Saturday, August 20, 2011

Rakesh... rest in peace...!

ಕಾಡುವ ಬೆಟ್ಟಗಳು... ಕಾಡುತ್ತಲೆ ಎದೆಯ ಗರ್ಭದೊಳಗೆ ಭಾವ ಚಿತ್ತಾರ ಹೆಣೆಯುವ ಕಣಿವೆಗಳು... ಯಾಕೋ... ಬೇಡ್ವೇ ಬೇಡ... ಈ ಜಗತ್ತು... ಬಾ ನನ್ನೊಳಗೆ... ನನ್ನವನಾಗಿ ಬಿಡು... ನೀನು ನನ್ನೊಳಗೆ ಸೇರಿಕೊಂಡು ಬಿಡು... ಎಂದು ಈಗಲು ಪಿಸುಗುಡುತ್ತಿರುವ ಆ ಹೂವು... ಹರಿದು ಹೋಗಲಿ ನಿನ್ನೊಳಗಿನ ಆ ಕಲ್ಮಶ... ಆಗು ನೀ ನನ್ನ ವಶ... ನನ್ನಂತೆ ಶುದ್ಧ .. ಪರಿಶುದ್ಧ... ಪರಿಶುಭ್ರ.. ಎಂದು ಜುಳು ಜುಳು ನಾದಗೈಯುತ್ತ ಮನವ ತೋಯಿಸಿದ್ದ ಸಲಿಲ ದಾರಿ, ಹೆದ್ದಾರಿಗಳು... ಹಸಿರು, ಬರಡು... ಒಂದು ಗೊತ್ತಾಗುತ್ತಿಲ್ಲ... ಗೊತ್ತಾಗುವುದು ಬೇಡ... ಹೀಗೇನೆ ಆ ನಶೆ ನನ್ನೊಳಗೆ ಇಂಗಿ ಇಂಗಿ... ಈಗಲೂ ನೆನಪಿಸಿಕೊಂಡಾಗ, ನೆನಪಿಸಿಕೊಳ್ಳುತ್ತಿರುವಾಗ ಬದುಕು ಸಂಭ್ರಮ... ಬದುಕೇ ಸಂಭ್ರಮ...!

ನೆನಪಿದೆ, ನದಿಗುಂಟ ನಡೆದ ಹೆಜ್ಜೆ, ಜೊತೆಗಿದ್ದ ಕನಸು, ನಾ ಜೊತೆ ಬರಬೇಡ ಎಂದಾಗ ತುಂಬಿಬಂದಿದ್ದ ಆ ಕಣ್ಣಾಲಿ... ಮೊನ್ನೆ ದೆಹಲಿಯ ಘಾಟು ವಾಸನೆ ನನ್ನ ಸುತ್ತ ಸುತ್ತುತ್ತ ನನ್ನೊಳಗೆ ಇಳಿಯುತ್ತಿರುವಾಗ ಕರೆ ಮಾಡಿದ್ದ ಆತ್ಮೀಯ ಗೆಳತಿಯೊಬ್ಬಳ ಮಾತು.. "ರಾಕೇಶ್, ಇದು ನನ್ನ ಕೊನೆಯ ಕರೆ, ಪ್ಲೀಸ್... ನನಗೆ ಮದುವೆ ಫಿಕ್ಸ್ ಆಗಿದೆ... ನನ್ನ ಹುಡುಗ ತುಂಬ ಸ್ಟ್ರೀಕ್ಟ್... ನಾನು ನನ್ನ ಹುಡುಗನಿಂದ ಏನು ಪಡೆದುಕೊಂಡರು ಅದು ನಾ ಕಳೆದುಕೊಳ್ಳುವ ನಿನಗೆ ಸಮನಾಗಲಾರದು" What a dialogue...! ಎಂದು ಮನಸ್ಸೊಳಗೆ ಅಂದು ಕೊಂಡೆ... ಯಾಕೋ ಇಂತಹ ಮಾತುಗಳು ಈಗೀಗ ಮನಸ್ಸಿಗೆ ನಾಟುತ್ತಿಲ್ಲ... ಮತ್ತೇ ಮತ್ತೇ Terrible beauty... ಲೇಹ್ ಮನಸ್ಸ ಪರದೆಯ ಮೇಲೆ ಮಂಜಾಗಿ ಕೂರುತ್ತದೆ... ಇಬ್ಬನಿಯಾಗಿ.... ಜಿಟಿಜಿಟಿ ಹನಿಯಾಗಿ... ಸೋನೆಯ ಮಳೆಯಾಗಿ ಮತ್ತು ರುದ್ರ ಭಯಂಕರ ಗುಡುಗು ಸಿಡಿಲಾಗಿ.... ಅಲ್ಲಿನ ಪೃಕ್ರತಿಯದ್ದು ತಾಯಿ ಪ್ರೀತಿ... ಒಡಲು ಬರಡಾಗಿದ್ದರು ಪ್ರೀತಿ ಬಯಸುವ ಮನಸ್ಸಿಗೆ ಅದು ನಿತ್ಯ ನೂತನ ತೋರಣ... ಕಾರ್ಮೋಡದ ಅಂಚಿನಿಂದ ನುಸುಳಿ ಬೆಳಕೀಯುವ ಹೊಂಗಿರಣ....

ಮನುಷ್ಯನ ಆರೋಗ್ಯಕ್ಕೆ ಆಹಾರ, ನಿದ್ದೆ ಬಹಳ ಮುಖ್ಯ... ಇವೆರಡರಲ್ಲಿ ಒಂದು ಹೆಚ್ಚು ಕಡಿಮೆ ಆದರೂ ಒಂದಿಲ್ಲೊಂದು ಎಡವಟ್ಟು ಶತಸಿದ್ಧ.... ನಿಮಗೆ ಗೊತ್ತಿರಲಿ, ನಾವು ಮನಾಲಿಯಲ್ಲಿ ಶುಕ್ರವಾರ ಮುಂಜಾನೆ ಒಂಭತ್ತು ಗಂಟೆಗೆ ಇಳಿದಾಗ ಸರಿಯಾಗಿ ನಿದ್ದೆ ಮತ್ತು ಆಹಾರವಿಲ್ಲದೆ ಹೆಚ್ಚು ಕಡಿಮೆ 48 ಗಂಟೆ ಆಗಿತ್ತು...! ಆದರೂ ಶನಿವಾರ ಮುಂಜಾನೆ 2 ಗಂಟೆ ತನಕ ಸುಸ್ತು, ನಿದ್ದೆ ಅನ್ನುವುದು ನಮ್ಮ ಬಳಿಯೂ ಸುಳಿದಿರಲಿಲ್ಲ... ಅದೂ ಶುಕ್ರವಾರ ಹಗಲು ಸುಮಾರು 10 ಕಿ ಮೀನಷ್ಟು ನಡೆದಿದ್ದರು... ಇಂತಹ ರಮಣೀಯತೆಯನ್ನು, ಉಲ್ಲಾಸವನ್ನು ಪೃಕೃತಿಯ ಸೌಂದರ್ಯ ಎಂದು ಕರೆಯುವುದು ನನಗೆ ಉಚಿತವಾಗಿ ಕಾಣಿಸುವುದಿಲ್ಲ... ಅದ್ದರಿಂದ ಇದು ಪೃಕೃತಿ ಪ್ರೀತಿ... ಮೊಗೆದಷ್ಟು ಬತ್ತದ, ಬೇಕಾಗುವ ಜೀವ ಗಂಗೆ...!



ಈಗ... ಈಗ... ಈ ಕ್ಷಣವೇ ಮತ್ತೆ ಅಲ್ಲಿಗೆ ಹೋಗಬೇಕು ಎಂದೆನ್ನಿಸುತ್ತದೆ.... ಹೊರಟೇ ಬಿಡೋಣ ಎಂದೆನ್ನಿಸುತ್ತದೆ... ನಾ ಹೊರಟೇ ಬಿಟ್ಟರೆ... ಬಂಧ ಮುಕ್ತನಾಗುತ್ತೇನೆ... ಬಂಧ ಮುಕ್ತನಾಗುವುದೆಂದರೇ ಏನು... ಪಲಾಯನವಾದವೇ ಅಲ್ಲ ಜೀವನದ ಅಂತಿಮ ಗುರಿಯೇ? ಒಂದು ಗೊತ್ತಾಗುತ್ತಿಲ್ಲ... ಇಲ್ಲ ನಾನು ಪಲಾಯನವಾದಿಯಲ್ಲ... ಜೀವನದ ಅಂತಿಮ ಆಸೆ ಗುರಿ ಈಡೇರಿಸಿಕೊಂಡದ್ದೆ ಆದರೆ ಮುಂದಿನ ದಿನಗಳಿಗೆ ನಾ ಅರ್ಥ ನೀಡುವುದಾದರು ಹೇಗೆ... ನಾಗರಿಕ ಪ್ರಪಂಚದ ಜೇಡರ ಹುಳ ಸೊಗಸಾಗಿ ನೇಯ್ದ ಬಲೆಯೊಳಗೆ ಸಿಳುಕಿ ಒದ್ದಾಡುತ್ತಿದ್ದೇನೆ... ಅ ಒದ್ದಾಟವನ್ನೇ ನಾ ಬದುಕುವುದು, ಹೋರಾಡುವುದು, ಕೆರಿಯರ್ ಅಂತ ಅಂದುಕೊಂಡಿದ್ದೇನೆ... Rakesh... rest in peace...!

No comments: