಿ ವಿಶೇಷ ಆದ್ಯತೆಯಿದೆ. ಆ ರಾಜ್ಯಗಳಲ್ಲಿನ ರಾಜಕೀಯ ಸಂರಚನೆ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಅಥವಾ ಸಂಚಲನ ಸೃಷ್ಟಿಸುವ ಆವುಗಳ ಸಾಮರ್ಥ್ಯದಿಂದಾಗಿಯೇ ಆ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಏನನ್ನೂ ಬೇಕಾದರೂ ನಾವು ಕಿತ್ತುಕೊಳ್ಳುತ್ತೇವೆ ಎಂಬ ದಾರ್ಷ್ಟ್ಯ ಅನಾಮತ್ತಾಗಿಯೇ ಸಿಕ್ಕಿದೆ. ಹಾಗೆಯೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳು ಕೂಡ ತಮ್ಮ ’ಗೌರವ’ ಮೂರಾಬಟ್ಟೆಯಾದರೂ ಪರವಾಗಿಲ್ಲ ಆ ರಾಜ್ಯಗಳ ತಂಟೆಗೆ ಮಾತ್ರ ಹೋಗದೆ ಅಲ್ಲಿನ ನಾಯಕರನ್ನು ಓಲೈಸಿಕೊಂಡೇ ರಾಜಕಾರಣ ಮಾಡುತ್ತವೆ.

ಇದಕ್ಕೆಲ್ಲ ಕಾರಣವೇನು? ಕರ್ನಾಟಕದಲ್ಲಿರದ್ದು ಆ ರಾಜ್ಯಗಳಲ್ಲಿ ಏನಿದೆ? ನಮ್ಮ ರಾಜ್ಯದೊಳಗೆ ಘರ್ಜಿಸುವ ಸಿಂಹಗಳಿಗೆ ರಾಜ್ಯದ ಗಡಿ ದಾಟಿದೊಡನೆ ಕವಡೆ ಕಿಮ್ಮತ್ತು ಸಿಗದಿರಲು ಕಾರಣವೇನು? ದೆಹಲಿಯಲ್ಲಿ ರಾಜ್ಯದ ನೋವಿಗೆ ದನಿ ಸಿಗುತ್ತಿಲ್ಲವೇಕೆ ಅಥವಾ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅವಿರತವಾಗಿ ಅನ್ಯಾಯ ಏಕೆ ಆಗುತ್ತಿದೆ? ಇದಕ್ಕಿರುವ ಏಕೈಕ ಉತ್ತರ ನಮ್ಮಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಇಲ್ಲದಿರುವುದು.

ತನ್ನ ರಾಜ್ಯದ ಹಿತ ಕಾಯುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯ ಎಂಬ ಹೆಗ್ಗಳಿಕೆ ತಮಿಳುನಾಡಿಗೆ ಸುಮ್ಮ ಸುಮ್ಮನೆ ಸಿಕ್ಕಿಲ್ಲ. ಅಲ್ಲಿನ ಎರಡು ಪ್ರಬಲ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಎದುರು ಹಾಕಿಕೊಳ್ಳುವ ಧೈರ್ಯ ರಾಷ್ಟ್ರೀಯ ಪಕ್ಷಗಳಿಗಿಲ್ಲ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹುಟ್ಟಿಕೊಂಡದ್ದು ಮತ್ತು ಪ್ರಾದೇಶಿಕ ಅನನ್ಯತೆಯನ್ನು ಉಳಿಸುವುದಕ್ಕಾಗಿನ ಹೋರಾಟ ಮತ್ತು ಲಾಬಿ ರಾಜಕಾರಣ ಹುಟ್ಟಿಕೊಂಡದ್ದೆ ತಮಿಳುನಾಡಿನಿಂದ.

ದೇಶದಲ್ಲಿ ಪ್ರಥಮ ಮಹಾಚುನಾವಣೆ (೧೯೫೨) ನಡೆದಾಗ ಎಲ್ಲ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ೩೫ ಸ್ಥಾನಗಳಿಸಿದ್ದವು. ೭ ಸ್ಥಾನ ಗೆದ್ದ ಪಿಡಿಎಫ್ ಅತ್ಯಂತ ಬಲಿಷ್ಠ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿತ್ತು. ಆದರೆ ೧೯೬೭ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಡಿಎಂಕೆ ೨೫ ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು! ಅನಂತರ ಡಿಎಂಕೆ ವಿಭಜನೆಗೊಂಡು ಎಮ್.ಜಿ. ರಾಮಚಂದ್ರನ್ ನೇತೃತ್ವದಲ್ಲಿ ಎಐಎಡಿಎಂಕೆ ಉದಿಸಿತು. ಅದು  ೧೯೭೭ರಲ್ಲಿ ತಾನೆದುರಿಸಿದ ಮೊದಲ ಚುನಾವಣೆಯಲ್ಲೇ ೧೯ ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆ ಬಳಿಕ ತಮಿಳುನಾಡು ಈ ಎರಡು ರಾಜಕೀಯ ಪಕ್ಷಗಳ ಒಡ್ಡೋಲಗವಾಗಿ ಬಿಟ್ಟಿದೆ. ಈ ಪಕ್ಷಗಳ ಪಾಲಿಗೆ ಸೋಕಾಲ್ಡ್ ರಾಷ್ಟ್ರೀಯ ಪಕ್ಷಗಳು ತಮ್ಮ ಅಸ್ಥಾನ ಕವಿಗಳಿದ್ದಂತೆ!

ಇತ್ತ ಆಂಧ್ರಪ್ರದೇಶದಲ್ಲಿಯೂ ಪರಿಸ್ಥಿತಿ ಭಿನ್ನವಾಗೇನಿಲ್ಲ. ಆದರೆ ಅಲ್ಲಿ ಪ್ರಾದೇಶಿಕ ಪಕ್ಷದ ಹವೆ ಜೋರಾಗಿ ಬೀಸಿದ್ದು ಮಾತ್ರ ೧೯೮೪ರಲ್ಲಿ. ಅಲ್ಲಿ ಎನ್.ಟಿ. ರಾಮರಾವ್‌ರ ನೇತೃತ್ವದ ತೆಲುಗುದೇಶಂ ಪಕ್ಷ (ಟಿಡಿಪಿ) ಲೋಕಸಭೆಯಲ್ಲಿ ೩೦ ಸ್ಥಾನಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತ್ತು. ಆನಂತರದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಅದು ಕೇಂದ್ರ ರಾಜಕೀಯ ಸಮೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ಚುನಾವಣೆಯಲ್ಲಿ ಮಾತ್ರ ಅದು ಒಂದಷ್ಟು ಬಸವಳಿದಿರುವಂತೆ ಕಂಡಿದೆ. ಆದರೆ ಆಂಧ್ರದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆ ಇಟ್ಟಿರುವ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಕೇಂದ್ರ ಸರ್ಕಾರದ ಬೆವರಿಳಿಸುತ್ತಿದೆ. ಇತ್ತ ಕಾಂಗ್ರೆಸ್‌ನಿಂದ ಬಂಡೆದ್ದ ಜಗಮೋಹನ್ ರೆಡ್ಡಿ ವೈಎಸ್‌ಅರ್ ಕಾಂಗ್ರೆಸ್ ಸ್ಥಾಪಿಸಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಅಲ್ಲಿನ ಕಾಂಗ್ರೆಸ್‌ಗೆ ಮುಳುಗು ನೀರು ಆಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಜಗನ್ ಜೊತೆ ಗುರುತಿಸಿಕೊಂಡಿದ್ದ ಅನೇಕ ಶಾಸಕರು ಮರಳಿ ಮಾತೃ ಪಕ್ಷದತ್ತ ಮುಖ ಮಾಡಿರುವುದು ಪಕ್ಷದ ಬೆಳವಣಿಗೆಗೆ ಬಿದ್ದ ಹೊಡೆತ ಎಂದೇ ಪರಿಗಣಿಸಬಹುದು. ಆದೇನೆ ಇದ್ದರೂ ಅಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ರಾಷ್ಟ್ರೀಯ ಪಕ್ಷಗಳಿಗೆ ಹೊಡೆತ ನೀಡುವ ಸಾಮರ್ಥ್ಯವನ್ನು ಉಳಿಸಿಕೊಂಡಿವೆ. 

ಇತ್ತ ಮಹಾರಾಷ್ಟ್ರದ ಹಿತ ಕಾಯಲು ಶಿವಸೇನೆ ಮತ್ತು ರಾಷ್ಟೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇವೆ. ಶಿವಸೇನೆ ೧೯೯೦ರ ಬಳಿಕ ಬಲಿಷ್ಠವಾಗಿ ರೂಪುಗೊಂಡರೆ,  ಆ ದಶಕದ ಕೊನೆಗೆ ಶರದ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯ ಜನ್ಮತಳೆಯಿತು. ಆದರೆ ಎನ್‌ಸಿಪಿ ಮೂಲತಃ ರಾಷ್ಟ್ರೀಯ ಆಶಯಗಳನ್ನು ಇಟ್ಟುಕೊಂಡು ಹುಟ್ಟಿದ್ದ ಪಕ್ಷ. ಕಾಂಗ್ರೆಸ್‌ನ ಅಧ್ಯಕ್ಷಗಿರಿಯನ್ನು ವಿದೇಶಿ ಮೂಲದ ಸೋನಿಯಾ ಗಾಂಧಿಯವರಿಗೆ ನೀಡುವುದನ್ನು ಖಂಡಾತುಂಡವಾಗಿ ವಿರೋಧಿಸಿ ಶರದ್ ಪವಾರ್, ಪಿ.ಎ. ಸಂಗ್ಮಾ ಮತ್ತು ತಾರೀಖ್ ಅನ್ಚರ್ ೧೯೯೯ರ ಜೂನ್‌ನಲ್ಲಿ ಎನ್‌ಸಿಪಿಯನ್ನು ಸ್ಥಾಪಿಸಿದ್ದರು. ಅದು ದೇಶದ ಬೇರೆ ಭಾಗಗಳಲ್ಲಿ ನೆಲೆ ಕಾಣಲು ವಿಫಲವಾದರೂ ಮಹಾರಾಷ್ಟ್ರದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಇತ್ತ ಯುಪಿಎ ಸರ್ಕಾರದಲ್ಲಿಯೂ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಕೃಷ್ಣಾ ನೀರು ಹಂಚಿಕೆ ವಿವಾದ ನ್ಯಾಯಮಂಡಳಿಯಲ್ಲಿರುವಾಗ ಅದರ ಬಗ್ಗೆ ಚರ್ಚಿಸಲು ಸಂಪುಟ ಕಾರ್ಯದರ್ಶಿಗಳು ಕರ್ನಾಟಕ ಮತ್ತು ಮಹರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆಯುವಂತೆ ಎನ್‌ಸಿಪಿ ನೋಡಿಕೊಂಡದ್ದನ್ನು ನಾವು ಯಾವ ಕಾರಣಕ್ಕೂ ಮರೆಯವ ಹಾಗಿಲ್ಲ. ಇದು ಶಿವಸೇನೆಯಷ್ಟು ಉಗ್ರವಾಗಿ ಮರಾಠಿ ಮಾನೂಸ್‌ನ್ನು ಪ್ರತಿಪಾದಿಸದಿದ್ದರೂ ತನ್ನ ನೆಲ ಜಲದ ಪ್ರಶ್ನೆ ಬಂದಾಗ ಲಾಬಿ ಮಾಡಲು ಹಿಂಜರಿದಿಲ್ಲ. ಇತ್ತ ಶಿವಸೇನೆ ಬಿಜೆಪಿಯ ಹೆಗಲಿಗೆ ಕೈ ಹಾಕಿದೆ. ಅದ್ದರಿಂದ ಮಹಾರಾಷ್ಟ್ರದ ಹಿತಕ್ಕೆ ಯಾವ ಪಕ್ಷ ಅಧಿಕಾರಕ್ಕೇರಿದರೂ ಯಾವುದೇ ಧಕ್ಕೆಯಿಲ್ಲ.

ನಮ್ಮ ನೆರೆಯ ರಾಜ್ಯಗಳನ್ನು ಹೊರತಾಗಿ ನೋಡಿದರೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಬಿಹಾರದಲ್ಲಿ ಜನತಾದಳ (ಸಂಯುಕ್ತ), ರಾಷ್ಟ್ರೀಯ ಜನತಾದಳ, ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ, ಒರಿಸ್ಸಾದಲ್ಲಿ ಬಿಜು ಜನತಾದಳ, ಅಸ್ಸಾಂನಲ್ಲಿ ಅಸೋಮ್ ಗಣ ಪರಿಷತ್, ಪಂಜಾಬ್‌ನಲ್ಲಿ ಅಕಾಲಿ ದಳ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮುಂತಾದ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯದ ಕಲ್ಯಾಣಕ್ಕಾಗಿ ಎಷ್ಟು ದುಡಿಯುತ್ತಿವೆ ಎಂಬ ಪ್ರಶ್ನೆಗಳ ನಡುವೆಯೂ ರಾಜ್ಯದ ಹಿತ ಕಾಯುವುದಕ್ಕಾಗಿ ಕೇಂದ್ರ ಸರ್ಕಾರದ ನಡುವೆ ಗುದ್ದಾಟ ನಡೆಸುವ ಸಾಮರ್ಥ್ಯ ಹೊಂದಿವೆ ಎಂಬುದನ್ನು ಒಪ್ಪಬೇಕಾಗುತ್ತದೆ.

ಬಹುಶಃ ೧೯೭೫ವರೆಗೆ, ಅಂದರೆ ಕಾಂಗ್ರೆಸ್ ಪಕ್ಷದ ಏಕಮೇವಾದಿಪತ್ಯ ಆಡಳಿತ ದೇಶದಲ್ಲಿ ಇರುವ ತನಕ ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಮಾನ್ಯತೆ ಇರಲಿಲ್ಲ (೧೯೬೯ರಲ್ಲಿ ಇಂದಿರಾ ಗಾಂಧಿ ದೇಶದ ಮೊತ್ತಮೊದಲ ಅಲ್ಪ ಬೆಂಬಲದ ಸರ್ಕಾರ ರಚಿಸಿದ್ದಾಗ ಸಿಪಿಐ ಅದನ್ನು ಬೆಂಬಲಿಸಿತ್ತು). ಆದರೆ ೧೯೭೭ರಲ್ಲಿ ೨೯೨ ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರಕ್ಕೇರಿದ ಜನತಾ ಪಕ್ಷಕ್ಕೆ ಅವಶ್ಯಕತೆ ಇಲ್ಲದಿದ್ದರೂ ಡಿಎಮ್‌ಕೆ ಮತ್ತು ಅಕಾಲಿ ದಳ ಬೆಂಬಲ ನೀಡಿದ್ದವು. ಆಗ ಎಲ್ಲ ಪ್ರಾದೇಶಿಕ ಪಕ್ಷಗಳು ಪಡೆದ ಮತವನ್ನು ಲೆಕ್ಕ ಹಾಕಿದರೆ ಅದು ಚಲಾವಣೆಯಾದ ಮತದ ಶೇ. ೫ ರಿಂದ ಶೇ. ೧೦ ರಷ್ಟು ಮತವಾಗುತ್ತಿತ್ತು ಅಷ್ಟೆ. ಬಳಿಕ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಸರ್ಕಾರಗಳ ಶಖೆ ಪ್ರಾರಂಭವಾಯಿತು. ಆದರೆ ೧೯೮೯ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಲೇ ಪ್ರಾದೇಶಿಕ ಪಕ್ಷಗಳ ಕಾರುಬಾರಿಗೆ ದೆಹಲಿಯ ಸಂಸತ್ ಭವನ ಆಡುಂಬೊಲವಾಗುವುದು ಅಧಿಕೃತವಾಯಿತು!  ಜೊತೆಗೆ ಬಲಿಷ್ಠ ಪ್ರಾದೇಶಿಕ ಪಕ್ಷಗಳು ಆಡಿದ್ದೆ ಆಟ ಎಂಬ ಪರಿಸ್ಥಿತಿ ಉದ್ಭವಿಸಿತು ಆದು ಈಗಲೂ ಮುಂದುವರಿದೆ ಕೂಡ. ಆದರೆ ಹೇಳಿಕೊಳ್ಳಲು ತನ್ನದೆನ್ನುವ ಒಂದೇ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷವನ್ನು ಹೊಂದಿರದ, ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನೆ ಹೆಚ್ಚಾಗಿ ಬೆಂಬಲಿಸುತ್ತಿರುವ ಕರ್ನಾಟಕ ಮಾತ್ರ ಈ ರಾಜಕೀಯದಾಟದಲ್ಲಿ ಬರಿ ಮೂಕಪ್ರೇಕ್ಷಕ ಮಾತ್ರವಲ್ಲ ಬಲಿಪಶು ಕೂಡ.

ಕರ್ನಾಟಕದಲ್ಲಿ ಪ್ರಾದೇಶಿಕತೆಯ ಬಗೆಗಿನ ಅರಿವು, ಅದನ್ನು ಉಳಿಸಿಕೊಳ್ಳುವುದಕ್ಕಾಗಿನ ಹೋರಾಟ ಇಂದು ನಿನ್ನೆಯದಲ್ಲ. ಅದಕ್ಕೆ ಸ್ವಾತಂತ್ರ್ಯಪೂರ್ವದ ಇತಿಹಾಸವೇ ಇದೆ. ಅಲೂರು ವೆಂಕಟರಾವ್‌ರ ಮುಂದಾಳತ್ವದಲ್ಲಿ ನಡೆದ ಕರ್ನಾಟಕ ಏಕೀಕರಣ ಚಳವಳಿ ಇಂತಹದ್ದೆ ಒಂದು ಹೋರಾಟವಾಗಿತ್ತು.

ನಾಗ್ಪುರದಲ್ಲಿ ೧೯೨೦ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು (ಕೆಪಿಸಿಸಿ) ಸ್ಥಾಪಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಪ್ಪಿತ್ತು. ಹಾಗೆಯೇ ಸ್ಥಾಪನೆ ಕೂಡ ಮಾಡಿತ್ತು. ಗುಡ್ಲಪ್ಪ ಹಳ್ಳಿಕೇರಿಯವರ ಪ್ರಯತ್ನದ ಫಲವಾಗಿ ನೆಹರು ಸಮಿತಿಯೂ ೧೯೨೮ರಲ್ಲಿ ಕನ್ನಡ ಮಾತನಾಡುವ ಎಲ್ಲರನ್ನು ಒಂದೇ ಪ್ರಾಂತ್ಯದ ಸೂರಿನಡಿಗೆ ತರುವ ಶಿಫಾರಸ್ಸು ಕೂಡ ಮಾಡಿತ್ತು. ಆದರೆ ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕುತ್ತಲೆ ಏಕೀಕರಣ ಚಳವಳಿಯ ಕಾಲೆಳೆಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈ ಹಾಕಿತ್ತು. ಆಗ ಕನ್ನಡಿಗರು ಮದ್ರಾಸ್ ಮತ್ತು ಬಾಂಬೆ ಪ್ರೆಸಿಡೆನ್ಸಿ, ಕೊಡಗು, ಮೈಸೂರು ಮತ್ತು ಹೈದರಾಬಾದ್‌ಗಳ ಮಧ್ಯೆ ಹರಿದು ಹಂಚಿ ಹೋಗಿದ್ದರು. ೧೯೪೮ರಲ್ಲಿ ರಚನೆಯಾದ ಧರ್ ಸಮಿತಿ ರಾಜ್ಯಗಳ ಪುನರ್ರಚನೆಯನ್ನು ವಿರೋಧಿಸಿತ್ತು. ನಂತರ ಸರ್ಕಾರ ಜೆವಿಪಿ (ಜವಹರ್‌ಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ) ಸಮಿತಿಯನ್ನು ರಚಿಸಿತು. ಸಮಿತಿ ಆಂಧ್ರಪ್ರದೇಶವನ್ನು ರಚಿಸಲು ಮಾತ್ರ ತನ್ನ ಒಲವನ್ನು ವ್ಯಕ್ತಪಡಿಸಿತು.
ಇದನ್ನು ತನಗೆ ಬಗೆದ ದ್ರೋಹ ಎಂದೆ ಭಾವಿಸಿದ ಏಕೀಕರಣ ಚಳವಳಿಗಾರರು ೧೯೫೧ರ ಚುನಾವಣೆಯಲ್ಲಿ ಸ್ಪರ್ಧಿಸಲು ಕರ್ನಾಟಕ ಏಕೀಕರಣ ಪಕ್ಷವನ್ನು ಸ್ಥಾಪಿಸಿದರು. ಈ ಪಕ್ಷವನ್ನು ನಮ್ಮ ರಾಜ್ಯದ ಮೊದಲ ಪ್ರಾದೇಶಿಕ ಪಕ್ಷ ಎಂದು ಕರೆಯಬಹುದು. ಈ ಪಕ್ಷವನ್ನು ಕೆಂಗಲ್ ಹನುಮಂತರಾಯ ಎಸ್.ನಿಜಲಿಂಗಪ್ಪ, ಮುಂತಾದವರು ಬೆಂಬಲಿಸಿದ್ದರು! ಕನ್ನಡಿಗರ ಒತ್ತಾಯಕ್ಕೆ ಮಣಿದ ಆಗಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಫಜಲ್ ಅಲಿ ಸಮಿತಿ ರಚಿಸಿದರು. ಈ ಸಮಿತಿ ಕಾಸರಗೋಡನ್ನು ಹೊರತುಪಡಿಸಿ ಕರ್ನಾಟಕದ ಏಕೀಕರಣಕ್ಕೆ ಒಪ್ಪಿಕೊಂಡಿತ್ತು. ಅಂದರೆ ಸ್ವಾತಂತ್ರ್ಯೋತ್ತದ ಮೊದಲ ವರ್ಷಗಳಲ್ಲಿಯೇ ಕನ್ನಡಿಗರು ತಮ್ಮದೇ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿ ಕೇಂದ್ರವ ಬಲಿಷ್ಠ ನಾಯಕತ್ವಕ್ಕೆ ಸಡ್ಡು ಹೊಡೆದು ತಮ್ಮ ಗುರಿ ಸಾಧಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದರು. ಆದರೆ ಆ ಬಳಿಕ?

ಎಸ್ ನಿಜಲಿಂಗಪ್ಪ (ಎಸ್‌ಎನ್) ಅವರನ್ನು ಅಧುನಿಕ ಕರ್ನಾಟಕದ ನಿರ್ಮಾತೃ ಎಂದೆ ಕರೆಯಲಾಗುತ್ತದೆ. ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ (೧೯೬೯) ನೀಲಂ ಸಂಜೀವ ರೆಡ್ಡಿಯವರನ್ನು ರಾಷ್ಟ್ರಪತಿಯನ್ನಾಗಿಸಬೇಕೆಂಬ ಅವರ ಆಸೆಗೆ ಇಂದಿರಾಗಾಂಧಿ ಅಡ್ಡಿಯಾದರು. ಅದೇ ಕಾಂಗ್ರೆಸ್‌ನ ವಿಭಜನೆಗೆ ಕಾರಣವಾಯಿತು. ಆ ಸಂದರ್ಭದಲ್ಲಿ ನಿಜಲಿಂಗಪ್ಪ, ಕಾಮರಾಜ್, ಎಸ್.ಕೆ. ಪಾಟೀಲ್, ರಾಮಕೃಷ್ಣ ಹೆಗಡೆ ಮುಂತಾದವರು ಕಾಂಗ್ರೆಸ್ (ಒ) ಸ್ಥಾಪಿಸಿದರು. ಈ ಪಕ್ಷಕ್ಕೆ ರಾಷ್ಟೀಯ ಮಾನ್ಯತೆ ಮತ್ತು ಸ್ವರೂಪವಿದ್ದರೂ ಎಸ್.ಎನ್. ಮತ್ತು ರಾಮಕೃಷ್ಣ ಹೆಗಡೆಗೆ ಕರ್ನಾಟಕದ ಜೊತೆಗಿದ್ದ ನಂಟಿನಿಂದಾಗಿ ಈ ಪಕ್ಷ ರಾಜ್ಯದಲ್ಲಿ ಬಿರುಗಾಳಿ ಸೃಷ್ಟಿsಸಬಹುದು ಎಂದು ನಂಬಲಾಗಿತ್ತು ಆದರೆ ಆ ಬಿರುಗಾಳಿಯ ಭ್ರಮೆ ಬೋರಾಲಾಗಿ ಬಿದ್ದು ಹೋಯಿತು.
ಅನಂತರ ಹಿಂದುಳಿದ ವರ್ಗಗಳ ನಾಯಕರೆಂದೆ ಜನಪ್ರಿಯರಾಗಿದ್ದ ದೇವರಾಜ ಅರಸು ಇಂದಿರಾ ಗಾಂಧಿ ಜೊತೆ ಮುನಿಸಿಕೊಂಡು ೭೦ರ ದಶಕದ ಅಂತ್ಯಕ್ಕೆ ಅರಸು ಕಾಂಗ್ರೆಸ್ ಕಟ್ಟಿದರು. ಆದರೆ ಅ ಪಕ್ಷ ಕೂಡ ರಾಜ್ಯದ ಜನತೆಯ ಮನದರಸನಾಗದೆ ಹೋಯಿತು. ಅರಸು ತಮ್ಮ ‘ಕ್ರಾಂತಿರಂಗ’ವನ್ನು ಗಟ್ಟಿ ತಳಪಾಯದ ಮೇಲೆ ಕಟ್ಟುವ ಮುಂಚಿತವಾಗಿಯೇ ವಿಧಿವಶರಾದರು. ಈ ಬಗ್ಗೆ ಮಾಜಿ ಸಚಿವ ಪಿಜಿಆರ್ ಸಿಂಧ್ಯಾರ ಜೊತೆ ಮಾತನಾಡಿದಾಗ, "ಅರಸು ತಮ್ಮ ಕಾರ್ಯಕ್ರಮಗಳನ್ನು ಮೊದಲು ಇಂದಿರಾ ಗಾಂಧಿಯ ಕಾರ್ಯಕ್ರಮಗಳೆಂದೆ ಪ್ರಚಾರ ಮಾಡಿದ್ದರು. ಅದ್ದರಿಂದ ಜನರು ಕೂಡ ಅದನ್ನೆ ಸತ್ಯ ಎಂದು ನಂಬಿದ್ದರು. ಹಾಗೆ ಅವರು ಇನ್ನೂ ಕೆಲ ಸಮಯ ಬದುಕಿರಬೇಕಿತ್ತು. ಆಗ ನಾಡಿನ ಚಿತ್ರಣವೇ ಬದಲಾಗುತ್ತಿತ್ತು" ಎನ್ನುತ್ತಾರೆ. ಮುಂದಿನ ದಶಕ ಕರ್ನಾಟಕದಲ್ಲಿ ಅನೇಕ ರಾಜಕೀಯ ಸ್ಥಿತ್ಯಂತರಗಳೇ ನಡೆದವು. ಜನತಾ ಪಕ್ಷ, ಜನತಾದಳಗಳ ಕಾರುಬಾರು ರಾಜ್ಯದಲ್ಲಿ ಇತ್ತು. ಆದರೆ ಆ ಪಕ್ಷಗಳಿಗೆ ರಾಷ್ಟೀಯ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಿತ್ತು.

೯೦ರ ದಶಕದಲ್ಲಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಕೂಡ ಎರಡೆರಡು ಪಕ್ಷ ಕಟ್ಟಿದರೂ ತಮ್ಮ ಗುರಿ ತಲುಪಲು ಆಗಲಿಲ್ಲ. ಅವರು ೧೯೯೪ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿ ಆ ವರ್ಷವೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ೧೦ ಸ್ಥಾನಗಳನ್ನು ಗೆದ್ದರು. ಅದಕ್ಕಿಂತ ಹೆಚ್ಚಾಗಿ ಅನೇಕ ಕ್ಷೇತ್ರಗಳು ಕಾಂಗ್ರೆಸ್‌ನ ಕೈ ತಪ್ಪುವಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಅನಂತರ ಕರ್ನಾಟಕ ವಿಕಾಸ ಪಕ್ಷ ಕಟ್ಟಿದ್ದರು. ಆದರೆ ಅವರು ಆ ಮೂಲಕ ಗುಡ್ಡಕ್ಕೆ ಮಣ್ಣು ಹೊರುವ ಕೆಲಸಮಾಡಿದರು ಎಂದು ನಾವು ಹೇಳುವ ಹಾಗೆ ಇಲ್ಲ. ಏಕೆಂದರೆ ಅವರು ಆ ಪಕ್ಷ ಕಟ್ಟಿ ಅಲ್ಲೆ ಮರೆತು ಬಿಟ್ಟರು, ಇನ್ನು ಮಣ್ಣು ಹೊರುವ ಶ್ರಮವೆಲ್ಲಿ!

ಇನ್ನು ರಾಜ್ಯದ ಮೊದಲ ಕಾಂಗ್ರೆಸ್ಸೆತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಲಾಲು ಪ್ರಸಾದ್ ಯಾದವ್ ದೇವೇಗೌಡರ ಸಲಹೆಯ ಮೇರೆಗೆ ಜನತಾದಳದಿಂದ ಉಚ್ಛಾಟಿಸಿದ್ದರು. ಹೆಗಡೆ ’ಲೋಕಶಕ್ತಿ’ ಮತ್ತು ’ರಾಷ್ಟ್ರೀಯ ನವನಿರ್ಮಾಣ ವೇದಿಕೆ’ ಎಂಬ ರಾಜಕೀಯ ಸಂಘಟನೆ ಕಟ್ಟಿಕೊಂಡು ಅಧಿಕಾರದ ಪಡಸಾಲೆಗೆ ಏರುವ ಪ್ರಯತ್ನ ಮಾಡಿದರೂ ಒಂದು ಹೆಜ್ಜೆ ಇಡಲು ಅವರಿಂದ ಸಾಧ್ಯವಾಗಲಿಲ್ಲ. ಲೋಕಶಕ್ತಿ ಆ ಬಳಿಕ ಸಂಯುಕ್ತ ಜನತಾದಳದೊಂದಿಗೆ ವಿಲೀನವಾಯಿತು.

ಈಗ ನಮ್ಮ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜನತಾದಳ (ಎಸ್), ಜನತಾದಳ (ಯು), ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಸಿಪಿಐ, ಸಿಪಿಐ(ಎಂ) ಮುಂತಾದ ರಾಷ್ಟ್ರೀಯ ಪಕ್ಷಗಳಿವೆ. ಇವುಗಳಲ್ಲಿ ಮೊದಲ ಮೂರು ಪಕ್ಷಗಳನ್ನು ಬಿಟ್ಟರೆ ಉಳಿದ ಪಕ್ಷಗಳದ್ದು ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಅನ್ನುವ ಪರಿಸ್ಥಿತಿ ಇದೆ.

ಜನತಾದಳ (ಎಸ್) ಮಾಜಿ ಪ್ರಧಾನಿ ದೇವೆಗೌಡರ ವಶದಲ್ಲಿದ್ದು ದೇಶದ ಬೇರೆಡೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಆದರೆ ನಮ್ಮ ರಾಜ್ಯದಲ್ಲಿ ಇದರ ಶಕ್ತಿ ಮತ್ತು ಯುಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ಜನತಾದಳ(ಎಸ್) ನಮ್ಮ ಮಣ್ಣಿನ ಮಗನ ಪಕ್ಷವಾಗಿದ್ದರೂ ಕೂಡ ಅದು ಈ ಮಣ್ಣಿನ ಪಕ್ಷವಾಗಿ ಬೆಳೆದಿಲ್ಲ. ಈಗ ಅದು ಬೇರೆ ಎಲ್ಲೂ ತನಗೆ ನಾಯಕರು ಇಲ್ಲ, ನೆಲೆಯೂ ಇಲ್ಲ ಎಂದು ನಮ್ಮ ಈ ಫಲವತ್ತಾದ ನಾಡಿನಲ್ಲಿ ತೆನೆ ಹೊರುತ್ತಿದ್ದಾರೆಯೇ ಹೊರತು ಈ ನಾಡ ಪ್ರೇಮದಿಂದಲ್ಲ.  

ರೈತ ಸಂಘದ ನಂಜುಂಡಸ್ವಾಮಿಯವರ ಕನ್ನಡ ದೇಶ, ವಿಜಯ್ ಮಲ್ಯರ ಜನತಾ ಪಕ್ಷ, ವಾಟಾಳ್ ನಾಗರಾಜ್‌ರ ಕರ್ನಾಟಕ ವಾಟಳ್ ಪಕ, ವಿಜಯ್ ಸಂಕೇಶ್ವರರ ಕನ್ನಡ ನಾಡು ಪಕ್ಷ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿಯವರ ಪ್ರಗತಿರಂಗ, ದೇವನೂರು ಮಹಾದೇವರ ಸರ್ವೋದಯ ಕರ್ನಾಟಕ, ಜೆ.ಎಚ್. ಪಟೇಲರ ಪುತ್ರ ಮಹಿಮಾ ಪಟೇಲ್‌ರ ಸುವರ್ಣ ಕರ್ನಾಟಕ, ಹರಿ ಖೋಡೆಯವರ ಅರಸು ಸಂಯುಕ್ತ ಪಕ್ಷ - ಎಲ್ಲವು ಕರ್ನಾಟಕದ ರಾಜಕೀಯ ರಂಗದಲ್ಲಿ ಒಂದು ಪ್ರಯತ್ನವಾಗಿ ದಾಖಲಾಗಿದೆಯೇ ಹೊರತು ಒಂದು ಪರ್ಯಾಯ ಶಕ್ತಿಯಾಗಿ ಅಲ್ಲ.

ನಮ್ಮಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದವರಿಗೆ ತಾಳ್ಮೆ ಕಡಿಮೆ ಇತ್ತು. ಅವರೆಲ್ಲ ಒಂದೆ ಚುನಾವಣೆಯಲ್ಲಿ ಬಸವಳಿದು ಹೋಗಿದ್ದರು. ಬಹುತೇಕರು ತಮ್ಮ ಇಳಿವಯಸ್ಸಿನಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ಸಾಹಸಕ್ಕೆ ಕೈ ಹಾಕಿದ್ದರು. ಅದ್ದರಿಂದ ತಮ್ಮ ಪ್ರಯತ್ನವನ್ನು ಒಂದು ತಾರ್ಕಿಕ ಅಂತ್ಯ ತಲುಪಿಸಲು ಅವರ ವಯಸ್ಸು ಮತ್ತು ಆರೋಗ್ಯ ಜೊತೆ ನೀಡಲಿಲ್ಲ. ಕನ್ನಡದ ಜನಪ್ರಿಯ ನಟರಾದ ರಾಜ್‌ಕುಮಾರ್, ವಿಷ್ಣುವರ್ಧನ್ ಮುಂತಾದವರು ರಾಜಕೀಯ ಪ್ರವೇಶಿಸುವ ಅವಕಾಶವಿದ್ದರೂ ದೂರ ನಿಂತದ್ದು, ಹಾಗೇ ಅಂಬರೀಷ್‌ರಂತಹ ನಟರು ರಾಷ್ಟ್ರೀಯ ಪಕ್ಷವನ್ನೆ ನೆಚ್ಚಿಕೊಂಡದ್ದು ಕೂಡ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷವೊಂದು ಹುಟ್ಟದಂತೆ ತಡೆಯಿತು ಎಂದು ಊಹಿಸಬಹುದು.

ಈ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ಮಾಜಿ ಮೀನುಗಾರಿಕ ಸಚಿವ ಜಯಪ್ರಕಾಶ್ ಹೆಗ್ಡೆ, "ಪ್ರಾದೇಶಿಕ ಪಕ್ಷ ಕಟ್ಟಲು ಉತ್ತಮ ನಾಯಕತ್ವ ಬೇಕು. ಅರಸುರಂತಹ ದೊಡ್ಡ ನಾಯಕರಿಗೂ ಪ್ರಾದೇಶಿಕ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲಾಗಲಿಲ್ಲ. ಇದರ ಜೊತೆಗೆ ಹಣ ಬಲವು ಬೇಕಿದೆ. ಇಂದು ಹಣ ಇರುವವರಿದ್ದರೆ ಆದರೆ ಅವರಲ್ಲಿ ನಾಯಕತ್ವ ಗುಣವಿಲ್ಲ" ಎನ್ನುತ್ತಾರೆ.
ಪಿಜಿಆರ್ ಸಿಂಧ್ಯಾರ ಪ್ರಕಾರ, "ನಮ್ಮ ನಾಡಿಗೆ ಹೊಸ ಪ್ರಾದೇಶಿಕ ಪಕ್ಷದ ಅಗತ್ಯವಿಲ್ಲ, ಜೆಡಿಎಸ್ ಪ್ರಾದೇಶಿಕ ಪಕ್ಷದ ಕೆಲಸ ಮಾಡುತ್ತಿದೆ. ಇಂದು ಜಾತಿ ಅಧಾರದಲ್ಲಿ ಮತ ಧ್ರುವೀಕರಣವಾಗಿದೆ. ಉನ್ನತ ತತ್ವಗಳನ್ನು ಜನರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಮತದಾರರು ಪ್ರಬುದ್ಧರಿದ್ದಾರೆ ಅವರು ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ" ಎಂದೆನ್ನುತ್ತಾರೆ.

ಇದೀಗ ಯಡಿಯೂರಪ್ಪ ಹಾಗೂ ಶ್ರೀರಾಮುಲು ಪ್ರಾದೇಶಿಕ ಪಕ್ಷ ಕಟ್ಟುವ ಯೋಚನೆಯಲ್ಲಿದ್ದಾರೆ ಅನ್ನುವ ಸುದ್ದಿ ಹುಟ್ಟಿಕೊಂಡಿದೆ. ಅದಕ್ಕೆ ಇಂಬು ನೀಡುವ ಅನೇಕ ಪ್ರಯತ್ನಗಳು ಕೂಡ ಸಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದು ಸುಲಭ, ಆದರೆ ಅದನ್ನು ಬೆಳೆಸಲು ಎಷ್ಟು ಕಷ್ಟವಿದೆ ಎಂಬುದಕ್ಕೆ ನಮ್ಮ ರಾಜ್ಯದಲ್ಲಿ ಚರಿತ್ರೆಯ ಪುಟಗಳಲ್ಲಿ ಹೇಳ ಹೆಸರಿಲ್ಲದೆ ಹೋಗಿರುವ ಅನೇಕ ಪ್ರಾದೇಶಿಕ ಪಕ್ಷಗಳ ಹೆಸರೇ ಸಾಕ್ಷಿ. ಈ ಇತಿಹಾಸವನ್ನು ಕಂಡೆ ಬೆಚ್ಚಿ ಬಿದ್ದ ಸಿದ್ಧರಾಮಯ್ಯ ತಮ್ಮ ಅಹಿಂದದ ಸಹವಾಸ ತೊರೆದು ಕಾಂಗ್ರೆಸ್‌ನ ಅಂಗಳಕ್ಕೆ ಬಂದಿದ್ದು.

ಯಡಿಯೂರಪ್ಪರಂತು ತಮ್ಮ ಜಾತಿ ಬಾಂಧವರನ್ನು ನೆಚ್ಚಿಕೊಂಡಿದ್ದಾರೆ. ಶ್ರೀರಾಮುಲುವಿಗೆ ಹೋಲಿಸಿದರೆ ಇವರಿಗೆ ಹೆಚ್ಚಿನ ಜನ ಮತ್ತು ಅನುಭವದ ಬೆಂಬಲವಿದೆ. ಆದರೆ ಇದೆಲ್ಲವು ಮತವಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಅದು ಅಲ್ಲದೆ ಅವರ ಮೇಲೆ ಭ್ರಷ್ಟಾಚಾರದ ಅನೇಕ ಆರೋಪಗಳಿದ್ದು ಒಂದೆರಡು ಪ್ರಕರಣಗಳಲ್ಲಿ ಮಾತ್ರ ಅವರಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿದೆ. ಇನ್ನು ಅವರು ವಾಪಾಸು ಯಾವಾಗ ಜೈಲು ವಾಸ ಶುರು ಮಾಡಬೇಕಾಗುತ್ತದೆ ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಮಾಜಿ ಟೆಲಿಕಾಂ ಸಚಿವ ಸುಖರಾಂರವರಿಗೆ ೧೫ ವರ್ಷಗಳ ಬಳಿಕ ಶಿಕ್ಷೆಯಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಾದೇಶಿಕ ಪಕ್ಷಗಳು ವೈಯಕ್ತಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹುಟ್ಟಿಕೊಂಡವೇ ಹೊರತು ಕನ್ನಡ ನಾಡಿನ ಇಶ್ಯೂಗಳ ಆಧಾರದಲ್ಲಿ ಅಲ್ಲ. ಮೂಲ ಪಕ್ಷದಲ್ಲಾದ ಅವಮಾನ, ನಿರ್ಲಕ್ಷ್ಯ, ಸೂಕ್ತ ಸ್ಥಾನಮಾನ ನೀಡದಿರುವುದು ಅಥವಾ ಪಕ್ಷದಿಂದಲೇ ಉಚ್ಛಾಟನೆಗಳ ಕಾರಣಕ್ಕಾಗಿ ಬಹುತೇಕ ನಾಯಕರು ಹೊಸ ಪಕ್ಷ ಕಟ್ಟಿದ್ದು. ಅರಸು, ಹೆಗಡೆ, ಬಂಗಾರಪ್ಪ ಇವರೆಲ್ಲರ ವಿಷಯದಲ್ಲಿ ಇದು ನಿಜ. ಇದೀಗ ಯಡಿಯೂರಪ್ಪ ಮತ್ತು ಶ್ರೀರಾಮುಲುರ ವಿಷಯದಲ್ಲಿ ಕೂಡ ಅದೇ ರೀತಿ ಆಗಲಿದೆ. ಹೊದ ಪುಟ್ಟ, ಬಂದ ಪುಟ್ಟ ಪಕ್ಷಗಳ ಸಾಲಿಗೆ ಇವರೂ ಕೂಡ ತಮ್ಮ ಹೆಸರು ನೋಂದಾಯಿಸುತ್ತ್ತಾರಷ್ಟೆ.

Tuesday, November 22, 2011

"I have never lost faith in the power of journalism"

[IT IS AN EXCLUSIVE INTERVIEW WITH R. POORNIMA (ASSISTANT  EDITOR OF MAYURA MONTHLY MAGAZINE) FOR OUR SUPPLEMENT MEDIA WATCH]


 What inspired you to enter into the field of Journalism?

I never dreamt that I would become a journalist some day. I entered the field by chance. In 1973, I passed my master’s degree in Kannada Literature with First Rank and two Gold medals. And the decade of 1970- 1980 was filled with different democratic movements. There was that big JP movement against emergency. Its cascading effect shook the society. There were Bandaya (rebel) Literary movement, Samudaya People’s Theatre movement, Democratic Women’s movement, Farmers’ movement etc.in Karnataka. As a student and a young writer I identified with all of them. One day, I applied for a job in Prajavani and became a journalist. I found that working as a journalist would be an extension of my involvement in cultural, social and political movements.  I can not imagine journalism without social perspective and social responsibility.

What was the actual condition of women journalists when you entered the field? How was their representation compared to these days?
Kannada Journalism developed along National movement for Independence like in any other language. Women in Karnataka were attracted to Journalism since its beginning, as early as 1920. But 1950s and 1960s saw many women starting there own monthly and weekly magazines. It was more a passion than profession. But in 1970s few women entered weekly magazines published by big media houses.  But there were hardly any women working in newspaper offices. It was the conscious decision of K.N. Hari Kumar (editor of Deccan Herald and Prajavani at that time) which made history. The 1980s saw few women like us working in the newsroom as subeditors. We never begged for exemptions from late night duties and night shifts.

What were challenges you personally faced in the beginning of your carrier?
I entered Journalism with great enthusiasm. And there were no role models. We had to prove ‘double’ than the boys. The male dominated field was watching us, with a pinch of suspicion. But as a tough girl ‘shaped and seasoned’ by movements, I viewed all challenges as opportunities. ‘Prajavani’ had enlightened leadership and the company always stood for social justice in letter and spirit. Nobody dared to humiliate us. I personally did not face much discrimination. I did not wait for reporting beats or assignments to write; I created my own. I could write on more than ten subjects and my growth as a journalistic writer was cool. I firmly believed that if we work with dedication and conviction, recognition (inside and outside) would naturally follow. After all, all our work will be in ‘black and white’!

What are the challenges women journalists have to face today?

Today, women in media have lot of opportunities. The challenge before them is to recognize them. Those who do will get recognition. Another challenge to overcome, as well as fight is the ‘attitude’ problem. I feel that women should challenge discrimination at workplace through their good work.

Do you think that you have achieved what you had thought of at the beginning?
I have never lost faith in the power of  journalism. But I have miles to go before I sleep!

Could you tell us some of your most interesting and passionate work in your career?

To name a few, my writing on the problems of rural areas, female foeticide, health care, HIV, communalism.

How you define the present journalism with a comparison the journalism of yours initial days?
Passion and Fashion- today there is remixing. And there is addition of Corruption.

Does patriarchy get manifested in the field of journalism, may be in terms of discriminations in salary, promotion, assignments etc? If yes, how to tackle it?
Discrimination if any depends on the policy of the media house. The best way to tackle that is through excellence.

Do you think that the explosion of visual media is threatening to the growth of print media?
The explosion of visual media has forced the print media to set its priorities right. In Asia, the growth is not very much affected. The real challenge before print media is to groom its future generations of readers. Today’s children should be today’s readers- for a safe tomorrow!

How do you see the future of print media in the face of growing internet and visual media?
Newspapers will not die; they live long- on the net. We should see that the internet, the new technology, every new gadget will serve the print media. Only difference is the printing will be on LCD screen. But still, at least in Asia, there is no good morning without a newspaper.

What do you think of editorial sanctity in the backdrop of increasing reports of paid news, trade interests, castism, favoritism, corruption in the media?
Paid news, trade interests, casteism, favoritism and corruption are rapidly increasing types of cancers affecting the media. They are both institutional and individual.  Excepting in a very few media houses, the editorial sanctity is in ICU. Media is demanding and getting its ‘scoop’ in the loot. This is really a heart-breaking news.

Women are projected as either sex objects or a tool to sell the products and services of corporate firms, particularly through advertisements? How do you see the trend?
This is not a new trend. Advertisements always reflected the society. Now the curve is more visible and downwards.

How you state your dream journalism?
Dream Journalism! -  By fair people, for the welfare of the people.

Yours tips to budding journalists?

Be on the information highway, to be on the right path.

Brief  Note about Dr. R. Poornima

Dr. R. Poornima has over three decades of experience in Kannada Journalism (18 years in Prajavani, 11 years in Udayavani and now again with Prajavani). She is a well-known Development Journalist and also writes on Culture (Literature, Music, Cinema and Arts). She has worked in daily newspaper, weekly and monthly magazines and all sections of the news room. She is the first woman in Kannada Journalism to get an opportunity to work as Bureau Chief (Mangalore Bureau of Prajavani) and Editor of a daily newspaper (Udayavani Bangalore Edition). She is recognized as a trend setter in many ways. She has earned more than a dozen awards for excellence in media.

Wednesday, November 16, 2011

ರೇಷ್ಮೆ ರೈತರಿಗೆ ನೋವಿನ ಕುಲುಮೆ

ಚನ್ನಪಟ್ಟಣದಲ್ಲಿ ರೇಷ್ಮೆ ಬೆಳೆಗಾರರು ತಮ್ಮ ರೇಷ್ಮೆ ಗೂಡುಗಳ ಬೆಲೆ ತೀವೃವಾಗಿ ಕುಸಿತವಾದುದನ್ನು ಕಂಡು ರೊಚ್ಚಿಗೆದ್ದು ಬೆಂಗಳೂರು - ಮೈಸೂರು ಹೆದ್ದಾರಿಯನ್ನು ಸುಮಾರು ೬ ಗಂಟೆಗಳ ಕಾಲ ಬಂದ್ ಮಾಡಿರುವುದು ಅಚ್ಚರಿಯ ಸಂಗತಿಯೂ ಅಲ್ಲ, ಇದು ನೊಂದ ರೈತರ ತಕ್ಷಣದ ಪ್ರತಿಕ್ರಿಯೆಯಂತೂ ಖಂಡಿತವಾಗಿಯೂ ಅಲ್ಲ. ಕಳೆದ ಫೆಬ್ರುವರಿಯಿಂದ ಸತತವಾಗಿ ತಾವು ಬೆಳೆದ ರೇಷ್ಮೆಯ ಬೆಲೆ ಪಾತಾಳಮುಖಿಯಾಗಿ ಸಾಗುತ್ತಿರುವುದನ್ನು ಹತಾಶರಾಗಿ ನೋಡುತ್ತಿದ್ದ, ಈ ಬೆಲೆ ಕುಸಿತವನ್ನು ಇನ್ನು ಸಹಿಸಿಕೊಳ್ಳಲಾಗದ ಹಂತಕ್ಕೆ ಬಂದ ರೈತರು ತಮ್ಮ ಆಕ್ರೋಶವನ್ನು ರಸ್ತೆ ತಡೆ ಮಾಡುವ ಮೂಲಕ ವ್ಯಕ್ತಪಡಿಸಿದ್ದರು.

ಈ ರೇಷ್ಮೆ ಬೆಲೆ ಕುಸಿತ ಈಗಾಗಲೇ ಎರಡು ಜೀವಗಳನ್ನು (ಸ್ವಾಮಿಗೌಡ ಮತ್ತು ಆತನ ಪತ್ನಿ ವಸಂತ) ಬಲಿ ತೆಗೆದುಕೊಂಡಿದೆ. ೨೦೦೯ರ ಏಪ್ರಿಲ್‌ನಲ್ಲಿ ಮಿಶ್ರ ತಳಿಯ ರೇಷ್ಮೆಗೆ ಕೆಜಿಗೆ ಸರಾಸರಿ ೧೫೬ರೂ ಗಳಿತ್ತು. ೨೦೧೦ರ ಏಪ್ರಿಲ್‌ನಲ್ಲಿ ಇದು ೧೯೫ ರೂಗಳನ್ನು ತಲುಪಿತ್ತು. ಅದೇ ೨೦೧೧ರಲ್ಲಿ ಒಂದು ಕೆಜಿ ರೇಷ್ಮೆಯ ಬೆಲೆ ಸರಾಸರಿ ೩೧೧ ರೂ ಇತ್ತು!

ಆದರೆ ರೇಷ್ಮೆ ಬೆಳೆಗಾರರ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ ಅಥವಾ ಉಳಿಯಲು ನಮ್ಮ ಘನ ಸರ್ಕಾರಗಳು ಬಿಡಲಿಲ್ಲ. ೨೦೧೧ರ ಮೇ ಯಲ್ಲಿ ರೇಷ್ಮೆ ಗೂಡಿನ ಬೆಲೆ ಕೆಜಿಗೆ ಸರಾಸರಿ ೧೮೫ ರೂಗೆ ಇಳಿದಿತ್ತು. ರೇಷ್ಮೆ ಬೆಳೆಗಾರರ ಕತ್ತು ಹಿಸುಕುವ ಕೆಲಸವನ್ನು ಈ ವರ್ಷ ಕೇಂದ್ರ ಸರ್ಕಾರ ತನ್ನ ಬಜೆಟ್‌ನ ಮೂಲಕ ನೇರವಾಗಿಯೇ ಮಾಡಿತ್ತು. ಕೇಂದ್ರ ತನ್ನ ಬಜೆಟ್‌ನಲ್ಲಿ ರೇಷ್ಮೆ ಮೇಲೆ ಶೇ. ೩೦ ರಷ್ಟಿದ್ದ ಆಮದು ಸುಂಕವನ್ನು ಕೇವಲ ಶೇ. ೫ಕ್ಕೆ ಇಳಿಸಿತು. ಅದ್ದರಿಂದ ಈ ಬಾರಿಯ ಬಜೆಟ್ ರೇಷ್ಮೆ ಬೆಳೆಗಾರರಿಗೆ ಮರಣ ಶಾಸನವಾಯಿತು.

ಬೆಲೆ ಇಳಿಕೆಯನ್ನು ಅವಡುಗಚ್ಚಿ ಸಹಿಸಿಕೊಂಡಿದ್ದ ರೈತರಿಗೆ ರೇಷ್ಮೆ ಗೂಡಿನ ಬೆಲೆ ಎರಡಂಕಿಗೆ (೩೦-೫೦ರೂ) ಇಳಿದಾಗ ತೀವೃ ಅಘಾತಕ್ಕೀಡಾಗಿ ಹರಾಜು ಪ್ರಕ್ರಿಯೆಯಿಂದ ದೂರ ಸರಿದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ, ರೈತರ ಬಗ್ಗೆ ರಾಜ್ಯ ಸರ್ಕಾರದ
ನಿರ್ಲಕ್ಷ್ಯತನ, ದಲ್ಲಾಳಿಗಳು ಮತ್ತು ರೀಲರ್‌ಗಳ ವಿರುದ್ಧ ತಮಗಿದ್ದ ಅಸಹನೆಯನ್ನು ಅವರು ಈ ಮೂಲಕ ವ್ಯಕ್ತ ಪಡಿಸಬೇಕಾಯಿತು. ಕೊನೆಗೆ ಅರಣ್ಯ ಸಚಿವ ಸಿ ಪಿ ಯೋಗಿಶ್ವರ್‌ರ ಮಧ್ಯ ಪ್ರವೇಶದಿಂದ ಈ ಪ್ರತಿಭಟನೆ ಕೊನೆಗೊಂಡರು ಕೂಡ ಯೋಗಿಶ್ವರ್ ನೀಡಿದ ಭರವಸೆಯಂತೆ ಸರ್ಕಾರ ಪ್ರತಿ ಕೆಜಿಗೆ ೩೦ರೂ ಸಹಾಯ ಧನ ನೀಡುವ ಬಗ್ಗೆ ಮೀನ ಮೇಷ ಎಣಿಸುತ್ತಿರುವುದು ರೈತರಿಗೆ ಮಾಡಿದ ಅವಮಾನವೇ ಸರಿ. ಈ ಹಿಂದೆ ಈ ವರ್ಷದ ಫೆಬ್ರುವರಿಯಲ್ಲಿ ರಾಮನಗರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಮುಂದೆ ರೈತರು ಬೆಂಗಳೂರು - ಮೈಸೂರು ಹೆದ್ದಾರಿಯನ್ನು ೧೦ ಗಂಟೆಗಳ ಕಾಲ ಬಂದ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, “ಇದು ರೈತರ ದುರಂತ, ರೈತರಿಗೆ ೧ ಕೆಜಿ ರೇಷ್ಮೆ ಗೂಡಿಗೆ ೩೨೦ ರೂ ಖರ್ಚಾಗುತ್ತದೆ. ಭಾನುವಾರದ ಬೆಲೆಯನ್ನು (ಪ್ರತಿ ಕೆಜಿಗೆ ೩೦- ೫೦ ರೂ) ಹೊರತು ಪಡಿಸಿದರೂ ಕೂಡ ಮಾರುಕಟ್ಟೆ ದರ ೧೩೫ರಷ್ಟಿತ್ತು. ಮಾರುಕಟ್ಟೆಯಲ್ಲಿ ಕನಿಷ್ಟ ಬೆಲೆ ನಿಗದಿ ಪಡಿಸಲು ಯಾವುದೇ ಮಾನದಂಡವಿಲ್ಲ. ಅದ್ದರಿಂದಲೇ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ ೩೦ ರೂ ಹರಾಜು ಕೂಗುತ್ತಾರೆ. ಇದಕ್ಕಾಗಿ ಮಾರುಕಟ್ಟೆ ರಕ್ಷಣಾ ಕಾಯಿದೆಯನ್ನು ಸರ್ಕಾರ ಜಾರಿಗೆ ತರಬೇಕು, ಇಲ್ಲದೆ ಹೋದಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ. ರೇಷ್ಮೆ ಬೆಲೆ ಕುಸಿತ ಕಾಣುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಹೆಚ್ಚಿದೆ. ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತರಬೇಕು ಹಾಗೆ ರಾಜ್ಯ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕು” ಎಂದು ಅಭಿಪ್ರಾಯ ಪಡುತ್ತಾರೆ.

ರಾಜ್ಯ ರೇಷ್ಮೆ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ೧,೪೦,೯೫೯ ರೇಷ್ಮೆ ಬೆಳೆಗಾರರು ಮತ್ತು ೭,೧೯೫ ರೇಷ್ಮೆ ರೀಲರ್‌ಗಳಿದ್ದಾರೆ. ರೇಷ್ಮೆ ಬೆಳೆ ರಾಜ್ಯದಲ್ಲಿ ಸುಮಾರು ೮ ಲಕ್ಷ ಜನರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ಯೋಗ ನೀಡುತ್ತದೆ. ಭಾರತದಲ್ಲಿ ಉತ್ಪಾದನೆಯಾಗುವ ೧೫,೬೧೦ ಟನ್ ಮಲ್ಬರಿ ರೇಷ್ಮೆಯಲ್ಲಿ ೭,೨೩೮ ಟನ್ ರೇಷ್ಮೆಯನ್ನು ಕರ್ನಾಟಕ ಉತ್ಪಾದಿಸುತ್ತದೆ. ಭಾರತ ಪ್ರತಿ ವರ್ಷ ೨೮,೦೦೦ ಟನ್ ರೇಷ್ಮೆಯನ್ನು ಬಳಸುತ್ತದೆ ಆದರೆ ನಮ್ಮಲ್ಲಿ ಉತ್ಪಾದನೆಯಾಗುವುದು ೧೯,೦೦೦ ಟನ್ ಮಾತ್ರ. ಅದ್ದರಿಂದ ದೇಶ ಸುಮಾರು ೫,೦೦೦ ಟನ್‌ನಷ್ಟು ರೇಷ್ಮೆಯನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೇಷ್ಮೆ ಕೃಷಿಗೆ ನೆರವಿನ ಹಸ್ತ ಚಾಚ ಬೇಕಾದ ಸರ್ಕಾರಗಳೇ ರೈತರ ಬದುಕಿಗೆ ಕೊಡಲಿಯೇಟು ನೀಡುತ್ತಿರುವುದು ವಿಪರ್ಯಾಸ.