Thursday, April 23, 2009

ಯಡಿಯೂರಪ್ಪ ಎಂಬ ಬಿಜೆಪಿಯ ವಿರೋಧ ಪಕ್ಷ

’ಕತ್ತಲು ಕರಗುವುದು, ಕಮಲ ಅರಳುವುದು’ ಇದು ಜನಸಂಘ ಭಾರತೀಯ ಜನತಾ ಪಕ್ಷವಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮಾಡಿದ ಭಾಷಣದಲ್ಲಿದ್ದ ಆಶಯ.
ಸಮಯ ಸಾಗಿದೆ, ವರ್ಷಗಳು ಉರುಳಿದೆ. ಕಮಲ ಅರಳಿದೆ. ಆದರೆ ಕತ್ತಲೆ...? ವಿಪರ್ಯಾಸವೆಂದರೆ ಕಮಲದೊಳಗೆ ಕತ್ತಲೆ ಆವರಿಸಿಕೊಳ್ಳತ್ತಿದೆಯಾ ಎಂಬ ಭಯ ಕಾಡುತ್ತಿದೆ. ಅದರಲ್ಲೂ ರಾಜ್ಯ ಬಿಜೆಪಿಯನ್ನು ಕಂಡಾಗ!
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉದಾತ್ತ ಗುರಿಗಳನ್ನಿಟ್ಟುಕೊಂಡು ಅದನ್ನು ಸಾಧಿಸಲು ಸನ್ಮಾರ್ಗವನ್ನೇ ಆಯ್ದುಕೊಂಡು ಅದರಲ್ಲೆ ಸಾಗುತಿರುವ ಸಂಘಟನೆ. ಬಿಜೆಪಿ ಅದರ ರಾಜಕೀಯ ಉದ್ದೇಶಗಳನ್ನು ಪೂರೈಸಲಿರುವ ಸಂಘಟನೆಯಾಗಿದ್ದುಕೊಂಡು ಯಾಕಿಷ್ಟು ನೈತಿಕ‌‌‌‌‌‌‌‌‌‌‌ ಅಧ:ಪತನಕ್ಕಿಡಾಗುತ್ತಿದೆ? ಎಂಬುದೇ ಪರಿಹರಿಸಲಾಗದ ಪ್ರಶ್ನೆಯಾಗಿ ಉಳಿದಿದೆ.
ಬಿಜೆಪಿ ಕೇಂದ್ರದಲ್ಲಿ ಸುಮಾರು ಆರು ವರ್ಷಗಳ ಕಾಲ ಆಡಳಿತ ನಡೆಸಿದ ಎನ್ ಡಿ ಎ ಮೈತ್ರಿಕೂಟದ ನೇತ್ರತ್ವ ವಹಿಸಿತ್ತು. ಉತ್ತಮ ಆಡಳಿತವನ್ನೇ ನೀಡಿತ್ತು ಕೂಡ. ಆದರೆ ಅಧಿಕಾರ ಕಳೆದುಕೊಂಡಿದ್ದು ಅನಿರೀಕ್ಷಿತ. ಅದರ ಬಗ್ಗೆ ಇಂದಿಗೂ ಒಂದು ಬಗ್ಗೆಯ ಅವ್ಯಕ್ತ ಖೇದವಿದೆ. ಇವತ್ತಿಗೂ ಒಬ್ಬ ಬಿಜೆಪಿ ಕಾರ್ಯಕರ್ತ ಆ ಆರು ವರ್ಷಗಳ ಬಗ್ಗೆ ಹೆಮ್ಮೆಯಿಂದ ಎದೆ ತಟ್ಟಿ ಮಾತನಾಡುತ್ತಾನೆ ಅದಾಗಿ ಐದು ವರ್ಷಗಳ ಬಳಿಕವೂ!
ಅದೇ ವಾಜಪೇಯಿ ಮತ್ತವರೊಂದಿಗೆ ಹೆಚ್ಚುವರಿಯಾಗಿ ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಆದರ್ಶ ಎಂದು ಹೇಳುತ್ತ ನಮ್ಮ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಯಿತು. ಅಧಿಕಾರಕ್ಕೆ ಬಂದದ್ದೆ ತಡ ಈ ಆದರ್ಶಗಳು ಹೇಳ ಹೆಸರಿಲ್ಲದಂತೆ ಮಾಯವಾಗಿದೆ.
ಬರಿ ಹತ್ತು ತಿಂಗಳ ಹಿಂದೆ ಕರ್ನಾಟಕದ ಬಿಜೆಪಿ ಕಾರ್ಯಕರ್ತನಿಗೆ ಮಾದರಿ ಹೋರಾಟಗಾರ ಮತ್ತು ಆದರ್ಶ ವ್ಯಕ್ತಿಯಾಗಿದ್ದ ಯಡಿಯೂರಪ್ಪ ಇಂದು ಅದೇ ಕಾರ್ಯಕರ್ತರಿಗೆ ಅಸಹ್ಯ ಹುಟ್ಟಿಸಿದ್ದಾರೆ.
ಒಂದೂರು. ಅಲ್ಲಿ ಬಹು ಹಿಂದಿನಿಂದಲೂ ಒಂದು ಮನೆ ಅರೆಸ್ಸೆಸ್ ಮನೆಯೆಂದೆ ಗುರುತಿಸಲ್ಪಟ್ಟಿತ್ತು. ಆ ಮನೆಯ ಯಜಮಾನ ಜನಸಂಘದ ಕಾಲದಿಂದಲೂ ಇಂದಿನ ಬೆಜೆಪಿಯ ಮೂಲ ತತ್ವಗಳ ಪ್ರತಿಪಾದಕರು.ಅ ಊರಿನಲ್ಲಿ ಈ ಪಕ್ಷದ ಐಡೆಂಟಿಟಿಯಾಗಿ ಗುರುತಿಸಲ್ಪಟ್ಟವರು. ಹಿಂದುತ್ವದ ಕೆಲಸಕ್ಕಾಗಿ ತಮ್ಮ ಕೈಯಿಂದಲೇ ಖರ್ಚು ಮಾಡುತ್ತಿದ್ದವರು. ಸಂಘ ಅಥವಾ ಪಕ್ಷದಿಂದ ಅವರೇನು ಬಯಸಿದವರಲ್ಲ. ಸಂಘಟನೆಗಾಗಿ ಅವರು ಹಲವರ ವಿರೋಧ ಕಟ್ಟಿಕೊಂಡವರು. ಅವರು ಈಗಲೂ ಹಾಗೆಯೇ ಇದ್ದಾರೆ. ಅದೇ ಬಡತನ, ತನ್ನತನ ಮತ್ತು ಆದರ್ಶದೊಂದಿಗೆ!
ಅವರ ಮನೆಯಿಂದ ೨-೩ ಕಿಲೋಮಿಟರ್‍ ದೂರದಲ್ಲಿ ಹೊಸದೊಂದು ಮನೆ ನಿರ್ಮಾಣವಾಗಿದೆ. ಅದಕ್ಕೆ ಸುಮಾರು ೪೦ ಲಕ್ಷ ಖರ್ಚಾಗಿರಬಹುದು. ಆ ಮನೆ ತುಂಬಾ ಐಷಾರಾಮಿ ವಸ್ತುಗಳಿವೆ. ಮನೆ ಸದಸ್ಯರ ಹೆಸರಲ್ಲಿ ಸಾಕಷ್ಟು ಅಕೌಂಟ್ ಗಳಿವೆ. ಅವನಲ್ಲಿ ಕನಿಷ್ಟ ೧ ಕೋಟಿ ರೂಪಾಯಿಯ ಆಸ್ತಿಯಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಎರಡು ವಷðಗಳ ಹಿಂದೆ ಅವನು ಕೇವಲ ಎರಡು ಎಕರೆ ಭೂಮಿಗೆ ಒಡೆಯನಾಗಿದ್ದ. 'ಇಷ್ಟೆಲ್ಲಾ ಅಸ್ತಿಯನ್ನು ಸಂಪಾದಿಸುತ್ತೇನೆ' ಎಂದು ಅವನು ಕನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಅವನು ಇಷ್ಟೆಲ್ಲ ಹೇಗೆ, ಎಲ್ಲಿಂದ, ಯಾವಗ ಸಂಪಾದಿಸಿದ? ಉತ್ತರ ಸರಳವಾಗಿದೆ. ಅವನು ಯಡಿಯೂರಪ್ಪನವರ ಹತ್ತಿರದವರೊಬ್ಬರ ಆಪ್ತ ಕಾರ್ಯದರ್ಶಿಯಾಗಿದ್ದಾನೆ ಅಷ್ಟೇ!
ನನಗೆ ಗೊತ್ತಿರುವಂತೆ ಒಬ್ಬರು ಬಿಜೆಪಿ ನಾಯಕರಿದ್ದಾರೆ. ಅವರು ಎಲ್ಲಾ ರೀತಿಯಲ್ಲೂ ಚುನಾವಣೆಗೆ ಸ್ಪರ್ಧಿಸಲು ಆರ್ಹರಾಗಿದ್ದರು. ಆದರೆ ಚುನಾವಣೆಗೆ ಚೆಲ್ಲಲ್ಲು ಬೇಕಾಗಿದ್ದ ಹಣ ಅವರಲ್ಲಿರಲಿಲ್ಲ. ಅವರಿಗೆ ಟಿಕೆಟ್ ನಿರಾಕರಿಸಲು ಇದೇ ವಾಸ್ತವ ಕಾರಣ!
ರಾಜಕೀಯ ಪಕ್ಷಗಳ ಮುಖ್ಯ ಉದ್ದೇಶ ಅಧಿಕಾರ ಗಳಿಸುವುದು ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಹಾಗೆಯೇ, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತನ ಕನಸು ಆಡಳಿತ ನಡೆಸುವುದು. ಅವರಿಗೂ ಈ ಕನಸಿದೆ. ಇನ್ನಾವರು ಏನೂ ಮಾಡಬೇಕು? ತನ್ನ ’ಜನಪರ’ ಕೆಲಸ ಬಿಟ್ಟು ’ಹಣ’ ಮಾಡಬೇಕು ಅಷ್ಟೇ.
ಹತ್ತು ತಿಂಗಳ ಹಿಂದೆ ಅಂದರೆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಅಂದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸಲು ಅವಿರತವಾಗಿ ದುಡಿದಿದ್ದ ಅನೇಕ ಕಾರ್ಯಕರ್ತರು ಈ ಚುನಾವಣ ಸಂದರ್ಭ ಮನೆಯಲ್ಲಿ ಕುಳಿತಿದ್ದಾರೆ. ಕಾರಣ, ಅವರು ಇಷ್ಟರವರೆಗೆ ಕಾಂಗ್ರೇಸ್, ತ್ರತೀಯ ರಂಗ ಏನು ಮಾಡಿದೆ, ಮಾಡಿತ್ತು, ಮಾಡಬಹುದು ಎಂದು ಹೇಳುತ್ತ ಬಂದಿದ್ದರೋ ಅದನ್ನೀಗ ಅವರ ಪಕ್ಷ ಮಾಡುತ್ತಿದೆ. ಇದನ್ನು ಜನ ಸಾಮಾನ್ಯ ಇವರಲ್ಲಿ ಪ್ರಶ್ನಿಸಿದರೆ ಅವರಿಗೆ ಉತ್ತರ ನೀಡಲು ಆಗುತ್ತಿಲ್ಲವಂತೆ.
ಹಿರಿಯ ಅರೆಸ್ಸೆಸ್ ಸ್ವಯಂಸೇವಕರೊಬ್ಬರ ಜತೆ ಮಾತನಾಡುತ್ತಿದೆ ಆಗ ಅವರು " ಹಿಂದೆ ಅರೆಸ್ಸೆಸ್ ಸ್ವಯಂಸೇವಕ ಎಂದರೆ ಊರಿಗೆ ಸ್ವಾಮೀಜಿ ಇದ್ದಂತೆ, ಜನರು ಅಷ್ಟು ಗೌರವದಿಂದ ಕಾಣುತ್ತಿದ್ದರು, ಇಂದಿಗೂ ಅರೆಸ್ಸೆಸ್ ಸ್ವಯಂಸೇವಕರಿಗೆ ಆ ಮಾರ್ಯಾದೆ ಇದ್ದೆ ಇದೆ. ಅದರೆ ಬಿಜೆಪಿಯಲ್ಲಿ ಎಲ್ಲೂ ಸಲ್ಲದ, ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲದವರೇ ಕಾರ್ಯಕರ್ತರಾಗುತ್ತಿದ್ದರೆ ಮತ್ತು ಅವರಿಗೆ ಪಕ್ಷದಲ್ಲಿ ಒಳ್ಳೆ ಸ್ಥಾನಮಾನ ಸಿಗುತ್ತಿದೆ" ಈ ನೋವು ಯಡ್ಡಿಗೆ ಅರ್ಥವಾಗುತ್ತದೆಯೇ?
ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ೨೦೦೮ರಲ್ಲಿ ಅಣು ಒಪ್ಪಂದದ ಸಂಬಂಧ ನಡೆದ ಅವಿಶ್ವಾಸ ಗೊತ್ತುವಳಿ ಸಂದರ್ಭ ತಿಪ್ಪರಲಾಗ ಹಾಕಿದ ರಾಜ್ಯದ ಮೂವರು ಸಂಸದರ ಉದಾಹರಣೆ ಯಡ್ಡಿ ಮುಂದೆ ಇದೆ. ಅದರೂ...?
ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಗೋಚರಿಸಿರುವ ಕರ್ನಾಟಕ ಅದರ ಪಾಲಿಗೆ ಮತ್ತೊಂದು ಉತ್ತರ ಪ್ರದೇಶವಾಗದಿದ್ದರೆ ಸಾಕು!
ಬಿಜೆಪಿ ಆಡಳಿತದ ಖದರು ನೆರೆಯ ರಾಜ್ಯಗಳಿಂದ ರಾಜ್ಯದ ಗಡಿ ಪ್ರವೇಶಿಸಿದೊಡನೆ ಗೊತ್ತಾಗಬೇಕು, ಈ ರಾಜ್ಯ ಪ್ರಕಾಶಿಸುತ್ತಿದೆ ಎಂದೆನಿಸಬೇಕು. ಬಿಜೆಪಿಯ ಬಗ್ಗೆ ಧನಾತ್ಮಕ ಆಭಿಪ್ರಾಯ ಮೂಡಬೇಕು. ಆದರೆ ಈಗ ಹಾಗಾಗುತ್ತಿದೆ ಎಂದು ಯಾರಿಗದರೂ ಅನಿಸುತ್ತಿದೆಯೇ?
ಒಬ್ಬ ವ್ಯಕ್ತಿಯ ಆಡಳಿತ ಸಾಮರ್ಥ್ಯವನ್ನು ಅಳೆಯಲು ಹತ್ತು ತಿಂಗಳು ಸಾಕಾಗುವುದಿಲ್ಲ ಅದರೆ ಕಳೆದುಕೊಂಡಿರುವ ಸೈದ್ದಾಂತಿಕ ನೆಲೆಗಟ್ಟನ್ನು ಇನ್ನು ಹತ್ತು ವರ್ಷ ಕಳೆದರೂ ಗಳಿಸಿಕೊಳ್ಳಲು ಸಾಧ್ಯನಾ? ವಾಜಪೇಯಿ ಸರ್ಕಾರ ಹದಿಮೂರು ತಿಂಗಳು ಆಡಳಿತ ನಡೆಸಿ ಅಧಿಕಾರದಿಂದ ಕೆಳಗಿಳಿದಾಗ ಒಬ್ಬ ಸಾಮಾನ್ಯ ಕಾರ್ಯಕರ್ತ ಮುಂದಿನ ಬಾರಿ ಬಿಜೆಪಿಯೇ ಆಡಳಿತ ನಡೆಸಬೇಕು ಎಂದು ಹಠ ಕಟ್ಟಿ ದುಡಿದಿದ್ದ, ಆಗ ಯಾರೂ ಕೊಂಕು ನುಡಿದಿರಲಿಲ್ಲ. ಯಾಕೆಂದರೆ ವಾಜಪೇಯಿ, ಅಡ್ವಾಣಿ ರೂಪಿಸಿದ್ದ ಮಾದರಿ ಮತ್ತು ಆ ಬಗೆಗಿನ ಅವರ ನಿಷ್ಟೆ ಅಷ್ಟು ಉನ್ನತವಾಗಿತ್ತು. ಆದರೆ ಯಡ್ಡಿಯದ್ದು?
ವಾಜಪೇಯಿಗೆ ಮಂತ್ರಿಯಾಗಬೇಕು ಎಂದೆನಿಸಿದ್ದರೆ ಅವರು ಆ ಅಸೆ ಯಾವತ್ತೋ ಈಡೇರುತ್ತಿತ್ತು. ಆದರೆ ಆವರು ಹಾಗೇ ಮಾಡಲಿಲ್ಲ ಯಾಕೆಂದರೆ ಅವರಿಗೆ ಸಿದ್ದಾಂತ ಮುಖ್ಯವಾಗಿತ್ತು. ಅದ್ದರಿಂದಲೇ ಅವರು ಇಂದಿಗೂ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರ ಹ್ರದಯ ಸಿಂಹಾಸನದೀಶ್ವರ. ಈ ಕಾರಣಕ್ಕೇಯೆ ಅವರ ಬಗ್ಗೆ ಬಿ. ಕೆ. ಹರಿಪ್ರಸಾದ್ ಎಂಬ ಕಾಂಗ್ರೇಸ್ ನಾಯಕ ಕೇವಲವಾಗಿ ಮಾತನಾಡಿದಾಗ ನಮ್ಮ ರಕ್ತ ಕುದಿಯುವುದು. ಅದೇ ಯಡ್ಡಿ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಅವರಿಗೆ ಮಾತ್ರ ಕೋಪ ಬರುತ್ತದೆ. ಉಳಿದವರು ಮುಸಿಮುಸಿ ನಗುತ್ತಿರುತ್ತಾರೆ!
ಇಂದು ರಾಜ್ಯ ಬಿಜೆಪಿಗೆ ನಾಯಕರ ಕೊರತೆಯಿಲ್ಲ, ಕೊರತೆ ಇರುವುದು ಸೈದ್ದಾಂತಿಕತೆ ಮತ್ತು ನೈತಿಕತೆಯದ್ದು. ಯಡ್ಡಿ ಸಾಗುತ್ತಿರುವ ಹಾದಿಯಲ್ಲಿ ಸಾಗಿದರೆ ಅವರು ಮತ್ತು ಕೆಲವರು ಮಾತ್ರ ಲಾಭ ಪಡೆಯುತ್ತಾರೆ. ಬಿಜೆಪಿಗೆ ತನಗಿದರಿಂದ ಲಾಭವಾಗಿದೆ ಎಂದೆನಿಸಬಹುದು ಆದರೆ ಇದರ ದೂರಾಗಾಮಿ ಪರಿಣಾಮ ಮಾತ್ರ ಋಣಾತ್ಮಕ. ಮುಂದೊಂದು ದಿನ ಆಥವಾ ಶೀಘ್ರದಲ್ಲೇ ಬಿಜೆಪಿಗೆ ನೈಜ ಮತ್ತು ಜನಪರ ನಾಯಕರು, ಕಾರ್ಯಕರ್ತರೇ ಇಲ್ಲದೇ ಹೋಗಬಹುದು.
ಕೆಲವೇ ದಿನಗಳ ಹಿಂದೆ ಚುನಾವಣೆಯ ಅಮಲಿನಲ್ಲಿ, ಅಲ್ಪಸಂಖ್ಯಾತರನ್ನು ಒಲಿಸಿಕೊಳ್ಳುವ ಬರದಲ್ಲಿ ನಾನು ಆಧಿಕಾರದಲ್ಲಿರುವ ತನಕ ಅಲ್ಪಸಂಖ್ಯಾತರ ಒಂದು ಕೂದಲನ್ನು ಕೂಡ ಕೊಂಕಲು ಬಿಡುವುದಿಲ್ಲ ಎಂದು ಆರ್ಭಟಿಸಿದ್ದರು ನಮ್ಮ ಮುಖ್ಯ ಮಂತ್ರಿಗಳು. ಅದನ್ನೇ ಕೋಮು ಗಲಭೆಯ ಹೆಸರಿನಲ್ಲಿ ರಾಜ್ಯದ ಯಾವುದೇ ನಾಗರಿಕನ ಕೂದಲು ಕೂಡ ಮುಟ್ಟಲು ಬಿಡುವುದಿಲ್ಲ ಎಂದನ್ನುತ್ತಿದ್ದಾರೆ ಅದೇಷ್ಟು ಅರ್ಥಪೂðಣವಾಗಿರುತ್ತಿತ್ತು. ಈ ಮಾತು ಬಿಜೆಪಿ ಬಹುಸಂಖ್ಯಾತರ ಪಕ್ಷ ಅಲ್ಲವೆಂಬುದನ್ನು ಸಾಬೀತು ಪಡಿಸಿತು. ತಾವು ಜಾತ್ಯತೀತರು ಎಂದು ಕರೆದುಕೊಳ್ಳವ ಪಕ್ಷಗಳು ಮತ್ತು ಅಲ್ಪಸಂಖ್ಯಾತ ವರ್ಗದ ಬಹುಪಾಲು ನಾಯಕರುಗಳು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದೇ ಹೇಳುತ್ತಾರೆ. ಇನ್ನೂ ರಾಜ್ಯದ ಬಿಜೆಪಿ ಸರಕಾರವನ್ನು ಅಭಿವ್ರಧಿಪರ ಪಕ್ಷ ಎಂದು ಒಪ್ಪಿಕೊಳ್ಳಲು ಕೂಡ ಸಾಧ್ಯವಿಲ್ಲ. ಹಾಗಾದರೆ ಬಿಜೆಪಿ ಯಾರ ಪಕ್ಷ?
ನನಗಂತೂ ಆಡ್ವಾಣಿ ಪ್ರಧಾನಿಯಾಗಬೇಕೆಂಬ ಆಸೆ ಬೆಟ್ಟದಷ್ಟಿದೆ. ಆದರೆ ರಾಜ್ಯ ಬಿಜೆಪಿಯ ಬಗ್ಗೆ ಮತ್ತು ಅದು ಸಾಗುತ್ತಿರುವ ಹಾದಿಯ ಬಗ್ಗೆ ರೇಜಿಗೆಯಿದೆ.
ನನ್ನ ಯೋಚನೆ ಹೀಗಿದೆ, ಆಡ್ವಾಣಿ ದೇಶದ ಪ್ರಧಾನಿ ಆಗಬೇಕು ಆದರೆ ರಾಜ್ಯದಲ್ಲಿ ಬಿಜೆಪಿ ನಿರಾಶಾದಾಯಕ ಪ್ರದರ್ಶನ ನೀಡಬೇಕು. ಇಲ್ಲದೇ ಹೋದಲ್ಲಿ ಯಡ್ಡಿ ಮತ್ತವರ ಸಂಗಡಿಗರು ತಾವು ಮಾಡಿದ್ದು ಸರಿ ಮತ್ತು ಇದಕ್ಕೆ ಜನರ ಆಶಿರ್ವಾದ ಇದೆಯೆಂದು ಭಾವಿಸಿ ರಾಜ್ಯದಲ್ಲಿನ ನೈಜ ಬಿಜೆಪಿಯನ್ನು ಬುಡಸಮೇತ ಕಿತ್ತೆಸೆಯುವುದ ಖಂಡಿತ.

Wednesday, April 8, 2009

ಅದರರ್ಥ ಅವರು ಟೀಕಾತೀತರೆಂದಲ್ಲ! ಆದರೆ....

ಕನ್ನಡ ಪತ್ರಿಕೋದ್ಯಮ ನಿಂತ ನೀರಾಗಿದ್ದ ಕಾಲದಲ್ಲಿ ಹುಟ್ಟಿಕೊಂಡು ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾದ ಪತ್ರಿಕೆ ’ವಿಜಯ ಕರ್ನಾಟಕ’. ’ವಿಜಯ ಕರ್ನಾಟಕ’ ಒಳ್ಳೆಯದನ್ನೇ ಮಾಡಿತು ಎಂಬುದಕ್ಕಿಂತ ಈ ಪತ್ರಿಕೆಯ ಕ್ಷಿಪ್ರ ಬೆಳವಣಿಗೆಗೆ ಇಡೀ ಕನ್ನಡ ಪತ್ರಿಕೋದ್ಯಮಕ್ಕೆ ಮತ್ತು ಆ ಮೂಲಕ ಓದುಗರಿಗೆ ಸಾಕಷ್ಟು ಒಳಿತನ್ನು ಮಾಡಿತು. ಇಂದು ಎಲ್ಲ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ತಾವು ’ಚಂದ’ ಕಾಣಿಸಿಕೊಳ್ಳಬೇಕೆಂಬ ಹಪಾಹಪಿ ಹುಟ್ಟಲು ’ವಿಜಯ ಕರ್ನಾಟಕ’ವೇ ಕಾರಣ. ವಿಜಯ ಕರ್ನಾಟಕ ಬೇರೆ ಪತ್ರಿಕೆಯ ಓದುಗರನ್ನು ತನ್ನತ್ತ ಸೆಳೆದುಕೊಂಡದಕ್ಕಿಂತ ಹೆಚ್ಚಾಗಿ ಪತ್ರಿಕೆಗಳನ್ನು ಓದುವ ಒಂದು ಓದುಗ ವಲಯವನ್ನೇ ಸ್ರಷ್ಟಿಸಿತು.

ಇದಕ್ಕೇ ಸಾಕ್ಷಿ ಇಂದು ಮುಖ್ಯವಾಹಿನಿ ಪತ್ರಿಕೆಗಳನ್ನು ’ಕೊಂಡು’ ಓದುವ ಸುಮಾರು ಹದಿನೈದು ಲಕ್ಷ ಓದುಗರು. ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ನಾನಿಲ್ಲಿ ಚರ್ಚೆ ಮಾಡುತ್ತಿಲ್ಲ. ಆದರೆ ವಿಜಯ ಕರ್ನಾಟಕದ ಈ ಸಾಧನೆಯ ಹಿಂದಿರುವ ವ್ಯಕ್ತಿ ಮತ್ತು ಒಂದು ಅಂಶ ಅಥವಾ ಸಿಧಾಂತದ ಬಗ್ಗೆ ಕೆಲವರು ಉರಿ ಕಾರುತ್ತಿದ್ದಾರೆ ಅದರಲ್ಲೂ ಒಂದು ಸಂಜೆ ಪತ್ರಿಕೆಯ ಸಂಪಾದಕರು.

ಅದಕ್ಕೆ ಕಾರಣವೂ ಇದೆ! ವಿಕ ಅಂದೊಡನೆ ತಕ್ಷಣ ನೆನಪಿಗೆ ಬರುವುದು ಅದರ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ಅದರ ಅಂಕಣಕಾರರ ದಂಡು! ಇಂದು ಕನ್ನಡ ದಿನಪತ್ರಿಕೆಗಳ ಸಂಪಾದಕರಲ್ಲಿ ವಿಶ್ವೇಶ್ವರ ಭಟ್ ರಷ್ಟು ಜನಪ್ರಿಯ (ಅದೂ ಒಳ್ಳೆಯ ಕಾರಣಕ್ಕೆ) ಮತ್ತು ಬರವಣಿಗೆಯ ಮೂಲಕ ಓದುಗರಿಗೆ ಆಪ್ತರಾಗಿರುವ ಸಂಪಾದಕ ಇನ್ನೊಬ್ಬರಿಲ್ಲ. ಬೇರೆ ಯಶಸ್ವಿ ಸಂಪಾದಕರಿರಬಹುದು ಅದು ಬೇರೆ ವಿಷಯ. ವಿಕದಲ್ಲಿ ಪ್ರಕಟಗೊಳ್ಳುವ ಪ್ರತಾಪ್ ಸಿಂಹ ಮತ್ತು ಭಟ್ರ ಅಂಕಣಗಳು ಓದುಗರಲ್ಲಿ ಸಂಚಲನ ಉಂಟುಮಾಡುವ ಸಾಮರ್ಥ್ಯ ಇರುವಂತಹವು, ಇದು ಈ ಮೊದಲೇ ಹತ್ತಾರು ಸಂದರ್ಭಗಳಲ್ಲಿ ಸಾಬೀತಾಗಿದೆ ಕೂಡ.

ಅವರ ಅಂಕಣದಲ್ಲಿನ ವಿಷಯ ಅಥವಾ ಅಭಿಪ್ರಾಯವನ್ನು ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟದ್ದು. ಆದರೆ ಅವರ ಪ್ರತಿಭೆಯನ್ನೇ ಪ್ರಶ್ನಿಸುವ ಚಾಳಿಯನ್ನು ಕೆಲವರು ಬೆಳೆಸಿಕೊಂಡಿರುವುದು ಕನ್ನಡ ಪತ್ರಿಕೋದ್ಯಮದ ಆರೋಗ್ಯದ ದೃಷ್ಟಿಯಲ್ಲಿ ತೀರಾ ಅನಾಹುತಕಾರಿ. ಇನ್ನು ವಿಕ ಬಲಪಂಥಿಯ ಪತ್ರಿಕೆ ಎಂಬ ಕಾರಣಕ್ಕೇ ಕೆಲವರು ಇದನ್ನು ಟೀಕಿಸುತ್ತಾರೆ. ಈ ದೇಶದಲ್ಲಿ ಎಡಪಂಥಿಯರು ಪತ್ರಿಕೆ ನಡೆಸಬಹುದಾದರೆ ಅವರು ಬರೆಯಬಹುದಾದರೆ ಬಲಪಂಥಿಯರು ಯಾಕೆ ಆ ಕೆಲಸ ಮಾಡಬಾರದು? ಒಂಚೂರು ಅಚೀಚೆ ಆದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇದೆ, ಎಲ್ಲರಿಗೂ ತಮಗನಿಸಿದನ್ನು ಹೇಳುವ ಸಂವಿಧಾನದತ್ತ ಹಕ್ಕಿದೆ ಎಂದು ಕೂಗು ಹಾಕುವವರೇ ಬಲಪಂಥಿಯರು ಪತ್ರಿಕೆ ಮಾಡಿ ಅದನ್ನು ಪ್ರಸರಣದಲ್ಲಿ ಮೊದಲ ಸ್ಥಾನಕ್ಕೆ ತಂದರೆ ಅದರಲ್ಲಿ ಅವರ ಅನಿಸಿಕೆ ಹೇಳಿದರೆ ಮೈ ಮೇಲೆ ಇರುವೆ ಬಿಟ್ಟುಕೊಂಡವರ ಥರ ವರ್ತಿಸುವುದು ಯಾಕೆ? ಪಾಪ, ಬಲಪಂಥಿಯರಿಗೆ ಅಭಿವ್ಯಕ್ತಿ ಸ್ವಾತಂತ್ರ ಇಲ್ಲವೇ? ಪ್ರಜಾಪ್ರಭುತ್ವ ನಿಂತಿರುವುದೇ ಅಭಿಪ್ರಾಯ ಹೇಳುವ ಸ್ವಾತಂತ್ರದ ಮೇಲೆ.

ಯಾರದ್ದೇ ಅಭಿಪ್ರಾಯ ನಮಗೆ ಪಥ್ಯವಾಗದಿದ್ದಲ್ಲಿ ಅದನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ವ್ಯಕ್ತಿ ನಿಂದನೆ ಆಗದಂತೆ ಟೀಕಿಸುವುದು ಬಿಟ್ಟು ವ್ಯಕ್ತಿ ನಿಂದನೆ ಮಟ್ಟಕ್ಕೆ ಇಳಿಯುವುದು ಎಷ್ಟು ಸರಿ? ನಂತರ ಅವರೇ ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ಪಾಠ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಹೆಚ್ಚು ಜನರ ಆಭಿಪ್ರಾಯಕ್ಕೆ ಮನ್ನಣೆ, ವಿಕವನ್ನು ೬ ಲಕ್ಷ ಜನ ಓದುತ್ತಾರೆ ಅಂದರೆ ಕರ್ನಾಟಕದಲ್ಲಿ ಹೆಚ್ಚು ಜನರು ಬಲಪಂಥಿಯ ಬರಹವನ್ನು ಇಷ್ಟಪಡುತ್ತಾರೆ ಎಂದರ್ಥ ತಾನೇ? ಅಂದರೆ ವಿಕ ಬೇರೊಂದು ಪಂಥದ ಪತ್ರಿಕೆಯಾದರೆ ಈ ೬ ಲಕ್ಷ ಜನರ ಅಭಿರುಚಿ ಮತ್ತು ಧ್ವನಿ ಏನಾಗಬೇಡ?

ಮತ್ತೇ ವಿಕದ ಪ್ರಸರಣ ಸಂಖ್ಯೆ ಕಡಿಮೆಯಾಗಲು ಕೆಲವರು ಊಹಿಸುತ್ತಿರುವ ಕಾರಣಕ್ಕಿ೦ತ ತೀರಾ ಭಿನ್ನ ಕಾರಣವಿದೆ ಆ ಬಗ್ಗೆ ತಾವು ಯೋಚನೆ ಮಾಡದೆ ತಮ್ಮ ತಮ್ಮ ಪತ್ರಿಕೆಗಳ ಪ್ರಸರಣ ಹೆಚ್ಚಿಸುವ ಬಗ್ಗೆ ವಿಕದ ’ಹಿತ ಚಿಂತಕರು’ ಚಿಂತಿಸುವುದು ಒಳಿತು. ಇನ್ನೂ ಸಿಎನ್ಎನ್ ಐಬಿಎನ್ ನ ಮ್ಯಾನೇಜಿಂಗ್ ಎಡಿಟರ್‍ ರಾಜದೀಪ್ ಸರ್‍ ದೇಸಾಯಿಯವರು ಬಿ ವಿ ಸೀತಾರಾಂರನ್ನು ಬೇಟಿಯಾಗಲು ನಿರಾಕರಿಸಿದ್ದರು ಎಂದು ಭಟ್ರು ತಮ್ಮ ’ಜನಗಳ ಮನ’ ಅಂಕಣದಲ್ಲಿ ಬರೆದಿದ್ದರು. "ಇಲ್ಲ, ನಾನು ಸರ್‍ ದೇಸಾಯಿಯವರನ್ನು ಭೇಟಿಯಾಗಿ ಮಾತುಕಥೆ ನಡೆಸಿದ್ದೇನೆ, ಸರ್‍ ದೇಸಾಯಿ ದಂಪತಿ ತಮ್ಮನ್ನು ಬಹಳ ಚೆನ್ನಾಗಿ ಸತ್ಕರಿಸಿದ್ದಾರೆ" ಎಂದೆನ್ನುತ್ತಾರೆ ಸಿತಾರಾಂ. ಇವರಲ್ಲಿ ಯಾರದ್ದು ಸತ್ಯ? ಎಂಬುದೇ ನನಗೆ ಗೊತ್ತಾಗುತ್ತಿಲ್ಲ. ಸತ್ಯ ತಿಳಿದುಕೊಳ್ಳಲು ನನ್ನದೆ ಆದ ಮೂಲಗಳೂ ಇಲ್ಲ.

ಭಟ್ರು ಬರೆದದ್ದು ಸುಳ್ಳೇ ಆಗಿದ್ದರೆ ಸಿತಾರಾಂಗೆ ಆ ಬಗ್ಗೇ ಸ್ಪಷ್ಟೀಕರಣ ಕೊಡುವ ಹಕ್ಕಿದೆ. ಆದರೆ ಭಟ್ರು ಪ್ಯಾರಾನಾಯ್ಡ್ ಕಾಯಿಲೆ ಹಿಡಿದವರಂತೆ ವರ್ತಿಸುತ್ತಿದ್ದಾರೆ ಎಂದು ಹೇಳುವ ಯಾವುದೇ ಹಕ್ಕು ಬಿವಿಸೀ ಯವರಿಗೆ ಇಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಭಟ್ರ ಕೊಡುಗೆ ಅಪಾರವಾದದ್ದು. ಅದು ಲೇಖನ, ಅಂಕಣ, ಪುಸ್ತಕ, ಅಥವಾ ಪತ್ರಿಕೆಯ ರೂಪದಲ್ಲಿರಬಹುದು. ಅದರರ್ಥ ಅವರು ಟೀಕಾತೀತರೆಂದಲ್ಲ! ಆದರೆ ಅವರ ಮೇಲೆ ಒಂದಿಷ್ಟು ಗೌರವವಿಟ್ಟುಕೊಂಡು ರಚನಾತ್ಮಕವಾಗಿ ಟೀಕಿಸಿದರೆ ಆ ರೀತಿ ಟೀಕಿಸುವವರಿಗೂ ಒಂದಿಷ್ಟು ಗೌರವ ಸಿಗಬಹುದೇನೋ...!

Sunday, April 5, 2009

ವರುಣ್ ಹೇಳಿದ್ದು ಸರಿಯಾಗಿದೆ ಕಾರಣ ಜಾತ್ಯತೀತರು ಅವರನ್ನು ಟೀಕಿಸುತ್ತಿದ್ದಾರೆ!

ರಾಜಕಾರಣ ’ಮೂರನ್ನು’ ಬಿಟ್ಟು ಸಾಕಷ್ಟು ವರ್ಷಗಳೇ ಸಂದಿವೆ. ರಾಜಕೀಯಕ್ಕೂ ಒಳ್ಳೆಯತನಕ್ಕೂ ಹಿಂದಿನಿಂದಲೂ ಎಣ್ನೆ ಸೀಗೆ ಸಂಬಂಧ. ಅದರ ಜನರೂ ಕನಿಷ್ಟ ಅಷ್ಟೋ ಇಷ್ಟೋ ಒಳ್ಳೆಯತನವನ್ನು ರಾಜಕಾರಣಿಗಳಿಂದ ನಿರೀಕ್ಷಿಸುತ್ತಿದ್ದರು. ಆದರೆ ಈಗ ಆ ನಿರೀಕ್ಷೆಯಿಂದಲೂ ದೂರ ಸರಿಯುತ್ತಿದ್ದಾರೆ.
ಹೌದು, ಇದಕ್ಕಿಂತ ಹೊಣೆಗೇಡಿತನ, ಅನೈತಿಕ ಮತ್ತು ಬೇಜವಾಬ್ದಾರಿ ರಾಜಕಾರಣ ಇರಲು ಸಾಧ್ಯಾನಾ? ಕೇಂದ್ರ ಸರ್ಕಾರ ೫೦,೦೦೦ ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ನರೇಂದ್ರ ಮೋದಿಯವರ ಅರೋಪದ ಬಗ್ಗೆ ಯಾರೂ ಉತ್ತರಿಸುತ್ತಿಲ್ಲ, ಅದೂ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವೂ ಅಗಿಲ್ಲ. ಆದರೆ ವರುಣ್ ಗಾಂಧಿ ಹೇಳಿದ ಆ ಒಂದು ಮಾತು...!
ವರುಣ್ ಗಾಂಧಿ ಹೇಳಿದ್ದದರು ಏನು? "ಹಿಂದೂಗಳ ವಿರುದ್ಧ ಎತ್ತುವ ಕೈಯನ್ನು ಕಡಿಯಬೇಕು" ಎಂದು ತಾನೆ? ಅದರಲ್ಲಿ ತಪ್ಪೇನಿದೆ? ಅದು ಮುಸ್ಲಿಮರದ್ದೆ ’ಕೈ’ಯೆಂದು ನಾವು ಹೇಗೆ ನಿರ್ಧಾರಕ್ಕೆ ಬರುವುದು? ಅದು ಮುಸ್ಲಿಮರದ್ದೆ ’ಕೈ’ ಎಂಬ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅವರು ಅಂದರೆ ಮುಸ್ಲಿಮರು ಹಿಂದೆ ಹಿಂದೂಗಳ ವಿರುದ್ಧ ’ಕೈ’ ಮಾಡಿರಬೇಕು ತಾನೆ? ಇದೆಲ್ಲದಕ್ಕಿಂತ ಮುಖ್ಯವಾಗಿ ಮುಸ್ಲಿಮರ ವಿರುದ್ಧವೇ ಈ ಮಾತು ವರುಣ್ ಬಾಯಿಂದ ಬಂದಿದೆ ಎಂದೆನ್ನುವುದಾದರೆ ಅದೂ ಮುಸ್ಲಿಮರು ಹಿಂದೂಗಳ ಮೇಲೆ ’ಕೈ’ಯೆತ್ತಿದ ನಂತರ ಅವರ ’ಕೈ’ ಕಡಿಯಬೇಕು ಎಂದು ಅವರು ಹೇಳಿದ್ದು ತಾನೆ? ಅಂದರೆ ಮುಸ್ಲಿಮರು ಹಿಂದೂಗಳ ವಿರುದ್ದ ’ಕೈ’ಯೆತ್ತದಿದ್ದಾರೆ ಅವರ ’ಕೈ’ ಕಡಿಯುವುದಿಲ್ಲ ಎಂಬುದೂ ಕೂಡ ಅಲ್ಲೇ ಸ್ಪಷ್ಟವಾಗಿದೆ. ಅದ್ದರಿಂದ ಇಲ್ಲಿ ರಾಷ್ಟ್ರದ ಭದ್ರತೆಗೆ ಹಾನಿಯಗುವಂತದ್ದು ಏನಿಲ್ಲ ತಾನೆ? ಆದರೆ ಹಿಂದೂಗಳ ವಿರುದ್ಧ ಮುಸ್ಲಿಮರೂ ’ಕೈ’ಯಿತ್ತಿದ್ದರೂ ಸುಮ್ಮನಿರಬೇಕು ಎಂದು ಬಯಸುವುದು ಯಾವ ಸೀಮೆ ನ್ಯಾಯ?
ವರುಣ್, ಯೂ ಅರ್‍ ರೈಟ್.
ವರುಣ್ ಹೇಳಿದ್ದು ಸರಿಯಾಗಿದೆ ಕಾರಣ ಕಾಂಗ್ರೇಸ್ ಮತ್ತು ಜಾತ್ಯತೀತರು ಅವರನ್ನು ಟೀಕಿಸುತ್ತಿದ್ದಾರೆ!
ವರುಣ್ ರ ಸೋದರಿ ಪ್ರಿಯಾಂಕ ವಾಧ್ರ ಭಗವದ್ಗೀತೆಯನ್ನು ಓದುವಂತೆ ವರುಣ್ ಗೆ ಸಲಹೆ ನೀಡಿದ್ದಾರೆ. ನನ್ನ ಪ್ರಶ್ನೆ, ಶ್ರೀಮತಿ ವಾಧ್ರ ಭಗವದ್ಗೀತೆಯನ್ನು ಓದಿದ್ದಾರಾ? ಓದಿದ್ದರೆ ಅದರಲ್ಲಿನ ಯಾವ ಅಂಶವನ್ನು ಪಾಲಿಸುತ್ತಿದ್ದಾರಂತೆ? ಅದರಲ್ಲಿ ಎಲ್ಲಾದರೂ ಧರ್ಮಕ್ಕೆ ಚ್ಯುತಿಯಾದಗ ಸುಮ್ಮನೇ ನೋಡುತ್ತಿರು ಎಂದಿದೆ ಅಂತೆಯಾ? ಭಗವದ್ಗೀತೆಯಾ ಮೂಲ ಇರುವುದೇ ಧರ್ಮ ಸಂಸ್ಥಾಪನೆಯ ಆಶಯದಲ್ಲಿ. ಅದು ಬಿಜೆಪಿ ಹೇಳುವ ಹಿಂದುತ್ವ ಅಲ್ಲದಿರಬಹುದು ಆದರೆ ಹಿಂದುತ್ವವೇ ಇಲ್ಲದಿದ್ದಾರೆ ಭಗವದ್ಗೀತೆ ಇರುತ್ತಾ? ವರುಣ್ ಗಾಂಧಿ ಉಳಿಸುತ್ತೇನೆ ಎಂದದ್ದು ಈ ಹಿಂದುತ್ವವನ್ನು, ಆ ಮೂಲಕ ಶ್ರೀಮತಿ ವಾಧ್ರ ಹೇಳುತ್ತಿರುವ ಭಗವದ್ಗೀತೆಯನ್ನು ಮತ್ತು ಅದರೊಂದಿಗೆ ಹೊಸೆದು ಕೊಂಡಿರುವ ಜೀವನ ಕ್ರಮವನ್ನು. ಆದರೆ ವಂಶದ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರಿಗೆ ಇದೆಲ್ಲ ಅರ್ಥವಾದರೆ ತಾನೆ?
ಇನ್ನು ಮಹಾಭಾರತದ ಶೈಲಿಯಲ್ಲೇ ಹೇಳಬೇಕಾದರೆ ಕಾಂಗ್ರೆಸ್ ದುಯೋ‌ðಧನನಂತೆ! ಅದು ಕ್ರಷ್ಣ ಮತ್ತು ಆಕ್ಷೋಹಿಣಿ ಸೈನ್ಯದ ಮಧ್ಯ ಆಯ್ಕೆ ಮಾಡುವುದು ಅಕ್ಷೋಹಿಣಿ ಸೈನ್ಯವನ್ನೇ! ಯಾಕೆಂದರೆ ಸಾವಿರಾರು ವೋಟ್ ಗಳಿವೆ ಅಲ್ವಾ?
ಇನ್ನು ವರುಣ್ ವಿರುದ್ಧ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಅಂದರೆ ಕಸಬ್, ರಶೀದ್ ಮಲ್ಬಾರಿ, ಅ‌ಫ್ಜಲ್ ಗುರುವಿಗೂ ವರುಣ್ ಗಾಂಧಿಗೂ ವ್ಯತ್ಯಾಸವೇ ಇಲ್ವಾ?
ಹಿಂದಿನ ಎನ್ ಡಿಎ ಸರ್ಕಾರ ರಚಿಸಿದ್ದ ಪೊಟಾ ಕಾಯ್ದೆ ದುರುಪಯೋಗವಾಗುತ್ತದೆ ಎಂದು ಬೊಬ್ಬಿರಿದವರು ಇಂದು ಎನ್ ಎಸ್ ಎಯನ್ನು ಸದುಪಯೋಗ ಪಡಿಸಿಕೊಳುತ್ತಿದ್ದಾರ? ತಮ್ಮ ದ್ವೇಷದ ರಾಜಕಾರಣಕ್ಕೆ ಅದನ್ನೆ ದಾಳವಾಗಿರಿಸಿಕೊಳುತ್ತಿರುವುದು ವಿಪರ್ಯಾಸವೆ ಸರಿ. ಇತ್ತ ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ ಎನ್ನುವವರು ಯಾವುದೇ ಹುದ್ದೆ ಅಲಂಕರಿಸಲು ಯೋಗ್ಯರಲ್ಲವೆಂದು ವರದಿ ಇದ್ದರೂ ನವೀನ್ ಚಾವ್ಲರನ್ನು ಮುಖ್ಯ ಹುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದು ಸಂವಿಧಾನ, ಪ್ರಜಾಪ್ರಭುತ್ವದ ಘನತೆ ಎತ್ತಿ ಹಿಡಿಯಲಾ? ಸದ್ದಾಂ ಹುಸೇನ್ ನ ಪೋಟೋ ಹಿಡಿದು ವೋಟ್ ಕೇಳುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದದ್ದ?
ಅದರೂ ಈ ಚುನಾವಣಾ ಸಂದರ್ಭದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹಿಂದುತ್ವ ವರುಣ್ ಗಾಂಧಿಯ ಹೇಳಿಕೆಗೆ ಸಿಕ್ಕ ಪ್ರತಿಫಲದಿಂದಾಗಿ ಪುನ: ಭೊರ್ಗರೆಯುವಂತಾಗಿದೆ. ನಾಳೆ ಹಿಂದುತ್ವದ ಬಗ್ಗೆ ಮಾತನಾಡಿದರೆ ನಮಗೂ ಎನ್ ಎಸ್‌ಎಯಡಿ ಶಿಕ್ಷೆ ಗ್ಯಾರಂಟಿ ಎಂಬ ಸ್ಥಿತಿ. ಬಿಜೆಪಿ ಇದನ್ನು ತನ್ನ ಅನುಕೂಲಕ್ಕಾಗಿ ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ತಾನು ಮಾಡಿದ ಖೆಡ್ಡಾಕ್ಕೆ ತಾನೇ ಬೀಳುತ್ತಿದೆಯೇನೋ ಅನಿಸುತ್ತಿದೆ.
ನನ್ನನ್ನು ಕಾಡುತ್ತಿರುವ ಬಹುದೊಡ್ಡ ಸಂಶಯವೆಂದರೆ ಈ ಇಡೀ ಪ್ರಕರಣ ವರುಣ್ ಗಾಂಧಿಯ ವಿರುದ್ಧದ ಸಂಚೋ ಅಥವಾ ಹಿಂದುತ್ವದ ವಿರುದ್ಧದ ಸಂಚೋ? ಕಾಲವೇ ಉತ್ತರಿಸಬೇಕಿದೆ.

Wednesday, April 1, 2009

ಅದೂ ನಮ್ಮ ಮೂಲ ನಂಬಿಕೆಯ ಪ್ರಶ್ನೆ ಬಂದಾಗ?

ಪ್ರಶ್ನೆ ಕಾಡುತ್ತಿದೆ. ಉತ್ತರ ಗೊತ್ತಿದ್ದರೂ ಶಾಲೆಯ ಕೆಂಪು ಕಣ್ಣಿನ ನ ಮೇಷ್ಟರ ಮುಂದೆ ನಿಂತು ತತ್ತರಿಸಿದ್ದ ಅಂದಿನ ವ್ಯೆಯುಕ್ತಿಕ ಭಯವಿಂದು ಒಂದು ಸಮಾಜದ ಭಯವಾಗಿದೆಯಾ? ಎಂದೆನಿಸುತ್ತದೆ. ನಾವ್ಯಕೆ ನಿದ್ದೆ ಮಾಡುತ್ತಿರುವವರ ಹಾಗೆ ನಟಿಸುತ್ತಿದ್ದೇವೆ? ಅದೂ ನಮ್ಮ ಮೂಲ ನಂಬಿಕೆಯ ಪ್ರಶ್ನೆ ಬಂದಾಗ?
ಲೆಕ್ಕಕ್ಕೆ ಸಿಗುವಂತೆ ೩,೦೦೦ ದೇಗುಲಗಳನ್ನು ಹಿಂದುಗಳು ಕಳೆದುಕೊಂಡಿದ್ದಾರೆ. ಒಂದು ಹಿಡಿ ಮಣ್ಣಿಗಾಗಿ ನಾವೇ ಅಣ್ಣ ತಮ್ಮಂದಿರು ಕತ್ತಿ ಹಿಡಿದು ಕಾಳಗ ಮಾಡುತ್ತೇವೆ. ಕೋಟ್
ಜೀವನಪೂರ್ತಿ ಅಲೆಯುತ್ತೇವೆ. ಅತ್ತ ಚೀನಾ ಇಡೀ ಅರುಣಾಚಲ ಪ್ರದೇಶವನ್ನೇ ತನ್ನೋಳಗೆ ನುಂಗಿಕೊಳ್ಳವ ಪ್ರಯತ್ನ ಮಾಡುತ್ತಿದೆ. ತಾಜ್ ಮಹಲ್ ಮೂಲತ; ಶಿವ ದೇವಾಲಯವಾಗಿತ್ತು ಎಂದಾಗ ಯಾವುದೇ ತನಿಖೆ ನಡೆಸದೆ ಆ ಸತ್ಯವನ್ನು ಮರೆಮಾಡಿ ನಮಗೆ ಹೇಳುವ ಬುದ್ದಿಮಾತು ಸಾಮಾಜಿಕ ಸೌಹಾರ್ದತೆ. ಆದರೆ ಎದು ಎಷ್ಟರವರೆಗೆ? ಪ್ರತಿಯೊಂದಕ್ಕೂ
ಕೊನೆಯಿದೆಯಂತೆ! ಆದರೆ ಹಿಂದುಗಳ ನಂಬಿಕೆಯ ಮೇಲಿನ ದಾಳಿಗೆ ಕೊನೆ ಯಾವಾಗ? ಇದು ಕೊನೆಗೊಳ್ಳುವಾಗ ನಮ್ಮ ಸಂಸ್ಕ್ರತಿಯೇ ಕೊನೆಯಾಗಿರಬಹುದಾ? ಯೋಚಿಸಲು ಹೊರಟರೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಏಳತ್ತಲೆ ಇರುತ್ತದೆ.
ಅನೇಕ ಬಾಹ್ಯ ಅಕ್ರಮಣಗಳಿಗೆ ಸಡ್ಡು ಹೊಡೆದು ಉಳಿದ ಸಂಸ್ಕ್ರತಿ ಭಾರತದ್ದು. ಈ ಆಕ್ರಮಣಗಳನ್ನು ನಾವು ಕರಗಿಸಿ ಅರಗಿಸಿಕೊಂಡಿದ್ದೇವೆ. ವಾಸ್ತವವಾಗಿ ಈ ದಾಳಿಗಳು ನಮ್ಮನ್ನು ಅಂತರಿಕವಾಗಿ ಬಲಿಷ್ಠಗೊಳ್ಳಲು ಸಹಾಯ ಮಾಡಿದವು. ನಮ್ಮಲ್ಲೊಂದು ಒಗ್ಗಟ್ಟು, ಹೋರಾಟದ ಕೆಚ್ಚು ಮತ್ತು ಸಮಾನತೆಯ ಅಗತ್ಯತೆಯನ್ನು ತೋರಿಸಿಕೊಟ್ಟಿತು. ಮೂಢನಂಬಿಕೆಗಳಿಂದ ಆಗುವ ಅನಾಹುತಗಳನ್ನು ತೆರೆದಿಟ್ಟಿತು. ತಕ್ಷಣ ಕಾರ್ಯಪ್ರವ್ರತ್ತವಾದ ಸಮಾಜ ಅದಕ್ಕೊಂದು ಮೂಲಿಕೆ ಕಂಡುಹಿಡಿಯಿತು. ಇದು ನಿಧಾನವಾಗಿ ಪರಿಣಾಮ ಬೀರುತ್ತಿರುವಾಗ ಬ್ರಿಟಿಷ್ ಆಕ್ರಮಣವಾಯಿತು. ಅವರು ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡಿದರು. ಪುನ: ಸಮಾಜ ಅಂಧಕಾರದತ್ತ ನಡೆದಾಗ ಹತ್ತಾರು ಧಾರ್ಮಿಕ ಮುಖಂಡರು ಸಮಾಜಕ್ಕೆ ಬೆಳಕು ನೀಡುವ ಪ್ರಯತ್ನ ಮಾಡಿದರು.ಇದರಿಂದ ಹಿಂದೂ ಸಮಾಜ ಪುನಶ್ಚೇತನಗೊಂಡಿತು.
ಕೆಲವು ಧರ್ಮಗಳು ಬದಲಾವಣೆಗೆ ಒಳಗಾಗುವುದೇ ಇಲ್ಲ. ಕೆಲವು ಸಂದರ್ಭಗಳಲ್ಲಿ ಇದು ಸಕಾರಾತ್ಮಕ ಎಂದೆನಿಸಿಕೊಳ್ಳುತ್ತದೆ. ಆದರೆ ಹಿಂದೂ ಸಮಾಜದಲ್ಲಿ ಬದಲಾವಣೆ ಬಹಳ ನಿಧಾನ ಪ್ರಕ್ರಿಯೆ. ಈ ಬದಲಾವಣೆಗಳು ಮುಡಿಯಿಂದ ಅಡಿಗೆ ಬರುವಾಗ ಶತಶತಮಾನಗಳೇ ಉರುಳಿ ಹೋಗಿರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಹಿಂದೂ ಧರ್ಮದ ಮೇಲೆ ಅಂತರಿಕ ಆಕ್ರಮಣ ಅಥವಾ ಮತಾಂತರವಾಗುತ್ತಿದೆ.
ನಮ್ಮ ಸಂಸ್ಕ್ರತಿಯ ಆಶಯಗಳನ್ನು ಉಳಿಸಿಕೊಂಡು ಕಾಲದ ಹರಿವಿನಲ್ಲಿ ಹಿಂದೂ ಧರ್ಮದೊಂದಿಗೆ ಸೇರಿಕೊಂಡ ಕಲ್ಮಶಗಳನ್ನು ಹೊರಗಟ್ಟುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕು. ಆಗ ವ್ಯವಸ್ಥೆಯಲ್ಲಿ ಆತ್ಮವಿಶ್ವಾಸ ಲಾಸ್ಯವಾಡುತ್ತದೆ. ನಿದ್ರೆ ಮಾಡುವವರಂತೆ ನಟಿಸಬೇಕಾದ ಜರೂರತ್ತು ಇರುವುದಿಲ್ಲ, ’ವೋಟ್ ಬ್ಯಾಂಕ್’ ರಾಜಕೀಯ ತನ್ನಿಂದ ತಾನೆ ಕೊನೆಗೊಳ್ಳುತ್ತದೆ. ಹಿಂದೂ
ಸಮಾಜವನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗೂ ಇ(ಬ)ರುವುದಿಲ್ಲ. ಆಗ ನೈಜಾರ್ಥದ ಸಮಾನತೆ ಒಡಮೂಡುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜ್ಯೆನ. ಬೌದ್ಧರು, ಪಾರ್ಸಿ. ಸಿಖ್ಖರು ಸೌಹಾರ್ದತೆಯಿಂದ ಬಾಳುತ್ತಾರೆ. ದೇಶದ ಉಳಿವಿಗಾಗಿ ಹೋರಾಡುತ್ತಾರೆ. ಅದು ’ಸಹಜ’ ಸಾಮರಸ್ಯ. ಮತಬ್ಯಾಂಕ್ ಗಳಾಗಿರುವ ಧರ್ಮಗಳನ್ನು ಓಲೈಕೆ ಮಾಡಿ ತಾವು ದೇಶದ ಜಾತ್ಯತೀತತೆ ಉಳಿಸುತ್ತಿದ್ದೇವೆ ಎನ್ನುವುದು ತೀರಾ ಅಸಹಜ ಮತ್ತು ಬಾಲಿಶ. ಇದು ಒಂದು ಧರ್ಮದ ಜನರಲ್ಲಿ ಭಯ ಮೂಡಿಸುತ್ತದೆ. ಭಯ ಇರುವಲ್ಲಿ ಅಪಾಯ, ದಂಗೆಯೇಳುವಿಕೆ, ಆಕ್ರಮಣಶೀಲತೆ ಮುಂತಾದ ಲಕ್ಷಣಗಳಿರುತ್ತವೆಯೇ ಹೊರತು ನಂಬಿಕೆ, ವಿಶ್ವಾಸ, ಪರಸ್ಪರ ಗೌರವ ಇರಲು ಸಾಧ್ಯನಾ? ಅದರಲ್ಲೂ ಬಹುಸಂಖ್ಯಾತರ ವಿರೋಧ ಕಟ್ಟಿಕೊಳ್ಳುವುದು ಪೆಟ್ರೋಲ್ ಸುರಿದು ಬೆಂಕಿ ಪೊಟ್ಟಣದಿಂದ ಬೆಂಕಿಕಡ್ಡಿ ಗೀಚುವುದು ಸಮ.